Kannada News Now

1.8M Followers

BREAKING : ಶಸ್ತ್ತಚಿಕಿತ್ಸೆಗೆ ಒಂದು ದಿನ ಮೊದಲೇ ತೀವ್ರ ಹೊಟ್ಟೆನೋವಿನಿಂದ ಶರದ್ ಪವಾರ್ ಆಸ್ಪತ್ರೆಗೆ ದಾಖಲು

30 Mar 2021.6:21 PM

ಮುಂಬೈ:ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ತೀವ್ರ ಹೊಟ್ಟೆ ನೋವು ಕಾರಣದಿಂದ ಇಂದು ಇಲ್ಲಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಳೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಯುವುದಿತ್ತು.

'ನಮ್ಮ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ನಾಳೆ ಎಂಡೋಸ್ಕೋಪಿ ಮತ್ತು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಬೇಕಿತ್ತು, ಆದರೆ ಹೊಟ್ಟೆಯಲ್ಲಿ ಮತ್ತೆ ಸ್ವಲ್ಪ ನೋವು ಅನುಭವಿಸುತ್ತಿರುವುದರಿಂದ ಅವರನ್ನು ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ' ಎಂದು ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮಾಹಿತಿ ನೀಡಿದರು.

ಕೊರೋನಾ ಸೋಂಕಿತ ಆಸ್ಪತ್ರೆಯಲ್ಲಿ ನೇಣಿಗೆ ಶರಣು

ಪಿತ್ತಕೋಶದ ಸಮಸ್ಯೆ ಇದೆ ಎಂದು ವೈದ್ಯರು ಪತ್ತೆ ಹಚ್ಚಿದ ನಂತರ ಶರದ್ ಪವಾರ್ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮಲಿಕ್ ನಿನ್ನೆ ಹೇಳಿದ್ದರು 'ನಮ್ಮ ಪಕ್ಷದ ಅಧ್ಯಕ್ಷ ಶರದ್ ಪವಾರ್ ಸಾಹೇಬ್ ಅವರು ನಿನ್ನೆ ಸಂಜೆ ಹೊಟ್ಟೆಯಲ್ಲಿ ನೋವಿನಿಂದ ಸ್ವಲ್ಪ ಆತಂಕಕ್ಕೊಳಗಾಗಿದ್ದರು ಮತ್ತು ಆದ್ದರಿಂದ ಅವರನ್ನು ತಪಾಸಣೆಗಾಗಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರೋಗನಿರ್ಣಯದ ನಂತರ ಅವರ ಪಿತ್ತಕೋಶದಲ್ಲಿ ಸಮಸ್ಯೆ ಇದೆ ಎಂದು ಬೆಳಕಿಗೆ ಬಂದಿದೆ ಎಂದು ನವಾಬ್ ಮಲಿಕ್ ಸೋಮವಾರ ಟ್ವೀಟ್ ಮಾಡಿದ್ದರು. ಅವರನ್ನು ಮಾರ್ಚ್ 31, 20 ರಂದು ಆಸ್ಪತ್ರೆಗೆ ದಾಖಲಿಸಲಾಗುವುದು ಮತ್ತು ಎಂಡೋಸ್ಕೋಪಿ ಮತ್ತು ಸರ್ಜರಿ ನಡೆಸಲಾಗುವುದು. ಆದ್ದರಿಂದ ಮುಂದಿನ ಸೂಚನೆ ಬರುವವರೆಗೂ ಅವರ ಎಲ್ಲಾ ಕಾರ್ಯಕ್ರಮಗಳು ರದ್ದಾಗುತ್ತವೆ' ಸಚಿವರು ಹೇಳಿದ್ದರು.

ಡ್ಯಾನ್ಸ್ ದಿವಾನೆ ಶೋನ 18 ಸಿಬ್ಬಂದಿಗೆ ಕೊರೋನಾ ಸೋಂಕು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags