
ಇರೋಡ್: 21 ವರ್ಷದ ಗರ್ಭಿಣಿ ಮಹಿಳೆ ಕೆಲ ದಿನಗಳ ಹಿಂದೆ ತಮಿಳುನಾಡಿನ ಹಳ್ಳಿಯೊಂದರ ಗ್ರಾಮ ಆಡಳಿತಾಧಿಕಾರಿ ಎದುರು ಗಂಡನನ್ನು ಕೊಂದು ಶರಣಾಗಿರುವ ಘಟನೆ ನಡೆದಿದೆ. ಹೌದು, ಪ್ರತಿನಿತ್ಯ ಸೆಕ್ಸ್ ಮಾಡು ಎಂದು ತನ್ನ ಗಂಡನ್ನೇ ಮಹಿಳೆ ಕೊಂದಿರುವುದಾಗಿ ಗ್ರಾಮ ಅಡಳಿತಾಧಿಕಾರಿ ಬಳಿ ಹೇಳಿಕೊಂಡಿದ್ದು, ಕೂಡಲೇ ಆ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಕ್ಕಲಿಗರ ಮೀಸಲಾತಿ ಕಡಿತಗೊಳಿಸಿದ್ದು ದೇವೇಗೌಡರು - ಮಾಜಿ ಸಚಿವ ಎ.ಮಂಜು ಗಂಭೀರ ಆರೋಪ
ಘಟನೆ ಹಿನ್ನಲೆ: ಪೆರಿಯಮೊಳಪಾಳ್ಯಂ ಗ್ರಾಮದ ಎ ಮಿಥಿಲಿ ಎನ್ನುವವರು ಆಂಧಿಯೂರು ಸಮೀಪದ ಕಲಿಯಣ್ಣತೋಟದ ನಿವಾಸಿ ಎನ್.ನಂದ ಕುಮಾರ್ (33) ಅವರನ್ನು ಎಂಟು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಕೊಲೆಯಾದ ರೈತ ನಂದ ಕುಮಾರ್ ಎರಡು ವರ್ಷಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದು, ನಾಲ್ಕು ತಿಂಗಳ ಒಳಗೆ ವಿಚ್ಛೇದನ ಪಡೆದಿದ್ದ ಬಳಿಕ ಮಿಥಿಲಿ ಮದುವೆಯಾಗಿದ್ದಾರೆ. ಐದು ತಿಂಗಳ ಹಿಂದೆ ಮಿಥಿಲಿ ಗರ್ಭಿಣಿಯಾಗಿದ್ದಾಳೆ. ಇದಾದ ನಂತರವೂ ನಂದ ಕುಮಾರ್ ತನ್ನೊಂದಿಗೆ ಲೈಂಗಿಕ ಕ್ರಿಯೆ ಯಲ್ಲಿ ತನ್ನನ್ನು ಒತ್ತಾಯಪೂರ್ವಕವಾಗಿ ಬಲವಂತದಿಂದ ಹಿಂಸಿಸುತ್ತಿದ್ದ ಹೀಗಾಗಿ, ಜನವರಿ 28ರಂದು ಕ್ರಿಮಿನಾಶಕ ತುಂಬಿದ ಆಹಾರ ನೀಡಲು ನಿರ್ಧರಿಸಿದ್ದೆ ಅಂಥಿಯೂರ್ ಪೊಲೀಸ್ ಠಾಣೆ ಸಿಬ್ಬಂದಿ ಎಸ್ ರವಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
BREAKING : ಮಹಾರಾಷ್ಟ್ರದ 'ಅಮರಾವತಿ ಜಿಲ್ಲೆ'ಯಲ್ಲಿ ಮತ್ತೆ ಒಂದು ವಾರ 'ಲಾಕ್ ಡೌನ್' ಜಾರಿ
, ಜನವರಿ 31ರಂದು ನಂದ ಕುಮಾರ್ ಆಂಡಿಯೂರ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆ.15ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.ಸಾವಿನ ನಂತರ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ಮಧ್ಯೆ, ಮಿಥಿಲಿ ಶರಣಾಗಿ ತನ್ನ ತಪ್ಪನ್ನು ಒಪ್ಪಿಕೊಂಡಳು.ಆಕೆಯ ಹೇಳಿಕೆ ಆಧರಿಸಿ ಪೊಲೀಸರು ಮಿಥಿಲಿಯನ್ನು ಬಂಧಿಸಿ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.