Dailyhunt Logo
  • Light mode
    Follow system
    Dark mode
    • Play Story
    • App Story
ಕ್ರಿಕೆಟ್‌́ಗೆ ಬಂದಿದ್ದೇ ಶಾಲೆ ತಪ್ಪಿಸಿಕೊಳ್ಳಲು, ದೇಶಕ್ಕಾಗಿ ಅಲ್ಲ: ಕಪಿಲ್ ದೇವ್

ಕ್ರಿಕೆಟ್‌́ಗೆ ಬಂದಿದ್ದೇ ಶಾಲೆ ತಪ್ಪಿಸಿಕೊಳ್ಳಲು, ದೇಶಕ್ಕಾಗಿ ಅಲ್ಲ: ಕಪಿಲ್ ದೇವ್

AIN Kannada 1 day ago

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಕ್ರಿಕೆಟ್ ಜೀವನದ ಕುರಿತು ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ತಾವು ದೇಶಕ್ಕಾಗಿ ಅಲ್ಲ, ತಮ್ಮ ವೈಯಕ್ತಿಕ ಸಂತೋಷಕ್ಕಾಗಿ ಕ್ರಿಕೆಟ್ ಆಡಿದ್ದೆ ಎಂದು ಅವರು ಹೇಳಿದ್ದಾರೆ.

ಚೆನ್ನೈನ ಮದ್ರಾಸ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕಪಿಲ್ ದೇವ್, ಫೆಡರಲ್ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ಯಾಮ್ ಶ್ರೀನಿವಾಸನ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಕ್ರಿಕೆಟ್ ಆಡಿದ್ದು ನನ್ನ ಖುಷಿಗಾಗಿ. ಕ್ರಿಕೆಟ್ ಆಡುವುದರಿಂದ ನನಗೆ ಸಂತೋಷ ಸಿಗುತ್ತಿತ್ತು. ಯಾರಾದರೂ ನಾನು ದೇಶಕ್ಕಾಗಿ ಕ್ರಿಕೆಟ್ ಆಡಿದ್ದೇನೆ ಎಂದು ಹೇಳಿದರೆ ಅದು ಸಂಪೂರ್ಣ ಸತ್ಯವಲ್ಲ. ನಾವು ಮೊದಲು ನಮಗಾಗಿ ಆಟ ಆಡುತ್ತೇವೆ. ಅದೇ ವಾಸ್ತವ" ಎಂದು ಕಪಿಲ್ ದೇವ್ ಹೇಳಿದರು.

ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, ಓದಿನಲ್ಲಿ ತಾವು ಹೆಚ್ಚು ಆಸಕ್ತಿ ಹೊಂದಿರಲಿಲ್ಲ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.

"ನಾನು ಓದಿನಲ್ಲಿ ತುಂಬಾ ದುರ್ಬಲನಾಗಿದ್ದೆ. ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಕ್ರೀಡೆಗಳು ನನಗೆ ಸಹಾಯ ಮಾಡುತ್ತಿದ್ದವು. ಫುಟ್‌ಬಾಲ್ ಆಡಿದರೆ ಕೇವಲ ಒಂದು ಗಂಟೆ ತರಗತಿಯಿಂದ ದೂರ ಇರಬಹುದಿತ್ತು. ಆದರೆ ಕ್ರಿಕೆಟ್ ಆಡಿದರೆ ಎರಡು-ಮೂರು ದಿನಗಳ ಕಾಲ ಕ್ಲಾಸ್ ತಪ್ಪಿಸಿಕೊಳ್ಳುವ ಅವಕಾಶ ಸಿಗುತ್ತಿತ್ತು. ಅದಕ್ಕಾಗಿಯೇ ನಾನು ಕ್ರಿಕೆಟ್ ಕಡೆ ಹೆಚ್ಚು ಆಕರ್ಷಿತನಾದೆ" ಎಂದು ಅವರು ಹೇಳಿದರು.

ತಮ್ಮ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ಕಪಿಲ್ ದೇವ್, ತಾವು ಒಂದು ದಿನ ಭಾರತ ತಂಡವನ್ನು ಪ್ರತಿನಿಧಿಸುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದರು. "ನಾನು ಭಾರತ ತಂಡದ ಪರ ಆಡುತ್ತೇನೆ ಎಂಬ ಕನಸು ಕೂಡ ಆರಂಭದಲ್ಲಿ ಇರಲಿಲ್ಲ. ಕೇವಲ ಆಟವನ್ನು ಆನಂದಿಸುತ್ತಾ ಆಡುತ್ತಿದ್ದೆ. ನಂತರ ಅವಕಾಶಗಳು ಬಂದವು, ಅದನ್ನು ಬಳಸಿಕೊಂಡೆ" ಎಂದು ಅವರು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: AIN Live News