ಬೆಂಗಳೂರು : ಎರಡನೇ ಅಲೆಯ ಕೊರೊನಾ ಎಲ್ಲೆಡೆ ರಣಕೇಕೆ ಹಾಕಿತ್ತಿದ್ದು, ಸೋಂಕು ಹಬ್ಬುವಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿ ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ. ಲಾಕ್ಡೌನ್ ಘೋಷಣೆ ಆಗುತ್ತಿದ್ದಂತೆ ನಗರ ಪೋಲಿಸರು ಜನರು ಸುಖಾ ಸುಮ್ಮನೆ ಮನೆಯಿಂದ ಹೊರಗೆ ಬಾರದಂತೆ ತಡೆಯಲು ಹಲವು ನಿಯಮಗಳನ್ನು ಸೂಚಿಸಿದ್ದರು.
ನಿನ್ನೆಯ ರಂಜಾನ್ ಹಾಗೂ ಬಸವ ಜಯಂತಿ ಹಿನ್ನಲೆ ಜನರು ಓಡಾಡದಂತೆ ಮುಂಚಿತವಾಗಿಯೇ ಸೂಚನೆ ಕೊಟ್ಟಿದ್ದರು. ಲಾಕ್ಡೌನ್ ಸೂಚನೆಗಳನ್ನು ಧಿಕ್ಕರಿಸಿ ರಸ್ತೆಗಿಳಿದವರ ಮೇಲೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಪ್ರಕಟಣೆ ಬಿಡುಗಡೆ ಮಾಡಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 8ರವರೆಗೆ ಕಾರ್ಯಾಚರಣೆ ನಡೆಸಿ 5ನೇ ದಿನದ ಲಾಕ್ಡೌನ್ನಲ್ಲಿ ಒಟ್ಟು 322 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್ಡೇಟ್ಸ್ ಓದಿ
Share
Continue Reading

