ಅಪರಾಧ ಸುದ್ದಿ
ನ್ಯಾಯಾಲಯದ ವಾರಂಟ್ ಉಲ್ಲಂಘನೆ ;ಸೌರ ಹಗರಣದ ಆರೋಪಿ ಸರಿತಾ ನಾಯರ್ ಬಂಧನ
ಕೇರಳ : ಸೌರ ಹಗರಣದ ಆರೋಪಿ ಸರಿತಾ ಎಸ್ ನಾಯರ್ ನ್ಯಾಯಾಲಯದ ವಾರಂಟ್ ಉಲ್ಲಂಘಿಸಿದ ಕಾರಣ ಆಕೆಯನ್ನು ಬಂಧಿಸಲಾಗಿದೆ. ಪ್ರಕರಣ ಕುರಿತಾಗಿ ನ್ಯಾಯಾಲಯಕ್ಕೆ ಹಾಜರಾಗಲು ಕೋರ್ಟ್ ವಾರಂಟ್ ಹೊರಡಿಸಿತ್ತು. ಆದರೆ, ಆಕೆ ವಾರಂಟ್ ಉಲ್ಲಂಘಿಸಿ, ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹಾಗಾಗಿ ಆಕೆಯನ್ನು ಕೊಯಿಕ್ಕೋಡ್ನ ಕಸಾಬಾ ಪೊಲೀಸರು ಬಂಧಿಸಿದ್ದಾರೆ.
ಕೋಯಿಕ್ಕೋಡ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ರ ಆದೇಶದಂತೆ ಈ ಬಂಧನ ಮಾಡಲಾಗಿದೆ. ಕೋಯಿಕ್ಕೋಡ್ ಮೂಲದ ಅಬ್ದುಲ್ ಮಜೀದ್ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಆಕೆಗೆ ವಾರಂಟ್ ಹೊರಡಿಸಿತ್ತು.
ಏನಿದು ಪ್ರಕರಣ :
ಕೋಯಿಕ್ಕೋಡ್ ಮೂಲದ ಅಬ್ದುಲ್ ಮಜೀದ್ ಅವರಿಗೆ ಸೌರಫಲಕಗಳನ್ನು ಹಾಕಿ ಕೊಡುತ್ತೇವೆ ಎಂದು ಹೇಳಿ 42.7 ಲಕ್ಷ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ಸೌರ ಕಂಪನಿಯು ಸಿಲುಕಿಕೊಂಡಿದೆ. ಕಂಪನಿಯು ಮಜೀದ್ ಮನೆ ಮತ್ತು ಕಚೇರಿಯಲ್ಲಿ ಸೌರ ಫಲಕವನ್ನು ಸ್ಥಾಪಿಸಿಕೊಡುತ್ತೇವೆ ಎಂದು ಹೇಳಿ ವಂಚನೆ ಮಾಡಿದೆ.
ಅಲ್ಲದೇ 42.7 ಲಕ್ಷ ರೂ ಹಣ ಮುಂಗಡ ಪಡೆದು ಮೋಸ ಮಾಡಿದ್ದಾರೆ ಎಂದು ಮಜೀದ್ ಆರೋಪಿಸಿದ್ದಾರೆ. ನಾಯರ್ ಮಜೀದ್ನಿಂದ 42.7 ಲಕ್ಷ ರೂಪಾಯಿ ಹಣ ಪಡೆದ ಆರೋಪವಿದೆ. ಈ ಪ್ರಕರಣವನ್ನು ಮಾರ್ಚ್ 23 ರಂದು ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು.
Share
Continue Reading