Dailyhunt
ಮೈಸೂರು: 25 ಅಡಿ ಆಳದ ಬಾವಿಯಲ್ಲಿದ್ದ ಕೊಳಕು ಮಂಡಲ ಹಾವು ರಕ್ಷಣೆ

ಮೈಸೂರು: 25 ಅಡಿ ಆಳದ ಬಾವಿಯಲ್ಲಿದ್ದ ಕೊಳಕು ಮಂಡಲ ಹಾವು ರಕ್ಷಣೆ

ಮೈಸೂರು: 25 ಅಡಿ ಆಳದ ಬಾವಿಯಲ್ಲಿದ್ದ ಕೊಳಕು ಮಂಡಲ ಹಾವನ್ನು ಮೂವರು ಉರಗ ರಕ್ಷಕರು ರಕ್ಷಿಸಿದ್ದಾರೆ.

ನಗರದ ಜಾಕಿ ಕ್ವಾಟ್ರಸ್‌ನ ಪೊಲೀಸ್ ಲೇಔಟ್‌ನಲ್ಲಿರುವ ಮಸೀದಿ ಬಳಿ ಅನತಿ ದೂರದಲ್ಲಿದ್ದ ಬಾವಿಯಲ್ಲಿ ಇದ್ದ ಹಾವನ್ನು ಉರಗ ತಜ್ಞರಾದ ಮೊಹಮ್ಮದ್‌ ಉಮರ್‌ ಶರೀಫ್‌, ಮೋಹನ್‌ ಕುಮಾರ್‌, ಕೋಬ್ರಾ ಕುಮಾರ್‌ ರಕ್ಷಿಸಿದ್ದಾರೆ.

ಬಾವಿಯಲ್ಲಿ ಹಾವನ್ನು ಕಂಡ ಸ್ಥಳೀಯರು ಇವರಿಗೆ ಫೋನ್‌ ಕರೆ ಮಾಡಿ ತಿಳಿಸಿದ್ದಾರೆ. ಏ.22ರಂದು ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಲಾಗಿದೆ.

ಉರಗ ತಜ್ಞ ಮೊಹಮ್ಮದ್‌ ಉಮರ್‌ ಶರೀಫ್‌- ಫೋನ್‌ ನಂಬರ್‌ 7829878980 ಸಂಪರ್ಕಿಸಬಹುದು.

Dailyhunt
Disclaimer: This content has not been generated, created or edited by Dailyhunt. Publisher: Andolana