ಬಳ್ಳಾರಿ, 31 ಜುಲೈ (ಹಿ.ಸ.)
ಆಯಂಕರ್: ಮೀನುಗಾರಿಕೆ ಇಲಾಖೆ ವತಿಯಿಂದ ೨೦೨೬-೨೭ ನೇ ಸಾಲಿನ ಕೃಷಿಹೊಂಡ ಮತ್ತು ಸ್ವಂತ ಕೊಳಗಳಿರುವ ರೈತರಿಗೆ ಮೀನು ಕೃಷಿ ಕೈಗೊಳ್ಳಲು ಸರ್ಕಾರಿ ಧರದಂತೆ ಮೀನುಮರಿಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಬಳ್ಳಾರಿ ತಾಲೂಕಿನ ಮೋಕ ಮೀನುಮರಿ ಪಾಲನ ಕೇಂದ್ರದಲ್ಲಿ ಕಾಟ್ಲ ಮತ್ತು ರೋಹು ಬಲಿತ ಬಿತ್ತನೆ ಮೀನುಮರಿಯನ್ನು ಮಾರಟ ಮಾಡಲಾಗುತ್ತಿರುವುದರಿಂದ ಆಸಕ್ತರು ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಹಿರಿಯ ಮೇಲ್ವಿಚಾರಕ ಜೆ.ಎಂ.ವಿಶ್ವನಾಥ್ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
