ಹೊಸದಿಗಂತ ಡಿಜಿಟಲ್ ಡೆಸ್ಕ್:ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸ್ ಗಸ್ತು ವಾಹನಕ್ಕೆ ದಂಡ ವಿಧಿಸಿದ ಮೋಟಾರು ವಾಹನ ಇಲಾಖೆ ಜಾರಿ ವಿಭಾಗದ ಇನ್ಸ್ಪೆಕ್ಟರ್ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಡಕ್ಕಂಚೇರಿ ಸಮೀಪ ರಾತ್ರಿ ತಪಾಸಣೆ ನಡೆಸುತ್ತಿದ್ದ ವೇಳೆ, ಪೊಲೀಸ್ ಗಸ್ತು ವಾಹನವನ್ನು ತಡೆದು ಅದರ ವಿರುದ್ಧ ವಿಮೆ ಮತ್ತು ಮಾಲಿನ್ಯ ನಿಯಂತ್ರಣ ದಾಖಲೆಗಳ ಕೊರತೆ ಇದೆ ಎಂದು ಹೇಳಿ ಸುಮಾರು 4,000 ರೂ. ದಂಡ ವಿಧಿಸಲಾಗಿತ್ತು. ನಂತರ ಪೊಲೀಸರು ವಾಹನಕ್ಕೆ ಮಾನ್ಯ ವಿಮೆ ಇತ್ತು, ಆದರೆ ಪಿಯುಸಿ ಪ್ರಮಾಣಪತ್ರ ತಕ್ಷಣ ಲಭ್ಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಬಳಿಕ, ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ತಡೆದು ಅಧಿಕೃತ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಇನ್ಸ್ಪೆಕ್ಟರ್ ಪಿ.ವಿ. ಬಿಜು ವಿರುದ್ಧ ವಡಕ್ಕಂಚೇರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬೆಳವಣಿಗೆ ಎರಡು ಸರ್ಕಾರಿ ಜಾರಿ ಇಲಾಖೆಗಳ ನಡುವಿನ ಅಪರೂಪದ ವಿವಾದಕ್ಕೆ ಕಾರಣವಾಗಿದೆ.
ವಯನಾಡು ಭೂಕುಸಿತ: ಕೇರಳ ಸಿಎಂ ಜೊತೆ ಅಮಿತ್ ಶಾ ಮಾತುಕತೆ, ಕೇಂದ್ರದ ಸಂಪೂರ್ಣ ನೆರವಿನ ಭರವಸೆ
ಪ್ರಕರಣದ ಹಿನ್ನೆಲೆ ಹಾಗೂ ದಂಡ ವಿಧಿಸಿದ ಕ್ರಮ ಎರಡನ್ನೂ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

