Posts
ಮನೀಶ್ ಪಾಂಡೆಗೆ ಒಂದೂ ಪಂದ್ಯ ನೀಡಿಲ್ಲವಾದರೆ ಇನ್ನೇಕೆ ತಂಡದಲ್ಲಿ ಇಟ್ಟುಕೊಂಡಿದ್ದೀರಿ?

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಒಂದರಲ್ಲೂ ಕನ್ನಡಿಗ ಮನೀಶ್ ಪಾಂಡೆ ಅವರಿಗೆ ಭಾರತ ತಂಡದ ಅಂತಿಮ 11 ರಲ್ಲಿ ಅವಕಾಶ ನೀಡದ ಬಗ್ಗೆ ಟೀಮ್ ಇಂಡಿಯಾ ಮಾಜಿ ವೇಗಿ ದೊಡ್ಡ ಗಣೇಶ್ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದರಿಂದ ಭಾರತ ತಂಡ ಈಗಾಗಲೇ 0-2 ಅಂತರದಲ್ಲಿ ಏಕದಿನ ಸರಣಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ. ಮೊದಲ ಎರಡು ಹಣಾಹಣಿಗಳಲ್ಲಿ ಬೆಂಚ್ ಕಾದಿದ್ದ ಮನೀಶ್ ಪಾಂಡೆಗೆ ಮೂರನೇ ಪಂದ್ಯದಲ್ಲಿ ಅವಕಾಶ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವಕಾಶ ಸಿಗಲೇ ಇಲ್ಲ.ಮೊದಲನೇ ಪಂದ್ಯದಲ್ಲಿ 375 ರನ್ಗಳ ಗುರಿ ಹಿಂಬಾಲಿಸಿದ್ದ ಭಾರತ ತಂಡ 66 ರನ್ಗಳಿಂದ ಸೋಲು ಅನುಭವಿಸಿತ್ತು. ನಂತರ, ಮಾಡು ಇಲ್ಲವೆ ಮಡಿ ಪಂದ್ಯದಲ್ಲಿಯೂ 390 ರನ್ಗಳ ಚೇಸ್ ಮಾಡಲು ಮುಂದಾದ ಟೀಮ್ ಇಂಡಿಯಾ 51 ರನ್ಗಳಿಂದ ಪರಾಭವಗೊಂಡಿತ್ತು.
ಆ ಮೂಲಕ ಓಡಿಐ ಸರಣಿ ಕಳೆದುಕೊಂಡಿದ್ದ ಭಾರತ ತಂಡದಲ್ಲಿ ಮೂರನೇ ಪಂದ್ಯದಲ್ಲಿ ನಾಲ್ಕು ಮಂದಿ ಹೊಸಬರಿಗೆ ಅವಕಾಶ ನೀಡಲಾಯಿತು.ಮಯಾಂಕ್ ಅಗರ್ವಾಲ್ ಸ್ಥಾನಕ್ಕೆ ಶುಭಮನ್ ಗಿಲ್ಗೆ ಅವಕಾಶ ನೀಡಿದರೆ, ಮೊಹಮ್ಮದ್ ಶಮಿ ಸ್ಥಾನಕ್ಕೆ ಟಿ ನಟರಾಜನ್, ಯುಜ್ವೇಂದ್ರ ಚಹಲ್ ಜಾಗಕ್ಕೆ ಕುಲ್ದೀಪ್ ಯಾದವ್ ಹಾಗೂ ನವದೀಪ್ ಸೈನಿ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಲಾಯಿತು. ಆದರೆ, ಮನೀಶ್ ಪಾಂಡೆ ಕೊನೆಯ ಪಂದ್ಯದಲ್ಲಿಯೂ ಬೆಂಚ್ ಕಾಯಬೇಕಾಯಿತು.ಮನೀಶ್ ಪಾಂಡೆಗೆ ಮೂರನೇ ಏಕದಿನ ಪಂದ್ಯದಲ್ಲಿ ಅವಕಾಶ ನೀಡದ ಬಗ್ಗೆ ಕರ್ನಾಟಕ ಮಾಜಿ ಆಟಗಾರ ದೊಡ್ಡ ಗಣೇಶ್ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಪಂದ್ಯಗಳಲ್ಲಿ ಬೆಂಚ್ ಕಾಯುವ ಮೂಲಕ ಮನೀಶ್ ಪಾಂಡೆ ತಮ್ಮ ವೃತ್ತಿ ಜೀವನವನ್ನು ಅಂತ್ಯಗೊಳಿಸಬೇಕೆ ಎಂದು ಪ್ರಶ್ನಿಸಿದ್ದಾರೆ.ಮನೀಶ್ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಹೊತ್ತಿಗೆ ಅವರು ಹೆಚ್ಚಿನ ಸಂಖ್ಯೆಯ ಪಂದ್ಯಗಳಲ್ಲಿ ಬೆಂಚ್ ಕಾದಿರುವ ವಿಷಯದಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಲಿದ್ದಾರೆ," ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.ಕನಿಷ್ಠ ಒಂದು ಪಂದ್ಯದಲ್ಲಿಯೂ ಮನೀಶ್ ಪಾಂಡೆಗೆ ಅವಕಾಶ ನೀಡದ ಮೇಲೆ, ಮತ್ತೆ ಯಾವ ಪುರುಷಾರ್ಥಕ್ಕೆ ಅವರನ್ನು ಹದಿನೈದು ಮಂದಿಯ ತಂಡದಲ್ಲಿ ಇಟ್ಟುಕೊಂಡಿದ್ದೀರಿ? ಕಳೆದ ಎರಡು ವರ್ಷಗಳಲ್ಲಿ ಅವರು ಆಡಿರುವುದು ಕೇವಲ ಮೂರು ಪಂದ್ಯಗಳು ಮಾತ್ರ," ಎಂದು ಬೇಸರ ವ್ಯಕ್ತಪಡಿಸಿದರು.ಮನೀಶ್ ಪಾಂಡೆ ಅವರನ್ನು ಟೀಮ್ ಇಂಡಿಯಾ ನಿಭಾಯಿಸುವುದು ನಿಜಕ್ಕೂ ಅಸ್ತವ್ಯಸ್ತವಾಗಿದೆ.
ಈ ವರ್ಷದ ಆರಂಭದಲ್ಲಿ, ಅವರು ಎರಡು ವರ್ಷಗಳಲ್ಲಿ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದರು, ನಂತರ ಇನ್ನೂ ಎರಡು ಪಂದ್ಯಗಳನ್ನು ಆಡಿದರು. ಆದರೆ ಆಸ್ಟ್ರೇಲಿಯಾಕ್ಕೆ ಬರುವ ಮೊದಲು ಈ ವರ್ಷ ಭಾರತ ಆಡಿದ ಆರು ಏಕದಿನ ಪಂದ್ಯಗಳಲ್ಲಿ ಮೂರರ ಹೊರತಾಗಿಯೂ, ಮನೀಶ್ ಪಾಂಡೆ ಒಂದೇ ಒಂದು ಪಂದ್ಯವನ್ನು ಪಡೆಯಲಿಲ್ಲ. 31 ನೇ ವಯಸ್ಸಿನ ಪಾಂಡೆ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇನ್ನೂ ಅವಕಾಶ ಜಾಸ್ತಿ ಇಲ್ಲ ಎಂದರು.