Dailyhunt
ಅಮಾನತುಗೊಂಡಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕರ್ತವ್ಯಕ್ಕೆ ಮರಳಬಹುದು; ಶ್ರೀರಾಮುಲು

ಅಮಾನತುಗೊಂಡಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ಕರ್ತವ್ಯಕ್ಕೆ ಮರಳಬಹುದು; ಶ್ರೀರಾಮುಲು

ಬೆಳಗಾವಿ: ಮುಷ್ಕರದ ವೇಳೆ ಅಮಾನತುಗೊಂಡಿದ್ದ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಮಾನತುಗೊಂಡ ನೌಕರರು ಕರ್ತವ್ಯಕ್ಕೆ ಮರಳಬಹುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಸಾರಿಗೆ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಶ್ರೀರಾಮುಲು ಹೇಳಿದ್ದಾರೆ.

ಸೆಪ್ಟೆಂಬರ್ 27 ರಂದು ನಡೆಯುವ ಭಾರತ ಬಂದ್ ಗೆ ಸಾರಿಗೆ ಸಂಸ್ಥೆಗಳ ಬೆಂಬಲ ಇರುವುದಿಲ್ಲ. ಎಂದಿನಂತೆ ಬಸ್ ಸಂಚಾರ ಇರಲಿದೆ. ರೈತರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಮುಂದಾಗಿದೆ. ನಿಜವಾದ ರೈತರು ನಮ್ಮ ಪರವಾಗಿದ್ದಾರೆ. ಬಿಳಿ ಶರ್ಟ್ ತೊಟ್ಟ ರೈತರು ಮಾತ್ರ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada Dunia