Thursday, 29 Apr, 4.42 am ಕನ್ನಡದುನಿಯಾ

ಹೋಮ್
ಚಿಕ್ಕ ಸ್ಪಟಿಕಕ್ಕಿದೆ ವಾಸ್ತು ದೋಷ ಕಳೆದು ಅದೃಷ್ಟ ಬದಲಾಯಿಸುವ ಶಕ್ತಿ

ಕಷ್ಟಪಟ್ಟು ದುಡಿದ್ರೂ ಕೆಲವೊಮ್ಮೆ ತಕ್ಕ ಫಲ ಸಿಗುವುದಿಲ್ಲ. ಅದೃಷ್ಟ ಚೆನ್ನಾಗಿಲ್ಲ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದೇವರನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸ್ತಾರೆ. ತಪ್ಪು ದಾರಿ ತುಳಿದು ಅನೇಕರು ಹಣ ಸಂಪಾದಿಸಲು ಮುಂದಾಗ್ತಾರೆ. ಇನ್ಮುಂದೆ ಶ್ರಮಕ್ಕೆ ತಕ್ಕ ಫಲ ಸಿಕ್ಕಿಲ್ಲ ಎಂದು ಗೋಳಾಡಬೇಡಿ. ಮನೆಯಲ್ಲಿ ಯಾವುದೇ ವಾಸ್ತು ದೋಷವಿದ್ದರೆ ಸುಲಭವಾಗಿ ಪರಿಹರಿಸಿಕೊಳ್ಳಿ.

ವಾಸ್ತು ದೋಷಕ್ಕೆ ಸ್ಪಟಿಕ ಒಳ್ಳೆಯ ಮದ್ದು. 50 ಗ್ರಾಂ ಸ್ಪಟಿಕವನ್ನು ಖರೀದಿ ಮಾಡಿ ಮನೆಯ ಪ್ರತಿಯೊಂದು ಕೋಣೆಯಲ್ಲೂ ಒಂದೊಂದನ್ನು ಇಡಿ. ಕಚೇರಿ ಅಥವಾ ನೀವು ಕೆಲಸ ಮಾಡುವ ಯಾವುದೇ ಸ್ಥಳದಲ್ಲಿಯಾದ್ರೂ ಇದನ್ನು ಇಡಬಹುದು. ಇದ್ರಿಂದ ಸುಖ-ಶಾಂತಿ ಲಭಿಸುವ ಜೊತೆಗೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.

ಕೆಟ್ಟ ಸ್ವಪ್ನ, ಭಯ ಹುಟ್ಟಿಸುವ ಕನಸು ಬೀಳ್ತಾ ಇದ್ದರೆ ಒಂದು ಕಪ್ಪು ಬಟ್ಟೆಯಲ್ಲಿ ಸ್ಪಟಿಕವನ್ನು ಕಟ್ಟಿ ಹಾಸಿಗೆ ಕೆಳಗೆ ಅಥವಾ ದಿಂಬಿನ ಕೆಳಗಿಟ್ಟು ಮಲಗಿರಿ.

ವ್ಯಾಪಾರದಲ್ಲಿ ವೃದ್ಧಿ, ವ್ಯವಹಾರದಲ್ಲಿ ಧನ ಲಾಭ ಕಾಣ ಬಯಸುವವರು ಕಪ್ಪು ಬಟ್ಟೆಯಲ್ಲಿ ಸ್ಪಟಿಕವನ್ನು ಕಟ್ಟಿ ಬಾಗಿಲ ಮೇಲೆ ತೂಗು ಹಾಕಿ. ಧನ ಲಾಭವಾಗುವ ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್, 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th ಕ್ರಾಸ್, ಸಂಪಿಗೆ ರಸ್ತೆ, ಮಹಾಗಣಪತಿ ದೇವಸ್ಥಾನ ಹತ್ತಿರ,

ಮಲ್ಲೇಶ್ವರಂ ಬೆಂಗಳೂರು - 560003

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Kannada Dunia
Top