ನವದೆಹಲಿ-ಹಣಕಾಸು ಸಚಿವ ಹರ್ಪಾಲ್ ಚೀಮಾ ಅವರ ನಿರಂತರ ಮಾದಕ ವಸ್ತುಗಳ ಪೂರೈಕೆಯ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರ ಆತಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಂಜಾಬ್ನಲ್ಲಿ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೂಡಲೆ ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಆಪ್ ಸರ್ಕಾರದ ಅಡಿಯಲ್ಲಿ ಅಪಾಯಕಾರಿ ಮಾದರಿ ಹೊರಹೊಮ್ಮುತ್ತಿದೆ, ವೈಫಲ್ಯಗಳನ್ನು ಪ್ರಶ್ನಿಸಿದರೆ, ಪ್ರತಿಕ್ರಿಯೆ ಬೆದರಿಕೆ ಮತ್ತು ಚಿತ್ರಹಿಂಸೆಯ ರೂಪದಲ್ಲಿದೆ ಎಂದಿದ್ದಾರೆ.
ಗ್ರಾಮಸ್ಥರ ಆತ್ಮಹತ್ಯೆ ಮತ್ತು ಆರೋಪ
ಸಂಗ್ರೂರ್ ಜಿಲ್ಲೆಯ ದಿರ್ಬಾದ 47 ವರ್ಷದ ದಲಿತ ಗುಲ್ಜಾರ್ ಸಿಂಗ್ ಸೋಮವಾರ ರಾತ್ರಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ 6 ರಂದು ದಿರ್ಬಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚೀಮಾ ಅವರನ್ನು ಆ ಪ್ರದೇಶದಲ್ಲಿ ಮಾದಕ ವಸ್ತುಗಳ ಪೂರೈಕೆಯ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ ಎಂದು ರಾಹುಲ್ ಎಕ್್ಸ ಮಾಡಿದ್ದಾರೆ.
ಪಂಜಾಬ್ನ ಎಎಪಿ ಸರ್ಕಾರದ ಅಡಿಯಲ್ಲಿ ಅಪಾಯಕಾರಿ ಮಾದರಿ ಹೊರಹೊಮ್ಮುತ್ತಿದೆ – ನೀವು ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಿದರೆ, ಪ್ರತಿಕ್ರಿಯೆ ಬೆದರಿಕೆ ಮತ್ತು ಚಿತ್ರಹಿಂಸೆಯ ರೂಪದಲ್ಲಿ ಬರುತ್ತದೆ ಎಂದು ಹೇಳಿದರು.ತನ್ನ ಮಗ ಮಾದಕ ವಸ್ತುಗಳಿಗೆ ಬಲಿಯಾಗುವುದನ್ನು ನೋಡಬೇಕಾದ ದಲಿತ ಸಮುದಾಯದ ಗುಲ್ಜಾರ್ ಸಿಂಗ್ ಜಿ, ಹಣಕಾಸು ಸಚಿವರನ್ನು ಕೇಳಿದ್ದು ಇಷ್ಟೊಂದು ಮಾತ್ರ: ಸರ್ಕಾರ ಮಾದಕ ವಸ್ತು ವ್ಯಾಪಾರವನ್ನು ನಿಲ್ಲಿಸುವಲ್ಲಿ ಏಕೆ ಇಷ್ಟೊಂದು ಶೋಚನೀಯವಾಗಿ ವಿಫಲವಾಗಿದೆ? ಇದಕ್ಕಾಗಿಯೇ ಅವರನ್ನು ಚಿತ್ರಹಿಂಸೆಗೊಳಿಸಲಾಯಿತು ಮತ್ತು ಅವಮಾನಿಸಲಾಯಿತು, ಕ್ಷಮೆಯಾಚಿಸಲು ತೀವ್ರವಾಗಿ ಒತ್ತಡ ಹೇರಲಾಯಿತು, ಅವರು ವಿಷ ಸೇವಿಸಿದರು ಎಂದು ಗಾಂಧಿ ಹೇಳಿದರು.
ಚಿಕಿತ್ಸೆ ಸಿಗದೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡಿದ ಅವರು ಅಂತಿಮವಾಗಿ ತಮ್ಮ ಜೀವದ ಹೋರಾಟದಲ್ಲಿ ಸೋತರು ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.
ಪೂರ್ವ ಕಡತಗಳಿಂದ ಕಲಿಕೆಗಳು
ಕಳೆದ ವಾರ, ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಚಿತ್ರಹಿಂಸೆಗೊಳಗಾದ ಯುವಕ ಮೋಹನ್ ಜೀತ್ ಸಿಂಗ್ ಅವರೊಂದಿಗೆ ನಾನು ಮಾತನಾಡಿದ್ದೆ ಎಂದು ಗಾಂಧಿ ಹೇಳಿದರು.ಸರ್ಕಾರದ ಕೆಲಸ ಜನರಿಗೆ ಉತ್ತರಿಸುವುದು, ಪ್ರಶ್ನೆ ಕೇಳುವವರನ್ನು ತುಳಿಸುವುದು ಅಲ್ಲ ಎಂದು ಅವರು ಹೇಳಿದರು.
ಗುಲ್ಜಾರ್ ಸಿಂಗ್ ಜಿ ಅವರ ಕುಟುಂಬಕ್ಕೆ ಸಾಧ್ಯವಾದಷ್ಟು ಬೇಗ ನ್ಯಾಯ ಸಿಗಲಿ. ಮುಖ್ಯಮಂತ್ರಿಗಳು ತಕ್ಷಣವೇ ಹಣಕಾಸು ಸಚಿವರ ರಾಜೀನಾಮೆಗೆ ಒತ್ತಾಯಿಸಬೇಕು ಮತ್ತು ಎಫ್ಐಆರ್ ನಲ್ಲಿ ಅವರ ಹೆಸರನ್ನು ನೋಂದಾಯಿಸಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಗಾಂಧಿ ಒತ್ತಿ ಹೇಳಿದರು.

