Dailyhunt
ಭೀಕರ ಅಪಘಾತ; ಸ್ಯಾಂಡಲ್ ವುಡ್ ನಿರ್ದೇಶಕ ಸೂರ್ಯೋದಯರವರ ಪುತ್ರ ನಿಧನ

ಭೀಕರ ಅಪಘಾತ; ಸ್ಯಾಂಡಲ್ ವುಡ್ ನಿರ್ದೇಶಕ ಸೂರ್ಯೋದಯರವರ ಪುತ್ರ ನಿಧನ

Kannada News Now 4 years ago

ಬೆಂಗಳೂರು:ಸ್ಯಾಂಡಲ್ ವುಡ್ ನಟ ಮತ್ತು ನಿರ್ದೇಶಕ ಸೂರ್ಯೋದಯ ಅವರ ಪುತ್ರ ಮಯೂರ್ (20) ಅವರು ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆ ಬಳಿ ಬೈಕು ಸವಾರಿ ಮಾಡುತ್ತಿದ್ದಾಗ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಗನನ್ನು ಕಳೆದುಕೊಂಡ ಸೂರ್ಯೋದಯ ಅವರ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ ಎಂದು ಹೇಳಲಾಗಿದೆ.

ಅಪಘಾತಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ನೇಹಿತನಿಂದ ಕೆಟಿಎಂ ಬೈಕನ್ನು ಪಡೆದು ವೇಗವಾಗಿ ಓಡಿಸುತ್ತಿದ್ದರು.ನಿಯಂತ್ರಣ ತಪ್ಪಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಇವರ ತಂದೆ ಸೂರ್ಯೋದಯ ಅವರು ತುಳು ಚಿತ್ರ ದೇಯಿ ಬೈದೆತಿ ಎಂಬ ಚಿತ್ರವನ್ನು ,ಕನ್ನಡದ ಸ್ಟಾಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ.ಕೆಲ ಕನ್ನಡ ಚಿತ್ರಗಳಲ್ಲಿ ಖಳನಟರಾಗಿ ನಟಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now