ಕರ್ನಾಟಕ
BREAKING NEWS : ಕೊರೊನಾ ಸ್ಪೋಟ ; ಏಳು 'IPS' ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ನ ಅಟ್ಟಹಾಸ ಮುಂದುವರೆದ ಹಿನ್ನೆಲೆ ರಾಜ್ಯ ಸರ್ಕಾರ 7 ಐಪಿಎಸ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ.ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಗೃಹ ಇಲಾಖೆಯ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪೊಲೀಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
ನೇಮಕಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ
1) ಭಾಸ್ಕರ್ ರಾವ್ , ಐಪಿಎಸ್, ಎಡಿಜಿಪಿ, ರೈಲ್ವೇಸ್- ಉತ್ತರ ವಲಯ- ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ
2) ಎ.ಎಸ್ ಎನ್ ಮೂರ್ತಿ, ಐಪಿಎಸ್, ಎಂಡಿ, ಕೆಎಸ್ ಪಿ ಹೆಚ್ ಸಿ-ಬಳ್ಳಾರಿ ವಲಯ-ಬಳ್ಳಾರಿ ಮತ್ತು ರಾಯಚೂರು
3) ಅಮ್ರಿತ್ ಪೌಲ್, ಐಪಿಎಸ್, ಎಡಿಜೆಪಿ, ನೇಮಕಾತಿ-ದಕ್ಷಿಣ ವಲಯ-ಮೈಸೂರು, ಮಂಡ್ಯ ಮತ್ತು ಕಲಬುರಗಿ
4) ಅರುಣ್ ಜೆಜೆ ಚಕ್ರವರ್ತಿ, ಐಪಿಎಸ್, ಎಡಿಜಿಪಿ, ಆಂತರಿಕ ಭದ್ರತೆ-ಈಶಾನ್ಯ ವಲಯ- ಬೀದರ್ ಮತ್ತು ಕಲಬುರಗಿ
5) ಸೀಮಂತ್ ಕುಮಾರ್ ಸಿಂಗ್,ಐಪಿಎಸ್, ಎಡಿಜಿಪಿ, ಎಸಿಬಿ-ಕೇಂದ್ರ ವಲಯ-ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು
6) ಉಮೇಶ್ ಕುಮಾರ್, ಐಪಿಎಸ್ ಎಡಿಜೆಪಿ, ಎಸಿಬಿ-ಪೂರ್ವ ವಲಯ, ಶಿವಮೊಗ್ಗ ಮತ್ತು ದಾವಣಗೆರೆ
7) ಹೇಮಂತ್ ನಿಂಬಾಳ್ಕರ್, ಐಪಿಎಸ್ ಪೊಲೀಸ್ ಮಹಾ ನಿರೀಕ್ಷಕರು, ಡಿಸಿ ಆರ್ ಇ -ಪಶ್ಚಿಮ ವಲಯ, ದಕ್ಷಿಣ ಕನ್ನಡ ಉಡುಪಿ

