ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ( PM Kisan Samman Nidhi ) 11ನೇ ಕಂತಿನ ಹಣ ರೈತರ ಬ್ಯಾಂಕ್ ಖಾತೆಗೆ ಯಾವಾಗ ಬಿಡುಗಡೆ ಆಗಲಿದೆ ಎನ್ನುವಂತ ನಿರೀಕ್ಷೆಯಲ್ಲಿದ್ದರು. ಇದೀಗ ಪಿಎಂ ಕಿಸಾನ್ ನಿಧಿಯ ಫಲಾನುಭವಿಗಳ ಖಾತೆಗೆ 11ನೇ ಕಂತಿನ ಹಣವು ಜಮೆಯಾಗಿದೆ.
ಈ ಕುರಿತಂತೆ ಪ್ರಧಾನ ಮಂತ್ರಿ ( Prime Minister Narendra Modi ) ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೂ.26,000 ಕೋಟಿ ಹಣವನ್ನು ಫಲಾನುಭವಿ ರೈತರ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ತಿಳಿಸಿದೆ.
ರೈತರು ನಿಮ್ಮ ಖಾತೆಗೆ ಹಣ ಬಂದಿದ್ಯಾ ಅಂತ ಚೆಕ್ ಮಾಡಲು ಈ ಕ್ರಮ ಅನುಸರಿಸಿ
- ರೈತರು https://pmkisan.gov.in/ ಈ ಲಿಂಕ್ ತೆರೆಯಬೇಕು
- ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಇಲ್ಲವೇ ಬ್ಯಾಂಕ್ ಖಾತೆ ಸಂಖ್ಯೆ ನೀಡಬೇಕು.
- ಈ ಬಳಿಕ ನಿಮ್ಮ ಖಾತೆಗೆ ಜಮೆ ಆದ ಬಗ್ಗೆ ಮಾಹಿತಿ ನೀಡುವಲ್ಲಿ ದ್ರೇ.. ಯಾವ್ ಯಾವ ಕಂತು ನಿಮ್ಮ ಖಾತೆಗೆ ಜಮೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಲಿದೆ.
ಅನರ್ಹ ಫಲಾನುಭವಿಗಳಿಂದ ಹಣವನ್ನು ಹಿಂಪಡೆಯುವುದು: KYC ನಂತರ, ಅನರ್ಹ ಫಲಾನುಭವಿಗಳು ಯೋಜನೆಯಡಿಯಲ್ಲಿ ಪಡೆದ ಹಣವನ್ನು ಹಿಂದಿರುಗಿಸಲು ಕೇಳಲಾಗುತ್ತದೆ. ಪಿಎಂ ಕಿಸಾನ್ ಪೋರ್ಟಲ್, https://pmkisan.gov.in/ ಮೂಲಕ ಹಣವನ್ನು ಆನ್ಲೈನ್ನಲ್ಲಿ ಮರುಪಾವತಿ ಮಾಡಬಹುದು
ಭೂ ಹಿಡುವಳಿ ಮಿತಿ: ಮೊದಲು 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತ ಕುಟುಂಬಗಳು ಮಾತ್ರ ಕಂತು ಪಡೆಯಲು ಅರ್ಹರಾಗಿದ್ದರು.ಈಗ, ಈ ಮಿತಿಯನ್ನು ಮಾಡಲಾಗಿದೆ. ಎಲ್ಲಾ ರೈತ ಕುಟುಂಬಗಳು ಈಗ ಅರ್ಹವಾಗಿವೆ. ಇದು ವಿಳಂಬಕ್ಕೆ ಕಾರಣವಾಗಿರಬಹುದು.
ಕಾಗದ ಪತ್ರ ತೆರವು: ರೈತರ ಸಂಕಷ್ಟ ನೀಗಿಸಲು ಲೆಕ್ಕಾಧಿಕಾರಿಗಳು, ಕನುಂಗೋರು, ಕೃಷಿ ಅಧಿಕಾರಿಗಳಿಂದ ಪರಿಶೀಲನೆ ನಡೆಸುವ ಅನಿವಾರ್ಯತೆಯನ್ನು ಸರಕಾರ ದೂರ ಮಾಡಿದೆ. ಈಗ, ರೈತರು ತಮ್ಮ ಆಧಾರ್ ಕಾರ್ಡ್ ಬಳಸಿ ತಮ್ಮ ಮನೆಯಲ್ಲಿ ಕುಳಿತು ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ನಲ್ಲಿ (ಕೆಸಿಸಿ) ಬದಲಾವಣೆಗಳು: ಈಗ, ಕೆಸಿಸಿಯನ್ನು ಪಿಎಂ ಕಿಸಾನ್ ಯೋಜನೆಯೊಂದಿಗೆ ಲಿಂಕ್ ಮಾಡಲಾಗಿದೆ. ಕಾರ್ಡ್ ಬಳಸಿ, ರೈತರು ವಾರ್ಷಿಕ ಶೇ 4 ಬಡ್ಡಿ ದರದಲ್ಲಿ 3 ಲಕ್ಷ ರೂವರೆಗೆ ಲೋನ್ ಪಡೆಯಬಹುದು. ಯೋಜನೆಯಡಿ ಪಡೆದ ಹಣವನ್ನು ಖರ್ಚು ಮಾಡಲು ರೈತರು ಈಗ ಕಾರ್ಡ್ ಅನ್ನು ಬಳಸಬಹುದು.

