Dailyhunt Logo
  • Light mode
    Follow system
    Dark mode
    • Play Story
    • App Story
ಗ್ರಾಹಕರ ಹಕ್ಕು ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ! ರಾಜ್ಯಗಳಿಗೆ 6 ವಾರಗಳ ಸಮಯ

ಗ್ರಾಹಕರ ಹಕ್ಕು ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ! ರಾಜ್ಯಗಳಿಗೆ 6 ವಾರಗಳ ಸಮಯ

Kannada News Now 4 days ago

ತ್ಪನ್ನಗಳ ಗುಣಮಟ್ಟ, ಶುದ್ಧತೆ, ಪ್ರಮಾಣೀಕರಣ ಹಾಗೂ ವಿತರಕರು ಮತ್ತು ಮಾರಾಟಗಾರರ ವಿವರಗಳನ್ನು ತಿಳಿಯುವ ಗ್ರಾಹಕರ "ತಿಳಿಯುವ ಹಕ್ಕನ್ನು" (Right to Know) ಮಾನ್ಯ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಉತ್ತರಿಸಲು ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಆರು ವಾರಗಳ ಕಾಲಾವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಶೋಷಣೆಯಿಂದ ಗ್ರಾಹಕರನ್ನು ರಕ್ಷಿಸಲು ಈ ಹಕ್ಕು ಅತ್ಯಂತ ನಿರ್ಣಾಯಕವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

​2025ರ ಜುಲೈನಲ್ಲಿ ಈ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿದ್ದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿತ್ತು. ಬುಧವಾರ ನಡೆದ ವಿಚಾರಣೆಯ ವೇಳೆ, ಅರ್ಜಿದಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಪರ ವಕೀಲರು, ಇದುವರೆಗೆ ಹರಿಯಾಣ, ಪಂಜಾಬ್, ಬಿಹಾರ, ಅಸ್ಸಾಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಂತಹ ಕೆಲವೇ ಕೆಲವು ರಾಜ್ಯಗಳಿಂದ ಮಾತ್ರ ಉತ್ತರ ಬಂದಿದೆ ಎಂದು ಪೀಠದ ಗಮನಕ್ಕೆ ತಂದರು.

ಈ ಹಿನ್ನೆಲೆಯಲ್ಲಿ, ಇನ್ನೂ ಪ್ರತಿಕ್ರಿಯೆ ನೀಡದ ಪ್ರತಿದಿನಗಳಿಗೂ ಆರು ವಾರಗಳ ಗಡುವು ನೀಡಿರುವ ನ್ಯಾಯಾಲಯವು, ವಿಚಾರಣೆಯನ್ನು ಮೂರು ತಿಂಗಳ ನಂತರಕ್ಕೆ ಮುಂದೂಡಿದೆ.
​ಪ್ರತಿ ವಾಪಾಸುದಾರರು, ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರು ತಮ್ಮ ನೋಂದಣಿ ವಿವರಗಳನ್ನು (ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ನೌಕರರ ಸಂಖ್ಯೆ) ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಅಂಗಡಿಯ ಪ್ರವೇಶದ್ವಾರದಲ್ಲಿ ದಪ್ಪ ಅಕ್ಷರಗಳಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವಂಚನೆ ಮಾಡುವ ಮಾರಾಟಗಾರರನ್ನು ಗುರುತಿಸಲು ಮತ್ತು ಗ್ರಾಹಕರಿಗೆ ಉತ್ಪನ್ನಗಳಲ್ಲಿ ದೋಷಗಳು ಕಂಡುಬಂದಾಗ ಅಥವಾ ದೂರು ನೀಡುವ ಸಂದರ್ಭದಲ್ಲಿ ಈ ವಿವರಗಳು ಅತ್ಯಂತು ಅವಶ್ಯಕವಾಗಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now