ಬೆಂಗಳೂರು : ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರೋಧಿಸಿ ಬೆಂಗಳೂರಿನಲ್ಲಿ ಜನವರಿ 26 ರಂದು ರೈತರು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಭಾರತೀಯ ಚುನಾವಣಾ ಆಯೋಗದಿಂದ ನಾಳೆ ` ರಾಷ್ಟ್ರೀಯ ಮತದಾರರ ದಿನಾಚರಣೆ'
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬೆಂಗಳೂರಿನಲ್ಲಿ ಜನವರಿ 26 ರ ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಸೇರಿ 10 ಸಾವಿರ ವಾಹನಗಳ ಜೊತೆಗೆ ಪರೇಡ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
`PVC' - ಆಧಾರ್ ಕಾರ್ಡ್ ಹೊಂದಿರುವರಿಗೆ ಇಲ್ಲಿದೆ ಮುಖ್ಯ ಮಾಹಿತಿ
ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆಯುವಂತೆ ರಾಜ್ಯದಲ್ಲೂ ರೈತರ ಪರೇಡ್ ನಡೆಯಲಿದೆ.ಗಣರಾಜ್ಯೋತ್ಸವದ ಧ್ವಜ ರೋಹಣದ ಬಳಿಕ ರಾಜ್ಯದಲ್ಲೂ ರೈತರ ಹೋರಾಟ ನಡೆಯಲಿದೆ.ನೆಲಮಂಗಲದ ನೈಸ್ ಜಂಕ್ಷನ್ ನಿಂದ ಫ್ರೀಡಂ ಪಾರ್ಕ್ ವರೆಗೆ ಪರೇಡ್ ನಡೆಯಲಿದೆ.
ಟ್ರ್ಯಾಕ್ಟರ್ ಸೇರಿದಂತೆ 10 ಸಾವಿರ ವಾಃನಗಳು ಭಾಗಿಯಾಗಲಿವೆ.ಹಲವು ಸಂಘನಟೆಗಳು ರೈತರ ಪರೇಡ್ ನಲ್ಲಿ ಭಾಗವಹಿಸಲಿವೆ ಎಂದು ಹೇಳಿದ್ದಾರೆ.
ರೂಪಾಂತರಿ ಕೊರೋನಾ ವೈರಸ್ ಹಳೆ ವೈರಸ್ ಗಿಂತ ಮಾರಣಾಂತಿಕವಾಗಿದೆ : ಬ್ರಿಟನ್ ಪ್ರಧಾನಿ ಬೋರಿಸ್

