ಬೆಂಗಳೂರು:ಶಾಸಕ ರೇಣುಕಾಚಾರ್ಯ ಗುರುವಾರ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಮತ್ತು ಇದೆಲ್ಲವೂ ವದಂತಿಯಾಗಿದೆ ಎಂದು ಹೇಳಿದರು
ಟ್ವಿಟರ್ ನಲ್ಲಿ ರೇಣುಕಾಚಾರ್ಯರು, 'ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕ. ಅವರ ಮಾರ್ಗದರ್ಶನದಲ್ಲಿ ನಾವು 2023 ಚುನಾವಣೆಗಳಲ್ಲಿ ಸ್ಪರ್ಧಿಸುತ್ತೇವೆ. ಕೆಲವು ಅಸಮಾಧಾನಗೊಂಡ ವ್ಯಕ್ತಿ ದೆಹಲಿಗೆ ಹೋದ ಕಾರಣ, ನಾಯಕತ್ವ ಬದಲಾಗುವುದಿಲ್ಲ '
ಯಾರೋ ಒಬ್ಬರು ಸೋತವರು ದೆಹಲಿಗೆ ಹೋಗಿ ಲಾಬಿ ಮಾಡಿದ ತಕ್ಷಣ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಮಾಡಲ್ಲ. ಅವರನ್ನ ಮಂತ್ರಿ ಮಾಡಿದ್ದಕ್ಕೆ ಇದೆ ಕೊಡುಗೆ. ಅವರ ಕ್ಷೇತ್ರಕ್ಕೂ ಇಲ್ಲ ಜನಪರ ಕೆಲಸ ಮಾಡಲ್ಲ. ಕೋವಿಡ್ ಬಂದಾಗ ಒಬ್ಬ ಮಂತ್ರಿಯಾಗಿ ಜನರ ಪರ ಕೆಲಸ ಮಾಡುವುದು ಬಿಟ್ಟು ದೆಹಲಿಯಲ್ಲಿ ಲಾಬಿ ಮಾಡುತ್ತಿಯಲ್ಲೊ ಪುಣ್ಯಾತ್ಮ.
ಜನರು ಸಾವು ಬದುಕಿನ ನಡುವೆ ಹೋರಾಡುವಾಗ ನಾವು ರಾಜಕಾರಣ ಮಾಡಬಾರದು.ಈಗಾಗಲೇ ನಮ್ಮ ರಾಷ್ಟ್ರೀಯ ನಾಯಕರು ಮತ್ತು ರಾಜ್ಯಾಧ್ಯಕ್ಷರು ಅನೇಕಬಾರಿ ಸ್ಪಷ್ಟಪಡಿಸಿದ್ದಾರೆ.
ಈ ಅವಧಿ ಸಂಪೂರ್ಣವಾಗಿ ಬಿಎಸ್ವೈ ಅವರೆ ಮುಖ್ಯಮಂತ್ರಿ ಆಗಿರುತ್ತಾರೆ.
ಎಂದು ಮುಖ್ಯಮಂತ್ರಿ ಯಡಿಯೂರಪ್ಪರವರ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

