ಚಿಕ್ಕಮಗಳೂರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2020-21 ಶೈಕ್ಷಣಿಕ ಸಾಲಿನ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮೌಲಾನ ಅಜಾದ್ ಆಂಗ್ಲ ಮಾಧ್ಯಮ ಶಾಲೆಗಳಾದ ಉಪ್ಪಳ್ಳಿ, ತರೀಕೆರೆ, ಅಜ್ಜಂಪುರ, ಎನ್.ಆರ್.ಪುರ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಾದ ತೇಗೂರು ಹಾಗೂ ಕಡೂರು, ಚಿಕ್ಕಮಗಳೂರಿನಲ್ಲಿ ಖಾಲಿ ಇರುವ ಭೋಧಕ ಹುದ್ದೆಗೆ ನಿವೃತ್ತ /ಅತಿಥಿ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ.
ಕನ್ನಡ ಭಾಷಾ ಶಿಕ್ಷಕರು ಒಂದು, ಇಂಗ್ಲಿಷ್ ಭಾಷಾ ಶಿಕ್ಷಕರು 02, ಉರ್ದು ಭಾಷಾ ಶಿಕ್ಷಕರು 01, ಗಣಿತ ಶಿಕ್ಷಕರು 02, ಹಿಂದಿ ಭಾಷಾ ಶಿಕ್ಷಕರು 02, ಸಮಾಜ ವಿಜ್ಞಾನ 01, ದೈಹಿಕ ಶಿಕ್ಷಕರು 01, ಪ್ರಥಮ ದರ್ಜೆ ಸಹಾಯಕರು 01 ಹುದ್ದೆಗಳಿದ್ದು, ಅರ್ಜಿಯನ್ನು ಸೆಪ್ಟೆಂಬರ್ 30 ರೊಳಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂ.ಸಂ:೦೮೨೬೨-೨೯೫೮೪೮/೨೨೦೦೩೬, ಚಿಕ್ಕಮಗಳೂರಿನ ಉಪ್ಪಳ್ಳಿಯ ಮೌಲಾನ ಅಜಾದ್ ಶಾಲೆಯ ಪ್ರಾಂಶುಪಾಲರು ಮೊ.ಸಂ:೭೩೫೩೦೩೩೪೬೮, ತರೀಕೆರೆ ಶಾಲೆಯ ಪ್ರಾಂಶುಪಾಲರು ಮೊ.ಸಂ:೯೭೪೩೩೩೧೨೭೨, ಎನ್.ಆರ್.ಪುರ ಪ್ರಾಂಶುಪಾಲರು ಮೊ.ಸಂ:೯೭೪೩೨೩೯೧೫೪, ಅಜ್ಜಂಪುರ ಶಾಲೆಯ ಪ್ರಾಂಶುಪಾಲರು ಮೊ.ಸಂ:೯೬೨೦೩೨೯೮೫೧, ಕಡೂರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಮೊ.ಸಂ:೮೦೭೩೧೬೩೨೬೩, ತೇಗೂರಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಮೊ.ಸಂ:೯೭೪೩೨೩೯೧೫೪ ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

