Dailyhunt
BIGGNEWS: ವೃದ್ಧಾಪ್ಯದಲ್ಲಿ 'ಪೋಷಕರ ಪೋಷಣೆ' ಮಾಡುವುದು ಮಕ್ಕಳ ನೈತಿಕ ಕರ್ತವ್ಯ : ಸುಪ್ರೀಂಕೋರ್ಟ್‌

BIGGNEWS: ವೃದ್ಧಾಪ್ಯದಲ್ಲಿ 'ಪೋಷಕರ ಪೋಷಣೆ' ಮಾಡುವುದು ಮಕ್ಕಳ ನೈತಿಕ ಕರ್ತವ್ಯ : ಸುಪ್ರೀಂಕೋರ್ಟ್‌

Kannada News Now 4 years ago

ನವದೆಹಲಿ: ತನ್ನ 72 ವರ್ಷದ ಅಸ್ವಸ್ಥ ತಂದೆಗೆ ಮಾಸಿಕ 10,000 ರೂ.ಗಳ ಮಾಸಿಕ ಜೀವನಾಂಶವನ್ನು ಪಾವತಿಸುವುದನ್ನು ತಡೆಯಲು ಸಾಧ್ಯವಿರುವ ಎಲ್ಲ ತಂತ್ರಗಳನ್ನು ಪ್ರಯತ್ನಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ತಪ್ಪಿತಸ್ಥ ಮಗನಿಗೆ ಬುದ್ದಿ ಹೇಳಿ ಜೀವನಾಂಶವನ್ನು ಒದಗಿಸುವುದು ಮಗನ ನೈತಿಕ ಕರ್ತವ್ಯ ಮತ್ತು ಕಾನೂನು ಬಾಧ್ಯತೆಯಾಗಿದೆ ಅಂತ ತಿಳಿಸಿದೆ.

72 ವರ್ಷದ ಪೂರ್ವ ದೆಹಲಿಯ ಮೇಸ್ತ್ರಿಗೆ ಎಂಟು ಮಕ್ಕಳು, ಇಬ್ಬರು ಗಂಡು ಮತ್ತು ಆರು ಹೆಣ್ಣು ಮಕ್ಕಳಿದ್ದರು ಮತ್ತು ಕೃಷ್ಣ ನಗರದಲ್ಲಿ 30 ಚದರ ಗಜದ ಮನೆಯಲ್ಲಿ ತಮ್ಮ ಹಿರಿಯ ಮಗನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

ಈಗಾಗಲೇ ಕುಟುಂಬ ಸದಸ್ಯರ ನಡುವೆ ಮನೆ ಹಂಚಿಕೆಯಾಗಿದೆ. ಮನೆಯಲ್ಲಿ ತಮ್ಮ ಪಾಲನ್ನು ತಂದೆಗೆ ನೀಡಿದ ವಿವಾಹಿತ ಹೆಣ್ಣುಮಕ್ಕಳು ನೀಡಿದ್ದರು, ಹೀಗಾಗಿ ಸಣ್ಣ ವಾಸಸ್ಥಳದಲ್ಲಿ ಮೇಸ್ತ್ರಿಗೆ ವಾಸ ಮಾಡುತ್ತಿದ್ದರು. ಆದರೆ, ಜೀವನಾಂಶದ ವಿಷಯಕ್ಕೆ ಬಂದರೆ, ಜೀವನ ಸಾಗಿಸಲು ಕಷ್ಟಪಡುತ್ತಿರುವ ತಂದೆಗೆ ಯಾವುದೇ ಸಹಾಯ ಒದಗಿಸಲಿಲ್ಲ.

ಹೀಗಿರುವಾಗ ಮೇಸ್ತ್ರಿ, 2015 ರಲ್ಲಿ, ತನ್ನ ಗುತ್ತಿಗೆದಾರ-ಕಮ್-ರಿಯಲ್ ಎಸ್ಟೇಟ್ ಡೀಲರ್ ಮಗನಿಂದ ಜೀವನಾಂಶವನ್ನು ಕೋರಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 125 ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ನ್ಯಾಯಾಲಯ ಆರಂಭದಲ್ಲಿ ತಿಂಗಳಿಗೆ 6,000 ರೂ.ಗಳನ್ನು ಜೀವನಾಂಶವಾಗಿ ನೀಡುವಂತೆ ಆದೇಶ ನೀಡಿತ್ತು. ಇದೇ ವೇಳೆ, 2015 ರಿಂದ 1,68,000 ನೀಡಬೇಕಾಗಿದ್ದ ಒಟ್ಟು ಬಾಕಿಯನ್ನು ಪಾವತಿಸಲು ತಿಳಿಸಿತ್ತು. ಆದರೆ ಆತ ಆತ ಕೇವಲ ರೂ 50,000 ಪಾವತಿಸಿದ್ದ. ಇದಲ್ಲದೇ ನ್ಯಾಯಾಲಯ ಆತ ತಂದೆಗೆ ರೂ. 10,000ಕ್ಕೆ ನೀಡುವಂತೆ ತಿಳಿಸಿತ್ತು.

ಆದರೆ ಮಗ ಜಿಲ್ಲಾ ನ್ಯಾಯಾಲಯಗಳಿಂದ ದೆಹಲಿ ಹೈಕೋರ್ಟ್ ಸುಪ್ರೀಂ ಕೋರ್ಟ್‌ವರೆಗೆ ವಿವಿಧ ನ್ಯಾಯಾಲಯಗಳಲ್ಲಿ ತನ್ನ ತಂದೆಗೆ ನೀಡಬೇಕಾಗಿರುವ ಹಣದ ಬಗ್ಗೆ ಅರ್ಜಿಗಳನ್ನು ಸಲ್ಲಿಸುತ್ತಲೇ ಇದ್ದನು. ಸಿಜೆಐ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠದ ಮುಂದೆ ವಾದ ಮಂಡಿಸಿದ ಮೇಸ್ತ್ತಿ ಮಗನ ಪರ ವಕೀಲರು ತನ್ನ ಪತ್ನಿಯ ಆಸ್ತಿ ತನ್ನ ಸಂಪತ್ತೆಂದು ವಿಚಾರಣಾ ನ್ಯಾಯಾಲಯ ತಪ್ಪಾಗಿ ತಿಳಿದುಕೊಂಡು ಆದೇಶ ನೀಡಿದೆ ಅಂತ ಹೇಳಿದ್ದರು.

ಸೊಸೆಯ ಆದಾಯದಿಂದ ತಂದೆಗೆ (ಮಾವನಿಗೆ) ಜೀವನಾಂಶ ನೀಡುವಂತೆ ಮಗ ಕೇಳುವುದು ಕಾನೂನುಬದ್ಧವಾಗಿ ತಪ್ಪು ಅಂತ ಹೇಳಿ, 'ತನ್ನ ವಯಸ್ಸಾದ ಪೋಷಕರನ್ನು ಕಾಪಾಡುವುದು ಮಗನ ನೈತಿಕ ಕರ್ತವ್ಯ ಮತ್ತು ಕಾನೂನು ಬಾಧ್ಯತೆಯಾಗಿದೆ. ನಿಮ್ಮ ತಂದೆಗೆ 72 ವರ್ಷ, ನೀವು 10,000 ರೂ.ಗಳ ಜೀವನಾಂಶಕ್ಕಾಗಿ ಅವರನ್ನು ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಎಳೆಯುತ್ತಿದ್ದೀರಿ. ನಿಮಗೆ ಏನಾಗಿದೆ? ವಯಸ್ಸಾದ ಪೋಷಕರನ್ನು ಯಾರೂ ನ್ಯಾಯಾಲಯಕ್ಕೆ ಎಳೆಯಬಾರದು. ಯಾವುದೇ ಹಿರಿಯ ವ್ಯಕ್ತಿ ತನ್ನ ಜೀವನದಲ್ಲಿ ಇಂತಹ ದಿನವನ್ನು ನೋಡಬಾರದು. ನಾವು ಅವರನ್ನು ನೋಡಿಕೊಳ್ಳಬೇಕು,' ಎಂದು ಸಿಜೆಐ ನೇತೃತ್ವದ ಪೀಠ ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Kannada News Now