Dailyhunt
'ಕ್ರೆಡಿಟ್' ಕಾರ್ಡ್ ಬಳಸುವುವಾಗ ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ, ಅಪಾಯ ತಪ್ಪಿದ್ದಲ್ಲ.!

'ಕ್ರೆಡಿಟ್' ಕಾರ್ಡ್ ಬಳಸುವುವಾಗ ಅಪ್ಪಿತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ, ಅಪಾಯ ತಪ್ಪಿದ್ದಲ್ಲ.!

Kannada News Now 3 years ago

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಇಂದಿನ ಕಾಲದಲ್ಲಿ ಜನರು ಆಫ್‌ಲೈನ್‌ನಿಂದ ಆನ್‌ಲೈನ್‌ಗೆ ಬದಲಾಗುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್, ನೆಟ್ ಬ್ಯಾಂಕಿಂಗ್ ಹೊರತುಪಡಿಸಿ ನಗದು ರಹಿತ ವಹಿವಾಟಿನಲ್ಲಿ ಹೆಚ್ಚಾಗಿ ಜನರು ಜನರು ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ.

ಆದರೆ ಹಣ ಪಾವತಿ ಮಾಡುವಾಗ ಸಣ್ಣಪುಟ್ಟ ವಿಷಯಗಳತ್ತ ಗಮನ ಹರಿಸುವವರು ಬಹಳ ಕಡಿಮೆ. ಇದಲ್ಲಿಯು ವಂಚನೆ ನಡೆಯಬಹುದು. ಹಾಗಾಗಿ ಎಚ್ಚರ ವಹಿಸುವುದ ಅಗತ್ಯವಾಗಿದೆ. ಸುರಕ್ಷಿತ ವಹಿವಾಟು ಮಾಡಲು ಬಯಸಿದರೆ ಈ 5 ಸಲಹೆಗಳನ್ನು ಅನುಸರಿಸಿ.

ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರಿಕೆ ಅಗತ್ಯ

ದೇಶದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇದಕ್ಕೆ ಬಲಿಯಾಗದಂತೆ ಸ್ವಲ್ಪ ಎಚ್ಚರಿಕೆ ಅಗತ್ಯ. ಸಾಮಾನ್ಯವಾಗಿ ಜನರು ಕ್ರೆಡಿಟ್ ಕಾರ್ಡ್‌ನಿಂದ ಆನ್‌ಲೈನ್ ಪಾವತಿ ಮಾಡಿಬಿಡಲಾಗುತ್ತದೆ. ಅದರಲ್ಲಿ ಬರುವ ಯಾವುದೆ ಎಚ್ಚರಿಕೆಯನ್ನು ಓದುವುದಿಲ್ಲ. ಆದರೆ ಅದರಲ್ಲಿ ಬರುವ ಸೂಚನೆಗಳನ್ನು ಓದಿನ ನಂತರ ಅನುಮತಿಸುವುದು ಉತ್ತಮ.

ಈ ವೈಶಿಷ್ಟ್ಯ ಬಳಸಬೇಡಿ

ಇಂದಿನ ಕಾಲದಲ್ಲಿ, ಪಿನ್ ನಮೂದಿಸದೆಯೇ ಪಾವತಿ ಮಾಡಬಹುದಾದ ಇಂತಹ ಹಲವು ಕಾರ್ಡ್‌ಗಳು ಸಹ ಲಭ್ಯವಿವೆ. ಇದರಿಂದ ವಂಚನೆ ಸಂಭವಿಸಬಹುದು. ಅಧಿಕ ನಷ್ಟ ಸಂಭವಿಸಬಹುದು. ಹಾಗಾಗಿ ಈ ವೈಶಿಷ್ಟ್ಯವನ್ನು ಬಳಸದಿರುವುದು ಉತ್ತಮವಾಗಿರುತ್ತದೆ.

ವಹಿವಾಟಿನ ಮಿತಿ ಹೊಂದಿಸಿ

ಅವಶ್ಯಕತೆಗೆ ಅನುಗುಣವಾಗಿ ನೀವು ಕ್ರೆಡಿಟ್ ಕಾರ್ಡ್ ವಹಿವಾಟಿನ ಮಿತಿಯನ್ನು ಹೊಂದಿಸಬಹುದು. ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಕುರಿತಂತೆ ಬ್ಯಾಂಕ್‌ನಿಂದ ಕರೆ ಅಥವಾ ಸಂದೇಶವನ್ನು ಪಡೆದಾಗ ಅದನ್ನು ನಿರ್ಲಕ್ಷಿಸಿ. ವಾಸ್ತವವಾಗಿ ಹೆಚ್ಚಿನ ಮಿತಿಯಿಂದಾಗಿ ನಿಮಗೆ ದೊಡ್ಡ ವಂಚನೆ ಸಂಭವಿಸಬಹುದು.

ಅಂತಾರಾಷ್ಟ್ರೀಯ ವಹಿವಾಟು ನಿಲ್ಲಿಸಿ

ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲಾಗುತ್ತಿದೆ. ನೀವು ವಿದೇಶಕ್ಕೆ ಪ್ರಯಾಣಿಸದಿದ್ದರೆ ಅಂತಾರಾಷ್ಟ್ರೀಯ ವಹಿವಾಟುಗಳನ್ನು ನಿಷ್ಕ್ರಿಯಗೊಳಿಸಿ. ಅನೇಕ ಬಾರಿ ಜನರು ಒಟಿಪಿ ಇಲ್ಲದೆಯೂ ಬಹಳ ಸುಲಭವಾಗಿ ವ್ಯವಹಾರಗಳನ್ನು ಮಾಡುತ್ತಾರೆ. ಅಂತಾರಾಷ್ಟ್ರೀಯ ಶಾಪಿಂಗ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಾಗ ಎಚ್ಚರಿಕೆಯೂ ಬಹಳ ಮುಖ್ಯ.

ನಗದು ಹಣಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ

ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಅಥವಾ ಆನ್‌ಲೈನ್ ಪಾವತಿ ಮಾತ್ರವಲ್ಲ, ಜನರು ತುರ್ತು ಸಂದರ್ಭದಲ್ಲಿ ಅಥವಾ ಕೆಲವು ಕಾರಣಗಳಿಗಾಗಿ ಹಣದ ಅಗತ್ಯವಿದ್ದಾಗ ಎಟಿಎಂಗಳಿಂದ ಹಣವನ್ನು ಹಿಂಪಡೆಯುತ್ತಾರೆ. ಇದಕ್ಕಾಗಿ ನೀವು ಡೆಬಿಟ್ ಕಾರ್ಡ್ ಬಳಸಬಹುದು. ವಾಸ್ತವವಾಗಿ, ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂಪಡೆದ ನಂತರ ಅದರ ಮೇಲೆ ಬಡ್ಡಿಯನ್ನು ಪಾವತಿಸುವುದು ಕಡ್ಡಾಯವಾಗಿದೆ.

BIGG NEWS : ರಾಮನಗರದ ಮಾಜಿ ನಗರ ಸಭೆ ಅಧ್ಯಕ್ಷ ಸೇರಿ ಹಲವು ಮುಸ್ಲಿಂ ಮುಖಂಡರು 'ಜೆಡಿಎಸ್' ಸೇರ್ಪಡೆ

Good News : ಕೇಂದ್ರ ಸರ್ಕಾರದಿಂದ 'ಗರ್ಭಿಣಿ'ಯರಿಗೆ ಭರ್ಜರಿ ಗುಡ್ ನ್ಯೂಸ್, ತಿಂಗಳಿಗೆ ₹6,000 ಲಭ್ಯ

BIGG NEWS : 60-70 ಸೀಟು ಬಂದ್ರೆ ಲಿಂಗಾಯತರು ಸಿಎಂ ಆಗ್ತಾರೆ : ಶಾಮನೂರು ಶಿವಶಂಕರಪ್ಪ ಸ್ಫೋಟಕ ಹೇಳಿಕೆ |Election 2023


Dailyhunt
Disclaimer: This content has not been generated, created or edited by Dailyhunt. Publisher: Kannada News Now