ಬೆಂಗಳೂರು : ಮೂರು ಪಾಲಿಕೆ ಚುನಾವಣಾ ಫಲಿತಾಂಶ ಯಾವುದೇ ದಿಕ್ಸೂಚಿಯಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಮೊದಲು ಅದನ್ನು ನೋಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಚುನಾವಣಾ ಫಲಿತಾಂಶ ಮುಬರುವ ಚುನಾವಣೆಗೆ ದಿಕ್ಯೂಚಿ ಎಂದು ಬಣ್ಣಿಸಿದ್ದಕ್ಕೆ ವ್ಯಂಗ್ಯವಾಡಿದರು.
ನಿಫಾ ವೈರಸ್ ಭೀತಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ನಿಫಾ ಅಲರ್ಟ್' ಘೋಷಣೆ
ಇನ್ನು ಕಾರ್ಪೊರೇಷನ್ ಚುನಾವಣೆ ತೃಪ್ತಿ ತಂದಿದೆ. ಕಲ್ಬುರ್ಗಿಯಲ್ಲಿ ನಾವುಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ಹುಬ್ಬಳ್ಳಿಯಲ್ಲಿ 33 ಸ್ಥಾನ ಗೆದ್ದಿದ್ದೇವೆ. ಕಳೆದ ಬಾರಿ ನಾವು ಕಡಿಮೆ ಗೆದ್ದಿದ್ದೆವು. ತರೀಕೆರೆಯಲ್ಲಿ ನಾವು ಗೆದ್ದಿದ್ದೇವೆ. ಬೆಳಗಾವಿಯಲ್ಲಿ ಎಂಇಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿ ಹಾಕಿದ್ದಾರೆ ಎಂದು ಹರಿಹಾಯ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ತಾವು ಬೇರೆ ಬೇರೆ ಬಣ ಎಂದು ಹೇಳಲಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿ.ಕೆಯಶಿವಕುಮಾರ್, ಇದು ಮಾಧ್ಯಮಗಳ ಸೃಷ್ಠಿಯಷ್ಟೇ. ನಮ್ಮದ ಒಂದೇ ಬಣ, ಕಾಂಗ್ರೆಸ್ ಬಣ ಎಂದರು…
ಬೆಂಗಳೂರಿಗರೇ ಗಮನಿಸಿ : ಗಣೇಶ ಮೂರ್ತಿ ಪ್ರತಿಷ್ಠಾಪನೆ ವೇಳೆ 'ಈ ರೂಲ್ಸ್ ' ಫಾಲೋ ಮಾಡ್ಲೇಬೇಕು..

