Dailyhunt

ಮೇ 17. ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ "118 ನೇ ಗಾನಲಹರಿ"

Klive News 2 days ago

ಶಿವಮೊಗ್ಗ ನಗರ ರಸ್ತೆಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಡಾ| ಪಂಡಿತ ಪುಟ್ಟರಾಜಕವಿ ಗವಾಯಿ ಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಗಾನಲಹರಿ 118ನೆಯ ಅಮಾವಾಸ್ಯೆ ಮೇ 17ನೇ ಶುಕ್ರವಾರ ಸಂಜೆ 6.30ರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಪಂ. ಆರ್.ಬಿ.ಸಂಗಮೇಶ್ವರ ಗವಾಯಿ ಗಳು ಅಧ್ಯಕ್ಷತೆ ವಹಿಸುವರು. ಶಿಕಾರಿಪುರದ ಶ್ರೀಮತಿ ಅಮೃತಾ ಗಿರಿಧರ್ ಅವರು ಆಧ್ಯಾತ್ಮ ನುಡಿ ಗಳನ್ನಾಡುವರು. ಶ್ರೀಶಿರಡಿ ಸಾಯಿ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ. ಹಿಂದೂಸ್ಥಾನಿ ಗಾಯಕ ಉಡುಪಿಯ ರಮೇಶ್ ಮಹಾಂತಾ ಅವರಿಂದ ಸಂಗೀತ ಸೇವೆ ನಡೆಯಲಿದೆ.
ರಾಮಣ್ಣ ಭಜಂತ್ರಿ ಸಹನಾ, ವೀರ ಭದ್ರಯ್ಯ ಶಾಸ್ತ್ರಿ, ವೇದಘೋಷ, ಪಂ. ಆರ್. ತುಕಾರಾಮ್ ರಂಗಧೋಳ್, ವಿನಾಯಕ್ ಭಟ್ ತಬಲ ಹಾಗೂ ಸಿದ್ದಣ್ಣ ಬಡಿಗೇರ್ ಹಾರೋನಿಯಂನೊಂದಿಗೆ ಸಾಥ್ ನೀಡಲಿದ್ದಾರೆ. ರೇವಣಸಿದ್ದಯ್ಯ ಶಾಸ್ತ್ರಿ ನಿರೂಪಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Klive.News