Shivamogga Rotary ವಿಪ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ವತಿಯಿಂದ ಶಿವಮೊಗ್ಗ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿದರು.
ಇತ್ತೀಚೆಗೆ 104ನೇ ಅಂತರರಾಷ್ಟ್ರೀಯ ಸಹಕಾರ ದಿನ ಮತ್ತು 32ನೇ ವಿಶ್ವಸಂಸ್ಥೆ ಸಹಕಾರ ದಿನದ ಆಚರಣೆಯ ಸಂದರ್ಭದಲ್ಲಿ ವಿಪ್ರ ವಿವಿಧೋದ್ದೇಶ ಸಹಕಾರಿ ಸಂಘವು, ಶಿವಮೊಗ್ಗ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ವನಮಹೋತ್ಸವ ಆಚರಣೆ ಮಾಡುವುದರ ಮೂಲಕ ಕಾರ್ಯಕ್ರಮಗಳಿಗೆ ಮೆರಗು ಕೊಟ್ಟಿದೆ.
ಸುಮಾರು 25 ಗಿಡಗಳ ನೆಡುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಯಿತು.
ಸಂಘದ ಅಧ್ಯಕ್ಷರಾದ ಎ.ಆರ್.ಪ್ರಸನ್ನ ಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆದರೆ ಪ್ರಸ್ತುತ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವುದು ನಮಗೆ ಅನಿವಾರ್ಯ ಕೂಡಾ. ಹಾಗಾಗಿ ಪರಿಸರವನ್ನು ಸಂರಕ್ಷಿಸಬೇಕು. ಇದರಿಂದ ಉತ್ತಮ ಆರೋಗ್ಯ ಸಿಗುತ್ತದೆ ಎಂದ ಅವರು,
Shivamogga Rotary ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಮಂಜುನಾಥ, ಡೈರೆಕ್ಟರ್ ನಾರಾಯಣ ಮೂರ್ತಿ, ವಾರಿಜಾ ಜಗದೀಶ್, ಹರಿಕೃಷ್ಣ ಎಸ್., ಗುರುರಾಜ್, ಶ್ರೀನಿವಾಸಮೂರ್ತಿ, ಎನ್.ವಿ.ರತ್ನಾವತಿ, ಡಾ. ಗೀತಾ ರಾಣಿ, ತಿಮ್ಮಪ್ಪ ಕಾಕಲ್, ಪ್ರಭಾಕರ, ಜಗದೀಶ್ ಗೋಖಲೆ ಮತ್ತು ಸಿಇಓ ಮಾಲತಿ ಮತ್ತು ಇತರೆ ಸದಸ್ಯರು ಪಾಲ್ಗೊಂಡಿದ್ದರು. ರೋಟರಿ ಪಾರ್ಕ್ ಸಹ ಕಾರ್ಯದರ್ಶಿ ರೊ. ವೀರಣ್ಣ ಹುಗ್ಗಿ ಮತ್ತು ಖಜಾಂಚಿ ರೊ. ಜಗದೀಶ್ ರವರು ಉಪಸ್ಥಿತರಿದ್ದರು.
