Dailyhunt Logo
  • Light mode
    Follow system
    Dark mode
    • Play Story
    • App Story
CRIME: ಮತದಾರರಿಗೆ ಬೆದರಿಕೆ ಹಾಕಿದ ಆರೋಪ; ಟಿಎಂಸಿ ನಾಯಕನ ಆಪ್ತನನ್ನು ಜೈಲಿಗಟ್ಟಿದ ಪೊಲೀಸರು!

CRIME: ಮತದಾರರಿಗೆ ಬೆದರಿಕೆ ಹಾಕಿದ ಆರೋಪ; ಟಿಎಂಸಿ ನಾಯಕನ ಆಪ್ತನನ್ನು ಜೈಲಿಗಟ್ಟಿದ ಪೊಲೀಸರು!

Navasamaja.com 0 months ago

ಕೊಲ್ಕತ್ತಾ: ಚುನಾವಣೆ ಮುಕ್ತಾಯದ ಬೆನ್ನಲ್ಲೇ ಮತದಾರರಿಗೆ ಬೆದರಿಕೆ ಮತ್ತು ದೌರ್ಜನ್ಯ ಎಸಗಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (TMC) ಪ್ರಭಾವಿ ನಾಯಕ ಜಹಾಂಗೀರ್ ಖಾನ್(Leader Jahangir Khan) ಅವರ ಆಪ್ತ ಇಸ್ರಾಫಿಲ್ ಚಕ್ದಾರ್‌ನನ್ನು(Israfil Chakdar) ಪಶ್ಚಿಮ ಬಂಗಾಳ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ಇಸ್ರಾಫಿಲ್ ಚಕ್ದಾರ್‌ನನ್ನು ಪೊಲೀಸರು ಇಂದು (ಗುರುವಾರ) ಡೈಮಂಡ್ ಹಾರ್ಬರ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.ಮನೆ ಮನೆಗೆ ತೆರಳಿ ಬೆದರಿಕೆ: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುಗಿದ ನಂತರ, ಫಾಲ್ತಾದ ಹಶಿಮ್ ನಗರ ಪ್ರದೇಶದಲ್ಲಿ ಇಸ್ರಾಫಿಲ್ ಚಕ್ದಾರ್ ಮತ್ತು ಆತನ ಬೆಂಬಲಿಗರು ಮನೆ ಮನೆಗೆ ನುಗ್ಗಿ ಜನರಿಗೆ ಮಾರಣಾಂತಿಕ ಬೆದರಿಕೆ ಒಡ್ಡುತ್ತಿದ್ದಾರೆ ಮತ್ತು ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಗಂಭೀರ ಆರೋಪ ಮಾಡಿದ್ದರು.

ಮಹಿಳೆಯರ ಭಾರಿ ಪ್ರತಿಭಟನೆ: ಟಿಎಂಸಿ ಕಾರ್ಯಕರ್ತರ ಈ ದೌರ್ಜನ್ಯದ ವಿರುದ್ಧ ಹಶಿಮ್ ನಗರದ ಮಹಿಳೆಯರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದರು. ಆರೋಪಿಯನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಸರಣಿ ಪ್ರತಿಭಟನೆಗಳು ನಡೆದಿದ್ದವು.

ತಲೆಮರೆಸಿಕೊಂಡಿದ್ದ ಆರೋಪಿ
: ನಿರಂತರ ಸಾರ್ವಜನಿಕ ಆಕ್ರೋಶ ಮತ್ತು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಇಸ್ರಾಫಿಲ್ ಕಳೆದ ಕೆಲವು ದಿನಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತಿಮವಾಗಿ ಆತನನ್ನು ಜೈಲಿಗಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರದ ಹಿಂಸಾಚಾರ ಮತ್ತು ಬೆದರಿಕೆ ಪ್ರಕರಣಗಳು ತೀವ್ರ ರಾಜಕೀಯ ಸಂಚಲನ ಮೂಡಿಸಿರುವ ಬೆನ್ನಲ್ಲೇ ಈ ಪ್ರಮುಖ ಬಂಧನವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja