ದೆಹಲಿಯ ಧಗಧಗಿಸುವ ಕಡು ಬೇಸಿಗೆಯ (Summer) ಮಧ್ಯಾಹ್ನವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಸೂರ್ಯ ನೆತ್ತಿಯ ಮೇಲೆ ನಿಂತು ಬೆಂಕಿ ಉಗುಳುತ್ತಿದ್ದಾನೆ, ತಾಪಮಾನ ನಲವತ್ತರ ಗಡಿ (Interesting Facts) ದಾಟಿದೆ. ಇನ್ನು ನಮಗೆಲ್ಲಾ ಎಸಿ (AC) ಅಥವಾ ಫ್ರಿಡ್ಜ್ಗಳು ಆವಿಷ್ಕಾರವಾಗಲು ಇನ್ನೂ ನೂರಾರು ವರ್ಷಗಳು ಬಾಕಿ ಇವೆ.
ಇಂತಹ ನರಕಸದೃಶ ಬೇಸಿಗೆಯಲ್ಲೂ ಮೊಘಲ್ (Moghal) ಅರಮನೆಗಳ ಒಳಗೆ ಕುಳಿತ ಚಕ್ರವರ್ತಿಗಳು ಜಿಟಿಜಿಟಿ ಎನ್ನುವ ತಣ್ಣಗಿನ ಗುಲಾಬಿ ಶರಬತ್ ಕುಡಿಯುತ್ತಿದ್ದರು, ತಂಪು ತಂಪಾದ ರಾಜಶಾಹಿ ಕುಲ್ಫಿ ಸವಿಯುತ್ತಿದ್ದರು ಮತ್ತು ಜ್ವರ ಬಂದಾಗ ಚಿಕಿತ್ಸೆಗಾಗಿ ಮಂಜುಗಡ್ಡೆಯನ್ನು (Ice) ಬಳಸುತ್ತಿದ್ದರು.
ಕೇಳಲು ಇದು ಅಸಾಧ್ಯ ಎನಿಸಬಹುದು, ಆದರೆ ಇದು ಇತಿಹಾಸ ಕಂಡ ರೋಚಕ ಸತ್ಯ. ಭಾರತೀಯರ ಮನೆಗಳಿಗೆ ರೆಫ್ರಿಜರೇಟರ್ಗಳು ಕಾಲಿಡುವ ಎಷ್ಟೋ ಶತಮಾನಗಳ ಮುನ್ನವೇ, ಮೊಘಲರು ಮಂಜುಗಡ್ಡೆಯನ್ನು ಸಂಗ್ರಹಿಸಲು, ಕರಗದಂತೆ ಸಾಗಿಸಲು ಮತ್ತು ಅದನ್ನು ಪ್ರಿಸರ್ವ್ ಮಾಡಲು ಅದ್ಭುತವಾದ ದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಅವರ ಈ ಐಸ್ ಮ್ಯಾನೇಜ್ಮೆಂಟ್ ಹಿಂದೆ ಅಪಾರ ಬುದ್ಧಿವಂತಿಕೆ, ರಗಡ್ ಲಾಜಿಸ್ಟಿಕ್ಸ್ ಮತ್ತು ರಾಜಮನೆತನದ ಬಿಗ್ ಬಾಸ್ ಮಾದರಿಯ ಐಷಾರಾಮಿ ತನವಿತ್ತು.
ಹಿಮದ ಪರ್ವತಗಳಿಂದ ದಿಲ್ಲಿಯ ಅರಮನೆಗೆ ಹೈಟೆಕ್ ಐಸ್ ಜರ್ನಿ.
ಹಾಗಾದರೆ ಈ ಐಸ್ ಎಲ್ಲಿಂದ ಬರ್ತಿತ್ತು ಗೊತ್ತಾ? ಹುಮಾಯೂನ್, ಅಕ್ಬರ್ ಮತ್ತು ಷಾಜಹಾನ್ ಅವರ ಆಡಳಿತಾವಧಿಯಲ್ಲಿ, ದೆಹಲಿ, ಆಗ್ರಾ ಮತ್ತು ಲಾಹೋರ್ನಂತಹ ಸಾಮ್ರಾಜ್ಯದ ಪ್ರಮುಖ ನಗರಗಳಿಗೆ ನೈಸರ್ಗಿಕ ಮಂಜುಗಡ್ಡೆಯನ್ನು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಗರ್ವಾಲ್ನ ಹಿಮಾವೃತ ಪರ್ವತ ಪ್ರದೇಶಗಳಿಂದ ತರಲಾಗುತ್ತಿತ್ತು.
ಚಳಿಗಾಲದಲ್ಲಿ ಅಲ್ಲಿನ ಕಾರ್ಮಿಕರು ಹಿಮದ ದೊಡ್ಡ ದೊಡ್ಡ ಬ್ಲಾಕ್ಗಳನ್ನು ಕತ್ತರಿಸಿ, ಅತ್ಯಂತ ವ್ಯವಸ್ಥಿತವಾದ ಜಾಲದ ಮೂಲಕ ರಾಜಧಾನಿಯ ಕಡೆಗೆ ರವಾನಿಸುತ್ತಿದ್ದರು. ಅವರಿಗೆ ಮಂಜುಗಡ್ಡೆಯನ್ನು ಪಡೆಯುವುದು ದೊಡ್ಡ ಸವಾಲಾಗಿರಲಿಲ್ಲ, ಆದರೆ ಸುಡುವ ಬಿಸಿಲಿನಲ್ಲಿ ಅದು ದಾರಿಯಲ್ಲೇ ಕರಗಿ ನೀರಾಗದಂತೆ ತಡೆಯುವುದೇ ಅತಿ ದೊಡ್ಡ ಟಾಸ್ಕ್ ಆಗಿತ್ತು.
ಮಂಜುಗಡ್ಡೆ ರಾಜಧಾನಿಯನ್ನು ತಲುಪುತ್ತಿದ್ದಂತೆಯೇ, ಅದನ್ನು ಕರಗದಂತೆ ಕಾಯ್ದಿರಿಸಲು 'ಬರ್ಫ್ ಖಾನಾ' ಅಥವಾ ಐಸ್ ಹೌಸ್ಗಳು ಎಂದು ಕರೆಯಲಾಗುವ ವಿಶೇಷ ಬಿಲ್ಡಿಂಗ್ಗಳಲ್ಲಿ ಇಡಲಾಗುತ್ತಿತ್ತು. ಇವು ದಪ್ಪನಾದ ಇನ್ಸುಲೇಟೆಡ್ ಗೋಡೆಗಳನ್ನು ಹೊಂದಿದ್ದ ಆಳವಾದ ಭೂಗತ ಕೋಣೆಗಳಾಗಿದ್ದವು.
ಇವುಗಳ ಒಳಗಿನ ತಾಪಮಾನ ಸದಾ ಅತ್ಯಂತ ಕಡಿಮೆ ಇರುವಂತೆ ಪ್ಲಾನ್ ಮಾಡಲಾಗಿತ್ತು. ಮಂಜುಗಡ್ಡೆಯ ಬ್ಲಾಕ್ಗಳನ್ನು ಈ ಕೋಣೆಗಳಲ್ಲಿ ಇಡುವ ಮುನ್ನ ಅವುಗಳ ಸುತ್ತಲೂ ಒಣಹುಲ್ಲು, ಬಟ್ಟೆ ಮತ್ತು ಬೂದಿಯಂತಹ ಇನ್ಸುಲೇಟಿಂಗ್ ಪದಾರ್ಥಗಳನ್ನು ಸುತ್ತಲಾಗುತ್ತಿತ್ತು. ಈ ಸಿಂಪಲ್ ತಂತ್ರದಿಂದಾಗಿ, ಕಡು ಬೇಸಿಗೆಯಲ್ಲೂ ತಿಂಗಳುಗಳ ಕಾಲ ಐಸ್ ಕರಗದಂತೆ ಗಟ್ಟಿಯಾಗಿರುತ್ತಿತ್ತು.
ಐಸ್ ಕಾಯಲು ಇದ್ದರು ಪವರ್ಫುಲ್ ಕಮಾಂಡೋಗಳು!
ಮೊಘಲರು ಮಂಜುಗಡ್ಡೆಯನ್ನು ಎಷ್ಟು ಸೀರಿಯಸ್ ಆಗಿ ತಗೊಂಡಿದ್ದರೆಂದರೆ, ರಾಜಮನೆತನದಲ್ಲಿ ಐಸ್ ರಕ್ಷಣೆ ಮತ್ತು ವಿತರಣೆಗಾಗಿಯೇ 'ಅಬ್ದಾರ್ಸ್' ಎಂಬ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಚಕ್ರವರ್ತಿಯ ಕುಡಿಯುವ ನೀರು ಸದಾ ತಣ್ಣಗಿರುವಂತೆ ನೋಡಿಕೊಳ್ಳುವುದು, ಅರಮನೆಯ ಶಾಹಿ ಅಡುಗೆಮನೆಗೆ ಹಾಗೂ ರಾಯಲ್ ಪಾರ್ಟಿಗಳಿಗೆ ಐಸ್ ಕೊರತೆಯಾಗದಂತೆ ಸರಬರಾಜು ಮಾಡುವುದು ಈ ಅಧಿಕಾರಿಗಳ ಹೈ-ಪ್ರೊಫೈಲ್ ಜವಾಬ್ದಾರಿಯಾಗಿತ್ತು.
ಕುತೂಹಲಕಾರಿ ಸಂಗತಿಯೆಂದರೆ, ಮೊಘಲರು ಕೇವಲ ಹಿಮಾಲಯದ ಪರ್ವತಗಳ ಮೇಲಷ್ಟೇ ಡಿಪೆಂಡ್ ಆಗಿರಲಿಲ್ಲ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ಅತಿಯಾದ ಚಳಿಯಿರುವ ಚಳಿಗಾಲದ ರಾತ್ರಿಗಳಲ್ಲಿ, ತೆರೆದ ಮೈದಾನದಲ್ಲಿ ಸಣ್ಣ ಸಣ್ಣ ಹೊಂಡಗಳನ್ನು ತೋಡಿ, ಅದರಲ್ಲಿ ನೀರು ತುಂಬಿದ ಮಣ್ಣಿನ ಪಾತ್ರೆಗಳನ್ನು ಇಡಲಾಗುತ್ತಿತ್ತು. ರಾತ್ರಿಯ ತೀವ್ರ ಚಳಿಗೆ ಆ ನೀರಿನ ಮೇಲೆ ಮಂಜುಗಡ್ಡೆಯ ತೆಳುವಾದ ಪದರ ಸೃಷ್ಟಿಯಾಗುತ್ತಿತ್ತು.
ಸೂರ್ಯ ಮೂಡುವ ಮುನ್ನವೇ ಕಾರ್ಮಿಕರು ಈ ಐಸ್ ಅನ್ನು ಸಂಗ್ರಹಿಸಿ ತಕ್ಷಣವೇ ಸ್ಟೋರೇಜ್ ಹೌಸ್ಗಳಿಗೆ ರವಾನಿಸುತ್ತಿದ್ದರು. ಆಧುನಿಕ ವಿಜ್ಞಾನವು ಕೂಲಿಂಗ್ ಮತ್ತು ಇನ್ಸುಲೇಶನ್ ಪ್ರಕ್ರಿಯೆಯನ್ನು ವಿವರಿಸುವ ಎಷ್ಟೋ ಶತಮಾನಗಳ ಮೊದಲೇ ಮೊಘಲರು ಈ ನ್ಯಾಚುರಲ್ ತಂತ್ರವನ್ನು ಕರಗತ ಮಾಡಿಕೊಂಡಿದ್ದರು.
ಮೊಘಲ್ ಗಣ್ಯರಿಗೆ ಐಸ್ ಎಂದರೆ ಕೇವಲ ಹೆಪ್ಪುಗಟ್ಟಿದ ನೀರಾಗಿರಲಿಲ್ಲ, ಅದೊಂದು ಅಂತಸ್ತು ಮತ್ತು ವಿಲಾಸಿ ಜೀವನದ ಬ್ರಾಂಡ್ ಆಗಿತ್ತು. ಚಳಿಗೊಳಿಸಿದ ರೋಸ್ ಶರಬತ್ಗಳು, ಫ್ರೂಟ್ ಜ್ಯೂಸ್ಗಳು, ತಣ್ಣನೆಯ ಸಿಹಿ ತಿಂಡಿಗಳು ಮತ್ತು ಇಂದಿನ ಕುಲ್ಫಿಯ ಅಜ್ಜ-ಅಜ್ಜಿಯಂದಿರಂತಿದ್ದ ಆರಂಭಿಕ ಆವೃತ್ತಿಗಳನ್ನು ಮೊಘಲ್ ದರ್ಬಾರ್ನಲ್ಲಿ ರಾಜರು ರಾಜಾರೋಷವಾಗಿ ಸವಿಯುತ್ತಿದ್ದರು.
ಇನ್ನು ಬೇಸಿಗೆಯ ತಿಂಗಳುಗಳಲ್ಲಿ ಚಕ್ರವರ್ತಿಗಳು ತಮ್ಮ ಆಪ್ತ ಸಾಮಂತರಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಮಂಜುಗಡ್ಡೆ ಹಾಗೂ ಹಿಮವನ್ನು ಉಡುಗೊರೆಯಾಗಿ ಹಂಚಿ ತಮ್ಮ ಪವರ್ ತೋರಿಸುತ್ತಿದ್ದರು. ಫ್ರಿಡ್ಜ್ ಇಲ್ಲದ ಕಾಲದಲ್ಲೂ ಮೊಘಲರು ತಂಪು ತಂಪಾಗಿ, ಮಸಾಲೆಯುಕ್ತವಾಗಿ ಬದುಕಿದ್ದ ಹಾದಿ ನಿಜಕ್ಕೂ ಇಂದಿನ ಜನರನ್ನು ಬೆರಗುಗೊಳಿಸುವಂತಿದೆ.

