News First Live

329k Followers

BIG BREAKING: ಇಂದು ಸಂಜೆಯೇ ಮಹಾರಾಷ್ಟ್ರದ ನೂತನ ಸಿಎಂ ಆಗಿ ಫಡ್ನವಿಸ್​​ ಪದಗ್ರಹಣ

30 Jun 2022.4:12 PM

ಶಿವಸೇನೆ ರೆಬೆಲ್​ ನಾಯಕ ಏಕನಾಥ್​​ ಶಿಂಧೆ ಬಣದ ಸಹಕಾರದೊಂದಿಗೆ ಮಹಾರಾಷ್ಟ್ರ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ಈಗಾಗಲೇ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರಿಗೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​​ ಮನವಿ ಮಾಡಿದ್ದಾರೆ. ಈಗ ರಾಜ್ಯಪಾಲರು ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ್ದು, ಮಹಾರಾಷ್ಟ್ರ ನೂತನ ಸಿಎಂ ಆಗಿ ದೇವೇಂದ್ರ ಫಡ್ನವಿಸ್​​ ಇಂದು ಸಂಜೆ 7 ಗಂಟೆಗೆ ಪದಗ್ರಹಣ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಬುಧವಾರ ರಾತ್ತಿ ಸುಪ್ರೀಂಕೋರ್ಟ್​ ಆದೇಶದ ಬಳಿಕ ಉದ್ಧವ್​ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಈ ಬೆನ್ನಲ್ಲೇ ಫಡ್ನವಿಸ್​​ ಮಹಾರಾಷ್ಟ್ರದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲು ಮುಂದಾಗಿದ್ದಾರೆ. ಈಗ ಗೋವಾದಿಂದ ಮುಂಬೈಗೆ ಆಗಮಿಸಿರೋ ಶಿವಸೇನೆ ರೆಬೆಲ್​​ ನಾಯಕ ಏಕನಾಥ್​ ಶಿಂಧೆ ಕೂಡ ಫಡ್ನವಿಸ್​ ಜತೆಗೆ ಡಿಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ.

ಈಗ ದೇವೇಂಡ್ರ ಫಡ್ನವಿಸ್​​ ಮತ್ತು ಏಕನಾಥ್​ ಶಿಂಧೆ ಜತೆಗೆ ಹಲವರು ರಾಜ್ಯಪಾಲರ ಭೇಟಿಗೆ ತೆರಳಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: News First Live

#Hashtags