ವಿಜಯನಗರ : KKRTC ಬಸ್ ಹರಿದು 8 ಕುರಿಗಳ ದಾರುಣ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳು ಕ್ರಾಸ್ ಬಳಿ ನಡೆದಿದೆ.
ಹರಿಜನ ಗಾಳೆಪ್ಪನಿಗೆ ಸೇರಿದ ಕುರಿಗಳಾಗಿದೆ. ಸ್ಥಳದಲ್ಲೇ 8 ಕುರಿಗಳು ಸಾವನ್ನಪ್ಪಿದ್ದು, 2 ಕುರಿಗಳಿಗೆ ಗಂಭೀರ ಗಾಯಗಳಾಗಿದೆ.
ಎಮ್ಮಿಗನೂರಿನಿಂದ ಹಗರಿಬೊಮ್ಮನಹಳ್ಳಿಗೆ ಬಸ್ ತೆರಳುತ್ತಿತ್ತು. ಹಗರಿಬೊಮ್ಮನಹಳ್ಳಿ ಡಿಪೋಗೆ ಸಾರಿಗೆ ಬಸ್ ಸೇರಿದಾಗಿದೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

