ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ಪವನ್ ಕಲ್ಯಾಣ್ ಸಿನಿಮಾ ತೋರಿಸಿದ ವೈದ್ಯರು! ಏಕೆ?
ಒಂದು ಸಾಲಿನಲ್ಲಿಆಂಧ್ರಪ್ರದೇಶದ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರಿಗೆ 'ಅವೇಕ್ ಬ್ರೈನ್ ಸರ್ಜರಿ' ಮಾಡುವಾಗ, ಅವರ ಮಿದುಳಿನ ಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ನಟ ಪವನ್ ಕಲ್ಯಾಣ್ ಅವರ ಸಿನಿಮಾ ತೋರಿಸಲಾಗಿದೆ.
ಪ್ರಮುಖ ಅಂಶಗಳು• ಎಚ್ಚರವಿರುವ ಮಿದುಳಿನ ಶಸ್ತ್ರಚಿಕಿತ್ಸೆರೋಗಿಯ ಮಾತು ಹಾಗೂ ಚಟುವಟಿಕೆಯನ್ನು ನಿಯಂತ್ರಿಸುವ ಮಿದುಳಿನ ನಿರ್ಣಾಯಕ ಭಾಗದಲ್ಲಿ ಗೆಡ್ಡೆ ಇದ್ದ ಕಾರಣ, ಅವರನ್ನು ಎಚ್ಚರವಾಗಿ ಇರಿಸಿ 'ಅವೇಕ್ ಬ್ರೈನ್ ಸರ್ಜರಿ' ನಡೆಸಲಾಯಿತು.• ಸಿನಿಮಾದ ವೈದ್ಯಕೀಯ ಉದ್ದೇಶಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯ ಪ್ರತಿಕ್ರಿಯೆಗಳನ್ನು ಗಮನಿಸಲು ಮತ್ತು ಅವರನ್ನು ಒತ್ತಡಮುಕ್ತವಾಗಿ ಹಾಗೂ ಪ್ರಶಾಂತವಾಗಿರಿಸಲು ಸಿನಿಮಾ ವೀಕ್ಷಣೆಯು ಸಹಕಾರಿಯಾಯಿತು.• ಮಿದುಳಿನ ಕಾರ್ಯ ಪರೀಕ್ಷೆರೋಗಿ ಎಚ್ಚರವಾಗಿದ್ದಾಗ ಸಿನಿಮಾ ನೋಡುವುದರಿಂದ, ವೈದ್ಯರು ಮಿದುಳಿನ ವಿವಿಧ ಕ್ರಿಯೆಗಳನ್ನು ನೈಜ ಸಮಯದಲ್ಲಿ ಪರೀಕ್ಷಿಸಲು ಮತ್ತು ಆತಂಕವನ್ನು ತಡೆಯಲು ಸಾಧ್ಯವಾಯಿತು.• ಶಸ್ತ್ರಚಿಕಿತ್ಸೆಯ ಸುರಕ್ಷತೆಅರಿವಳಿಕೆ ನೀಡುವ ಬದಲು ಎಚ್ಚರವಾಗಿಯೇ ಶಸ್ತ್ರಚಿಕಿತ್ಸೆ ಮಾಡುವುದರಿಂದ, ಗಡ್ಡೆ ತೆಗೆಯುವ ವೇಳೆ ದೇಹದ ಚಲನೆ ಅಥವಾ ಮಾತಿನಲ್ಲಿ ವ್ಯತ್ಯಯವಾದರೆ ವೈದ್ಯರಿಗೆ ತಕ್ಷಣವೇ ಗೊತ್ತಾಗುತ್ತದೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಆಂಧ್ರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಿದುಳು ಗಡ್ಡೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರು ತಮ್ಮ ನೆಚ್ಚಿನ ನಟ ಪವನ್ ಕಲ್ಯಾಣ್ ಅವರ 'ದೇ ಕಾಲ್ ಹಿಮ್ ಓಜಿ' (They Call Him OG) ಸಿನಿಮಾ ವೀಕ್ಷಿಸಿದ್ದಾರೆ. ಈ ವಿಚಾರವೀಗ ಸಂಚಲನ ಸೃಷ್ಟಿಸಿದೆ.
ಮಾತು ಹಾಗೂ ಚಟುವಟಿಕೆಯನ್ನು ನಿಯಂತ್ರಿಸುವ ಮಿದುಳಿನ ಭಾಗದಲ್ಲಿ ಗೆಡ್ಡೆ ಇರುವುದನ್ನು ಪತ್ತೆ ಹಚ್ಚಿದ್ದ ವೈದ್ಯರು, ರೋಗಿಯನ್ನು ಎಚ್ಚರವಾಗಿ ಇರಿಸಿಯೇ ಶಸ್ತ್ರಚಿಕಿತ್ಸೆ ನಡೆಸುವುದು ಸೂಕ್ತ ಎಂದು ನಿರ್ಧರಿಸಿದರು. ಈ ವಿಧಾನಕ್ಕೆ 'Awake Brain Surgery' ಎನ್ನಲಾಗುತ್ತದೆ. ಹೀಗೆ, ಎಚ್ಚರವಿದ್ದೇ ಶಸ್ತ್ರಚಿಕಿತ್ಸೆಗೊಳಗಾಗದ ಮಹಿಳೆ ಪ್ರಕಾಶಂ ಜಿಲ್ಲೆಯ ನಿವಾಸಿ ಕೋಟೇಶ್ವರಮ್ಮ.
ಮಹಿಳೆಯು ಚಿಕಿತ್ಸೆ ವೇಳೆ ಶಾಂತವಾಗಿ ಇರುವಂತೆ ನೋಡಿಕೊಳ್ಳಲು ಮತ್ತು ಚಿಕಿತ್ಸೆ ವೇಳೆ ಅವರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಅವರ ನೆಚ್ಚಿನ ನಟನ ಸಿನಿಮಾ ತೋರಿಸಲು ತೀರ್ಮಾನಿಸಲಾಯಿತು. ಹೀಗಾಗಿ, ಸಿನಿಮಾ ಇಲ್ಲಿ ಕೇವಲ ಮನರಂಜನೆಯಷ್ಟೇ ಅಲ್ಲ. ಅಕ್ಕೂ ಮಿಗಿಲಾದ ಪಾತ್ರ ನಿರ್ವಹಿಸಿದೆ.
ಮಿದುಳು ಗಡ್ಡೆಯನ್ನು ತೆರವುಗೊಳಿಸುವ ಶಸ್ತ್ರಚಿಕಿತ್ಸೆ ವೇಳೆ, ಹೆಚ್ಚಿನ ಸಂದರ್ಭದಲ್ಲಿ ತಲೆ ಬುರುಡೆಯ ಚಿಪ್ಪನ್ನು ತೆಗೆಯಲಾಗುತ್ತದೆ. ಆದರೆ, ಪ್ರತಿ ಸಂದರ್ಭದಲ್ಲಿಯೂ ಇದು ಕಡ್ಡಾಯವೇನಲ್ಲ. ಗಡ್ಡೆ ಎಲ್ಲಿದೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಅರಿವಳಿಕೆ ನೀಡಬಾರದೇಕೆ?
ಮಾತು, ಚಲನೆ, ದೃಷ್ಟಿ ಅಥವಾ ಸ್ಮರಣಶಕ್ತಿಯನ್ನು ನಿಯಂತ್ರಿಸುವಂತಹ ಮಿದುಳಿನ ನಿರ್ಣಾಯಕ ಜಾಗದಲ್ಲಿ ಗಡ್ಡೆ ಇದ್ದರೆ, ಅಂತಹ ರೋಗಿಯನ್ನು ಸಂಪೂರ್ಣ ನಿದ್ರೆಗೆ ಜಾರಿಸುವುದು (ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿಸುವುದು) ಅಪಾಯಕ್ಕೆ ದಾರಿಮಾಡಿಕೊಡಬಹುದು. ರೋಗಿಗೆ ಚಿಕಿತ್ಸೆ ವೇಳೆ ಏನಾದರೂ ತೊಂದರೆಯಾಗಿದೆ ಎಂಬುದು, ಅವರು ಎಚ್ಚರಗೊಳ್ಳುವವರೆಗೂ ವೈದ್ಯರಿಗೆ ಗೊತ್ತಾಗುವುದಿಲ್ಲ.
ಅಷ್ಟೇ ಅಲ್ಲ. ರೋಗಿಯನ್ನು ಎಚ್ಚರವಾಗಿಯೇ ಇಡುವುದರಿಂದ ಕೆಲವು ಅನುಕೂಲಗಳೂ ಇವೆ.
ಮಿದುಳಿನ ನಿರಂತರ ತಪಾಸಣೆ: ರೋಗಿಯು ಎಚ್ಚರವಾಗಿಯೇ ಇರುವುದರಿಂದ ಮಿದುಳಿನ ಕಾರ್ಯವನ್ನು ನಿರಂತರವಾಗಿ ಪರೀಕ್ಷಿಸಬಹುದು. ಗಡ್ಡೆ ಕತ್ತರಿಸುವ ವೇಳೆ ಮಿದುಳಿನ ನಿರ್ದಿಷ್ಟ ಭಾಗವನ್ನು ಸ್ಪರ್ಷಿಸಿದಾಗ (ಮಾತನಾಡುವ or ಕೈಗಳ ಚಲನೆ ಮೂಲಕ) ಪ್ರತಿಕ್ರಿಯಿಸಿದರೆ, ವೈದ್ಯರು ಎಚ್ಚರಿಕೆ ವಹಿಸಲು ಸಹಕಾರಿ..
ಆತಂಕ ತಪ್ಪಿಸಬಹುದು: ತಮ್ಮಿಷ್ಟದ ಸಿನಿಮಾ ನೋಡುವುದು, ಸಂಗೀತ ಕೇಳುವುದು ಅಥವಾ ನುಡಿಸುವುದರಿಂದ ರೋಗಿಯು ಆತಂಕಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಇದರಿಂದ, ಹೃದಯ ಬಡಿತವೂ ಸ್ಥಿರವಾಗಿರುತ್ತದೆ.
ಅರಿವಿನ ಮೇಲ್ವಿಚಾರಣೆ: ಶಸ್ತ್ರಚಿಕಿತ್ಸೆ ವೇಳೆ ಸಿನಿಮಾ ವೀಕ್ಷಿಸುವುದರಿಂದ ರೋಗಿಯ ನೈಜ ಸಮಯದಲ್ಲಿ ರೋಗಿಯ ವೀಕ್ಷಣಾ ಪ್ರಕ್ರಿಯೆ, ಏಕಾಗ್ರತೆ ಸಾಮರ್ಥ್ಯ, ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಮೇಲ್ವಿಚಾರಣೆ ನಡೆಸಬಹುದು.

