Dailyhunt Logo
  • Light mode
    Follow system
    Dark mode
    • Play Story
    • App Story
ಶಿಶುವಿಹಾರದಲ್ಲಿ ಮಕ್ಕಳ ಮೇಲೆ ಅಮಾನವೀಯ ವರ್ತನೆ: ರಾಜ್ಯಕ್ಕೆ ನೋಟಿಸ್

ಶಿಶುವಿಹಾರದಲ್ಲಿ ಮಕ್ಕಳ ಮೇಲೆ ಅಮಾನವೀಯ ವರ್ತನೆ: ರಾಜ್ಯಕ್ಕೆ ನೋಟಿಸ್

ಶಿಶು ವಿಹಾರ: ರಾಜ್ಯಕ್ಕೆ ನೋಟಿಸ್‌ ನವದೆಹಲಿ: ಬೆಂಗಳೂರಿನ ಐಟಿ ಕಂಪನಿಯೊಂದರ ಆವರಣದಲ್ಲಿರುವ ಶಿಶುವಿಹಾರದಲ್ಲಿ ಕೆಲವು ಪುಟ್ಟ ಮಕ್ಕಳನ್ನು ಕೇರ್‌ ಟೇಕರ್‌ಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿ ಆಧಾರದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ವಾಗಿ ದೂರು ದಾಖಲಿಸಿಕೊಂಡಿದೆ.

'ಈ ವರದಿಯ ವಿಷಯ ನಿಜವಾಗಿದ್ದರೆ, ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ' ಎಂದು ಗಮನಿಸಿರುವ ಆಯೋಗವು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕ ರಿಗೆ ನೋಟಿಸ್ ಜಾರಿ ಮಾಡಿ, ಎರಡು ವಾರಗಳಲ್ಲಿ ವಿವರವಾದ ವರದಿ ನೀಡುವಂತೆ ಸೂಚಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-4-331533097

Dailyhunt
Disclaimer: This content has not been generated, created or edited by Dailyhunt. Publisher: Prajavani