ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆಯ ನಂತರ ಸಿನಿಮಾ ಸುದ್ದಿಗಿಂತ ಹೆಚ್ಚು ವಿವಾದವೇ ಚರ್ಚೆಗೆ ಕಾರಣವಾಯಿತು. ಟ್ರೈಲರ್ ಲಾಂಚ್ ವೇಳೆ ಪ್ರಜ್ವಲ್ ದೇವರಾಜ್ ಅವರ ಗೈರುಹಾಜರಿ, ಡಬ್ಬಿಂಗ್ ವಿವಾದ, ಸಂಭಾವನೆ ಕುರಿತ ಆರೋಪ-ಪ್ರತ್ಯಾರೋಪಗಳು ಮತ್ತು ಅಭಿಮಾನಿಗಳ ಪ್ರತಿಭಟನೆಯಿಂದ ಸಿನಿಮಾ ಅನಿರೀಕ್ಷಿತವಾಗಿ ವಿವಾದದ ಕೇಂದ್ರಬಿಂದುವಾಯಿತು.
ಈ ವಿಶೇಷ ಸಂದರ್ಶನದಲ್ಲಿ ನಿರ್ದೇಶಕ ಗುರುದತ್ ಗಾಣಿಗ ಈ ವಿವಾದದ ಬಗ್ಗೆ ತಮ್ಮ ನಿಲುವನ್ನು ವಿವರಿಸಿದ್ದಾರೆ.

