Dailyhunt Logo
  • Light mode
    Follow system
    Dark mode
    • Play Story
    • App Story
ಬಂಗಾಲದ ಮದರಸಾಗಳಲ್ಲಿ 'ವಂದೇ ಮಾತರಮ್' ಹಾಡುವುದು ಕಡ್ಡಾಯ!

ಬಂಗಾಲದ ಮದರಸಾಗಳಲ್ಲಿ 'ವಂದೇ ಮಾತರಮ್' ಹಾಡುವುದು ಕಡ್ಡಾಯ!

ಮದರಸಾಗಳು ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕಾಗುವುದು

ಕೊಲಕಾತಾ (ಬಂಗಾಲ) - ಬಂಗಾಲದಲ್ಲಿನ ಭಾಜಪ ಸರಕಾರವು ರಾಜ್ಯದ 'ಅಲ್ಪಸಂಖ್ಯಾತ ವ್ಯವಹಾರ ಮತ್ತು ಮದರಸಾ ಶಿಕ್ಷಣ ವಿಭಾಗ'ದ ಅಡಿಯಲ್ಲಿ ಬರುವ ಎಲ್ಲ ಮದರಸಾಗಳಲ್ಲಿ 'ವಂದೇ ಮಾತರಮ್' ಗಾಯನವನ್ನು ಕಡ್ಡಾಯಗೊಳಿಸಿದೆ.

ಈ ನಿಯಮವು ಮದರಸಾಗಳಿಗೆ, ಹಾಗೆಯೇ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಮದರಸಾಗಳಿಗೆ ತಕ್ಷಣವೇ ಅನ್ವಯವಾಗುವುದು. ಇದಕ್ಕನುಸಾರ ತರಗತಿ ಪ್ರಾರಂಭವಾಗುವ ಮೊದಲು ಮುಂಜಾನೆಯ ಪ್ರಾರ್ಥನಾಸಭೆಯಲ್ಲಿ 'ವಂದೇ ಮಾತರಮ್' ಹಾಡುವುದು ಅವಶ್ಯಕವಾಗಿದೆ. ಈಗ ಎಲ್ಲ ಮದರಸಾಗಳು ಈ ಆದೇಶವನ್ನು ಜಾರಿಗೊಳಿಸಿದ ನಂತರ ಇದರ ವರದಿಯನ್ನು ವಿಭಾಗಕ್ಕೆ ಸಲ್ಲಿಸಬೇಕಾಗುವುದು.
ಇದಕ್ಕೂ ಮುನ್ನ ಮದರಸಾಗಳಲ್ಲಿ ಮುಂಜಾನೆಯ ಪ್ರಾರ್ಥನೆಯ ಸಮಯದಲ್ಲಿ ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ಕವಿ ಗುಲಾಮ ಮುಸ್ತಫಾ ಇವರ 'ಅನಂತ ಅಸೀಮ ಪ್ರೇಮಮಯ ತುಮಿ' (ಬಂಗಾಲಿ ಗೀತೆ) ಹಾಡುತ್ತಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada