Dailyhunt
ಹಿಂದೂ ಬಾಲಕಿಯ ಅಪಹರಣ ತಡೆಯಲು ಬಂದ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ!

ಹಿಂದೂ ಬಾಲಕಿಯ ಅಪಹರಣ ತಡೆಯಲು ಬಂದ ಹಿಂದೂ ವ್ಯಕ್ತಿಯ ಬರ್ಬರ ಹತ್ಯೆ!

ರಾಯಚೂರು : ಮುಸಲ್ಮಾನ ಯುವಕರಿಂದ ಅಪ್ರಾಪ್ತ ಹಿಂದು ಹುಡುಗಿಯ ಅಪಹರಣ ಪ್ರಕರಣ

ರಾಯಚೂರು - ಇಲ್ಲಿನ ಅಸ್ಲಂ ಎಂಬ ಹೆಸರಿನ ಮುಸಲ್ಮಾನ ಯುವಕನೊಬ್ಬ ೧೪ ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದನು. ಈ ಅಪಹರಣವನ್ನು ತಡೆಯಲು ಮುಂದೆ ಬಂದ ಈಶಪ್ಪ (ವಯಸ್ಸು ೩೦ ವರ್ಷ) ಎಂಬ ಹಿಂದೂ ವ್ಯಕ್ತಿಯನ್ನು ಮುಸಲ್ಮಾನರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ.

೧. ಘಟನೆಯ ರಾತ್ರಿ ಈಶಪ್ಪ ಅವರು ತಮ್ಮ ಮನೆಯ ಛಾವಣಿಯ ಮೇಲೆ ಮಲಗಿದ್ದರು. ಆಗ ಅಸ್ಲಂ ಮತ್ತು ಅವನ ಸ್ನೇಹಿತರು ಓರ್ವ ೧೪ ವರ್ಷದ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿಕೊಂಡು ಹೋಗುತ್ತಿರುವುದು ಈಶಪ್ಪ ಅವರು ಗಮನಿಸಿದರು.

೨. ಸಂತ್ರಸ್ತ ಹುಡುಗಿಯು ಈಶಪ್ಪ ಅವರ ಸ್ನೇಹಿತ ಆಂಜನೇಯ ಅವರ ಸಹೋದರನ ಮಗಳಾಗಿದ್ದಳು. ಆದ್ದರಿಂದ ಈಶಪ್ಪ ಅವರು ಕೂಡಲೇ ತಮನೆಯಿಂದ ಕೆಳಗೆ ಬಂದು ಆ ಯುವಕರನ್ನು ತಡೆದರು ಮತ್ತು 'ಹುಡುಗಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ?' ಎಂದು ಪ್ರಶ್ನಿಸಿದರು.

೩. ಆಗ ಕೋಪಗೊಂಡ ಅಸ್ಲಂ ಮತ್ತು ಅವನ ತಂಡ ಒಂದು ತಂತಿಯನ್ನು ಈಶಪ್ಪ ಅವರ ಕುತ್ತಿಗೆ ಬಿಗಿದು ಹತ್ಯೆ ಮಾಡಿದರು. ಹತ್ಯೆ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾದರು.

೪. ಮುಸಲ್ಮಾನ ಯುವಕರು ಅಪಹರಿಸಿದ ಹುಡುಗಿಯ ಮನೆಯ ಮುಂದೆಯೇ ಈಶಪ್ಪ ಅವರ ಮೃತದೇಹವನ್ನು ಇರಿಸಿದರು. ದೋಷಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಸಂತ್ರಸ್ತ ಕುಟುಂಬದವರು ಪಟ್ಟು ಹಿಡಿದಿದ್ದಾರೆ.

೫. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Sanatan Prabhat Kannada