Dailyhunt Logo
  • Light mode
    Follow system
    Dark mode
    • Play Story
    • App Story
ಈ ರಾಶಿಯವರ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಈ ರಾಶಿಯವರ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಭಾರಿ ಲಾಭ

ಈ ರಾಶಿಯವರ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಈ ರಾಶಿಯವರ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಭಾರಿ ಲಾಭ

Suddikshana 1 week ago

ಮಂಗಳವಾರದ ರಾಶಿ ಭವಿಷ್ಯ - 02 ಜೂನ್ 2026

ಸೂರ್ಯೋದಯ - 5:44 ಬೆ.
ಸೂರ್ಯಾಸ್ತ - 6:43 ಸಂಜೆ

ಶಾಲಿವಾಹನ ಶಕೆ -1948
ಸಂವತ್-2082

ರಾಭವ ನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಅಧಿಕ ಜೇಷ್ಠ ಮಾಸ,
ಗ್ರೀಷ್ಮ ಋತು,
ತಿಥಿ - ಬಿದಿಗೆ 7:01 ರಾ.ವರೆಗೆ ನಂತರ ತದಿಗೆ

ನಕ್ಷತ್ರ - ಮೂಲ 9:58 ರಾ.ವರೆಗೆ
ನಂತರ ಪೂರ್ವಾಷಾಢ
ಯೋಗ - ಸಾಧ್ಯ
ಕರಣ - ತೈತಲೆ

ರಾಹು ಕಾಲ - 03:00 ದಿಂದ 04:30 ವರೆಗೆ
ಯಮಗಂಡ - 09:00ದಿಂದ 10:30 ವರೆಗೆ
ಗುಳಿಕ ಕಾಲ - 12:00 ದಿಂದ 01:30 ವರೆಗೆ

ಬ್ರಹ್ಮ ಮುಹೂರ್ತ - 4:08 ಬೆ. ದಿಂದ 4:56 ಬೆ.ವರೆಗೆ
ಅಮೃತ ಕಾಲ - 2:59 ಮ.ದಿಂದ 4:47 ಸಂಜೆ.ವರೆಗೆ
ಅಭಿಜಿತ್ ಮುಹುರ್ತ - 11:48 ಬೆ.ದಿಂದ 12:40 ಮ.ವರೆಗೆ

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ಮೇಷ ರಾಶಿ

ಈಗ ಕೈ ಹಿಡಿದ ಕಾರ್ಯಗಳಲ್ಲಿ ಫಲ ಶ್ರುತಿ, ಸ್ತ್ರೀ ಸುಖ,ಆತ್ಮೀಯರಿಂದ ಆರ್ಥಿಕ ನೆರವು ದೊರೆಯುತ್ತದೆ. ಹಳೆಯ ಸಾಲಗಳಿಂದ ಮುಕ್ತಿ ದೊರೆಯುತ್ತದೆ. ರಿಯಲ್ ಎಸ್ಟೇಟ್ ವ್ಯಾಪಾರ ವ್ಯವಹಾರ ಮೇಲೆ ಅಭಿವೃದ್ಧಿ ಲಾಭ ಕಂಡು ಬರುತ್ತದೆ, ರಿಯಲ್ ಎಸ್ಟೇಟ್ ಗಳಿಗಾಗಿ ಹೂಡಿಕೆ ಮಾಡಿ, ಮಕ್ಕಳ ಸಂಗ ಸಹವಾಸದ ಕಡೆ ಗಮನ ಹರಿಸುವುದು ಉತ್ತಮ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ ಮತ್ತು ವ್ಯಾಪಾರದ ವಿಷಯದಲ್ಲಿ ಹೊಸ ಹೂಡಿಕೆಗಳನ್ನು ಪಡೆಯುತ್ತೀರಿ. ಉತ್ತಮ ಆರೋಗ್ಯ, ವಿವಾಹ ಯೋಗ,ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಪುತ್ರಾದಿ ಯೋಗ, ಕೆಲವರಿಗೆ ಹಿತೈಷಿಗಳ ಒಳಸಂಚುಗಳಿಂದ ಬಂಧನದ ಭೀತಿ, ಮಗಳ ಸಂಸಾರದಲ್ಲಿ ಮನಸ್ತಾಪ, ಸಂಗಾತಿಯೊಂದಿಗೆ ಕಲಹ. ಅಜಾಗ್ರತೆಯಿಂದ ವಾಹನ ಅಪಘಾತ ಸಾಧ್ಯತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
'ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು'
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ

ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು ಒಳಸಂಚುಗಳಿಂದ ಕಾನೂನಿನ ಮುಷ್ಟಿಗೆ ಸಿಲುಕುತ್ತಾರೆ, ನೆರೆಹೊರೆಯವರೊಂದಿಗೆ ಇದ್ದ ಆಸ್ತಿ ವಿವಾದ ಬಗೆಹರಿಯುತ್ತದೆ. ಅತಿ ಶೀಘ್ರದಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ, ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತೀರಿ, ಪತ್ರಿಕಾ ಪ್ರತಿನಿಧಿಗಳಿಗೆ ಶುಭವಿದೆ, ಸಂಗೀತ ಕಲಾವಿದರು ಅಪರೂಪದ ಅವಕಾಶ ಪಡೆಯುವರು,ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳ ಸಹಾಯದಿಂದ ಬಡ್ತಿ ಹೆಚ್ಚಾಗುತ್ತದೆ. ಆಭರಣ ತಯಾರಿಕಾ ಲಾಭಕರ,ಶಿಕ್ಷಣ ಕ್ಷೇತ್ರದಲ್ಲಿ ಅಡ್ಡಿ ಆತಂಕಗಳು ಮೆಟ್ಟಿ ನಿಲ್ಲುವಿರಿ,ಪ್ರಮುಖ ಕಾರ್ಯಗಳಲ್ಲಿ ವಿಶ್ವಾಸದಿಂದ ಕೆಲಸ ಮಾಡಿ ಮತ್ತು ಲಾಭವನ್ನು ಪಡೆದುಕೊಳ್ಳುತ್ತೀರಿ. ರಿಯಲ್ ಎಸ್ಟೇಟ್ ಡೆವೆಲಪರ್ಸ್ ಪ್ರತಿನಿಧಿಗಳಿಗೆ ಸವಾಲಿನ ದಿನಗಳು,ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಾಲುಗಾರಿಕೆ ವ್ಯಾಪಾರ ವ್ಯವಹಾರಗಳಲ್ಲಿ ಮೋಸ ಸಂಭವ, ನಿಮ್ಮ ಜಾಣ್ಮೆಯಿಂದ ಈ ದೇಶದಲ್ಲಿ ಉದ್ಯೋಗ ಪಡೆಯುವಿರಿ, ಸಂತಾನ ಪ್ರಾಪ್ತಿ ಯೋಗವಿದೆ, ಹಣಕಾಸಿನ ಅಡಚಣೆಯಿಂದಾಗಿ ಮನೆಕೊಳ್ಳುವ ಕಟ್ಟುವ ಯೋಜನೆ ಮುಂದೆ ಹೋಗಲಿದೆ.

ಮಿಥುನ ರಾಶಿ

ಒಳಸಂಚುಗಳಿಂದ ಬಂಧನದ ಭೀತಿ ಕಾಡಲಿದೆ, ದಾಂಪತ್ಯ ಮನಸ್ತಾಪ ಮುಂದುವರಿಯುವುದು, ನರ ಸಂಬಂಧಿತ ಕಾಯಿಲೆ ಕಾಡಲಿದೆ, ಸಾಲಬಾಧೆ ಹೆಚ್ಚಾಗಿ, ಮಾನಸಿಕ ತಲೆನೋವು ಉಂಟಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಸಂಗಾತಿಯೊಂದಿಗೆ ಕಲಹ,ಆತ್ಮೀಯರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಅಧಿಕಾರಿಗಳ ಜೊತೆ ನೀವು ಆಡುವ ಮಾತಿನ ಮೇಲೆ ನಿಗಾ ಇರಲಿ,ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅನಿರೀಕ್ಷಿತ ವಿಷಯಗಳು ತಿಳಿದು ಬರುತ್ತವೆ. ವಿವಾಹ ಯೋಗವಿದೆ,ನಿಮ್ಮ ಪತ್ನಿ, ಸರ್ಕಾರಿ ಕೆಲಸ ಸಿಗುವ ಭಾಗ್ಯ ಇದೆ, ಸ್ಥಿರಾಸ್ತಿ ವ್ಯವಹಾರಗಳು ತುಂಬಾ ಕಷ್ಟದಿಂದ ಪೂರ್ಣಗೊಳ್ಳುತ್ತವೆ . ಜನಪ್ರತಿನಿಧಿಗಳಿಗೆ ಮತ್ತು ರಾಜಕಾರಣಿಗಳಿಗೆ ಹೆಚ್ಚಿನ ಜವಾಬ್ದಾರಿ ಭಾಗ್ಯ ಸಿಗುತ್ತದೆ,ಪಾಲುದಾರಿಕೆ ವ್ಯಾಪಾರದಲ್ಲಿ ಆದಾಯ ಕಡಿಮೆಯಾಗುತ್ತದೆ,ವೃತ್ತಿಪರ ಉದ್ಯೋಗಗಳಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ. ಶಿಕ್ಷಕ ವೃಂದದವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಡ್ಡಿ ಆತಂಕಗಳು ಎದುರಿಸುವಿರಿ,

ಕಟಕ ರಾಶಿ

ಕಮಿಷನ್ ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಕುಂಠಿತ, ಪುಸ್ತಕ ವ್ಯಾಪಾರ ಮಧ್ಯಮ,ದಿನನಿತ್ಯದ ವಸ್ತುಗಳ ಮಾರಾಟಗಾರರು ಸವಾಲು ಎದುರಿಸುವಿರಿ, ಗ್ರಹಿಣಿಯರು ಸಣ್ಣ ಪುಟ್ಟ ವ್ಯಾಪಾರ ಅಥವಾ ಸೇವಾ ವೃತ್ತಿಯಿಂದ ಹಣ ಗಳಿಸುತ್ತಾರೆ,ನಿಮ್ಮ ಪತ್ನಿಗೆ ಕಿವಿಯ ತೊಂದರೆ ಕಾಡಲಿದೆ, ಸ್ನೇಹಿತರು ನಿಮ್ಮ ಅಭಿಪ್ರಾಯಗಳನ್ನು ಇಷ್ಟಪಡುವುದಿಲ್ಲ. ಯೋಜಿತ ಸಮಯದಲ್ಲಿ ಯೋಜಿತ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಬಂಧುಗಳೊಂದಿಗೆ ಸಣ್ಣ ಪುಟ್ಟ ವಿಚಾರಕ್ಕೆ ಕಲಹ, ಮಕ್ಕಳಿಂದ ಅಪಕೀರ್ತಿ, ಅನಿರೀಕ್ಷಿತ ಕೂಡಿಟ್ಟಿದ್ದ ಹಣ ಹಾನಿ,ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳಿರುತ್ತವೆ. ಮನೆಯ ಹೊರಗಿನ ಒತ್ತಡದಿಂದ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳಿರುತ್ತವೆ. ಹಿರಿಯ ಅಧಿಕಾರಿಗಳ ಜೊತೆ ಕಿರಿಕಿರಿಯಿಂದ ಉದ್ಯೋಗ ಸ್ಥಾನ ಬದಲಾವಣೆ ಪ್ರಯತ್ನ,ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ವಿವಾಹ ವಿಗ್ರಹ ಮುಂದುವರಿಯಲಿದೆ.

ಸಿಂಹ ರಾಶಿ

ಎದುರಾಳಿಗಳ ಒಳಸಂಚುಗಳಿಂದ ಉದ್ಯೋಗದಲ್ಲಿ ಹಿಂಬಡ್ತಿ, ಅಂತಾನ ವಿಚಾರದಲ್ಲಿ ತೊಂದರೆ, ಹಣಕಾಸಿನ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಮಕ್ಕಳ ದುಶ್ಚಟ ಬಿಡಿಸುವ ಸವಾಲು,ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಪರಸ್ತ್ರೀ ವ್ಯಾಮೋಹ ಕಾಡಲಿದೆ,ವೃತ್ತಿಪರ ಉದ್ಯೋಗಗಳಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ವ್ಯವಹರಿಸುತ್ತೀರಿ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ವಾಹನ ಯೋಗವಿದೆ. ಸಂಗಾತಿಯೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಪ್ರೇಮದಲ್ಲಿ ಜಯ ಮನಸ್ಸಿನ ಆಸೆ ಈಡೇರುವ ದಿನ, ಪತಿ ಪತ್ನಿಯಲ್ಲಿ ಭಿನ್ನಾಭಿಪ್ರಾಯ ಅಧಿಕ ಕೌಟುಂಬಿಕ ಕಲಹ ಅಧಿಕ.

ಕನ್ಯಾ ರಾಶಿ

ಪತಿ ಪತ್ನಿಯಲ್ಲಿ ಪ್ರೇಮ ಮುಂದುವರೆಯಲಿದೆ ಬಂಧು ಮಿತ್ರರಲ್ಲಿ ಉತ್ತಮ ಬಾಂಧವ್ಯ,ವ್ಯಾಪಾರದಲ್ಲಿ ಪ್ರಗತಿ,ಉದ್ಯೋಗದಲ್ಲಿ ಉತ್ತಮ ಬದಲಾವಣೆ, ಕಲಹಗಳಲ್ಲಿ ಜಯ,ಕೋರ್ಟ್ ತೀರ್ಪು ನಿಮ್ಮಂತೆ ಆಗಲಿದೆ,ಹಠಾತ್ ಧನ ಲಾಭ ಉಂಟಾಗುತ್ತದೆ. ಬಂಧು ಮಿತ್ರರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಆನ್ಲೈನ್ ಜೂಜಾಟಿಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಇದರಿಂದ ಧನ ನಷ್ಟ,ಹೊಸ ವ್ಯಾಪಾರಗಳನ್ನು ಪ್ರಾರಂಭಿಸುತ್ತೀರಿ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಆರೋಗ್ಯದ ನಿಮಿತ್ಯ ಧನ ವ್ಯಯ ,ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ಪರಸ್ತ್ರೀಯಲ್ಲಿ ಆಸಕ್ತಿ, ವಿದೇಶ ಪ್ರಯಾಣ, ಪ್ರೇಮದಲ್ಲಿ ಜಯ,ಮನಸ್ಸಿನ ಆಸೆ ಈಡಿರುವುದು.

ತುಲಾ ರಾಶಿ

ಕಾನೂನು ಸಂಬಂಧಪಟ್ಟ ಕೆಲಸದಲ್ಲಿ ಹಿನ್ನಡೆ, ಭೂ ವಿವಾದದಿಂದ ಮನಸ್ಸಿಗೆ ನೋವು, ವಾಹನಚರಿಸುವಾಗ ಎಚ್ಚರಿಕೆ ಇರಲಿ ಸರಕಾರಿ ನೌಕರರು ಹಿರಿಯ ಅಧಿಕಾರಿಗಳ ಅವಕೃಪೆಗೆ ಒಳಗಾಗುವಿರಿ, ಪ್ರಮುಖ ವಿಷಯಗಳಲ್ಲಿ ಸ್ವಂತ ನಿರ್ಧಾರಗಳು ಪತ್ನಿ ಜೊತೆ ಚರ್ಚಿಸಿ . ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಚುರುಕುತನ ಮತ್ತು ಕಾರ್ಯದಕ್ಷತೆ ಉನ್ನತ ಸ್ಥಾನ ನೀಡುತ್ತದೆ, ರಾಜಕೀಯ ಪ್ರವೇಶಿಸುವ ಸಕಾಲ, ಕೃಷಿಗೆ ಸಂಬಂಧಿಸಿದ ಕೈಗೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಮೂಲ್ಯ ದಾಖಲೆಗಳ ಬಗ್ಗೆ ಜಾಗೃತಿ ವಹಿಸಿ, ಎದುರಾಳಿಗಳನ್ನು ಅಷ್ಟು ಸಲೀಸಾಗಿ ನಂಬಬೇಡಿ,ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ, ಪುಟ್ಟ ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ, ಮಕ್ಕಳ ಭೇಟಿಗಾಗಿ ವಿದೇಶ ಪ್ರಯಾಣ, ವಧು-ವರ ಅನ್ವೇಷಣ ಕೇಂದ್ರ ನಡೆಸುತ್ತಿರುವವರಿಗೆ ಉತ್ತಮ ಆದಾಯ, ಜನಪ್ರಿಯ ದೊರೆಯುತ್ತದೆ. ವ್ಯಾಪಾರದಲ್ಲಿ ವಿವಾದ ಇರುತ್ತದೆ,ಹಣಕಾಸಿ ಸಂಸ್ಥೆಯಲ್ಲಿ ಹಿನ್ನಡೆ ಸಾಧ್ಯ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
'ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು'
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ

ಆದಾಯಕ್ಕೆ ಉತ್ತಮ ದಿವಸ ಹಣ ಉಳಿಸಿ, ಅಧಿಕಾರಿಗಳು ಮೋಸಹೋಗುವ ಸಾಧ್ಯತೆ, ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಶುಭ ಸುದ್ದಿ ದೊರೆಯುತ್ತದೆ. ನಿಮ್ಮ ಸ್ವಂತ ಬೇಕರಿ ಹೋಟೆಲ್ ಆರಂಭಿಸಿರುವ ಕನಸು ನನಸಾಗಲಿದೆ, ರಾಜಕಾರಣಿಗಳಿಗೆ ಜಾಗೃತಿ ಅಗತ್ಯ, ಸ್ಟಾಕ್ ಷೇರಿನ ವ್ಯವಹಾರ ಬೇಡ,ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ವಿದೇಶಿ ವಿನಿಮಯದಿಂದ ಉತ್ತಮ ಲಾಭ,ಶಿಕ್ಷಕ ವೃಂದಕ್ಕೆ ಶುಭ ಫಲ,ನೀರಿಗೆ ಸಂಬಂಧಿಸಿದ ವ್ಯಾಪಾರ ಮಾಡುತ್ತಿದ್ದಲ್ಲಿ ಆದಾಯ ಏರಿಕೆ, ಅಧಿಕ ಬಂಡವಾಳ ಹೂಡದಿರಿ, ನಿಮ್ಮ ಶರೀರಕ್ಕೆ ನೀರಿನ ಅಂಶ ಹೆಚ್ಚಾಗಬಹುದು, ಕುಟುಂಬದ ಆದಾಯ ಹೆಚ್ಚಾಗುತ್ತದೆ, ಹಣಕಾಸಿನ ವಿಚಾರದಲ್ಲಿ ಒಗ್ಗಟ್ಟಿನಿಂದ ಮುಂದುವರೆಯಿರಿ,ಉದ್ಯೋಗದಲ್ಲಿ ಅನುಕೂಲತೆ ಹೆಚ್ಚಾಗುತ್ತದೆ,ಕೈಗೆತ್ತಿಕೊಂಡ ಕೆಲಸಗಳು ಉತ್ತಮವಾಗಿ ನಡೆಯುತ್ತವೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ನಿರುದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ, ಬರಹಗಾರರಿಗೆ ಗೌರವ ಪ್ರಶಸ್ತಿ ಪ್ರಾಪ್ತಿ, ಪತ್ರಿಕಾ ಪ್ರತಿನಿಧಿಗಳಿಗೆ ಉತ್ತಮ ಸಮಯ,ಕಲಾವಿದರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಧನುಸ್ಸು ರಾಶಿ

ಅನಾವಶ್ಯಕ ಜಗಳದಿಂದ ಸತಿಪತಿ ವಿರಸ, ಆಸ್ತಿ ವಿಚಾರಕ್ಕಾಗಿ ವಿವಾದ ವಾಗ್ವಾದ ಕಲಹ ಕಂಡುಬರುತ್ತದೆ,ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಯತ್ನಿಸಿದ ಕಾರ್ಯಗಳಲ್ಲಿ ವಿಳಂಬ, ಉದ್ಯೋಗಿಗಳಿಗೆ ಪರ ಸ್ಥಳ ವರ್ಗಾವಣೆ ಆದ್ದರಿಂದ ಬಹಳ ತೊಂದರೆ,ಪ್ರಮುಖ ವಿಷಯಗಳಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಹೂಡಿಕೆಗಳು ದೊರೆಯುತ್ತವೆ. ಶಾಲಾ-ಕಾಲೇಜು ಉಪನ್ಯಾಸಕರಿಗೆ ಸಿಹಿ ಸುದ್ದಿ,ಹೊಸ ವಸ್ತ್ರ, ಆಭರಣ ಖರೀದಿಸಲಾಗುತ್ತದೆ, ಪುಸ್ತಕದ ಆದಾಯ ಕುಂಠಿತ, ಸಾಲ ಕೂಡ ಇರುತ್ತದೆ,ಇತರರಿಂದ ನಿರೀಕ್ಷಿತ ಸಹಾಯ ದೊರೆಯುತ್ತದೆ. ಸಹೋದರರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ನಿಮ್ಮ ತಂದೆಯ ಆಸ್ತಿಯಲ್ಲಿ ಸಿಂಹ ಪಾಲು ಲಭಿಸಲಿದೆ, ಅರ್ಧಕ್ಕೆ ನಿಂತ ಕಟ್ಟಡ ಪೂರ್ಣಗೊಳ್ಳಲಿದೆ.

ಮಕರ ರಾಶಿ

ಕಡಿಮೆ ಬಂಡವಾಳ ಹೂಡಿಕೆ ಮಾಡಿದರೆ ಧನ ಲಾಭ ಗಳಿಸುವಿರಿ, ಮಾಡದ ಕೆಲಸಕ್ಕೆ ಇತರರಿಂದ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಪುಸ್ತಕ ಲೇಖನ ಸಾಮಗ್ರಿಗಳ ವ್ಯಾಪಾರ ಲಾದಾಯಕ, ಸಾರಿಗೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ನಷ್ಟ, ಅನಗತ್ಯ ವಸ್ತುಗಳಿಗೆ ಹಣ ವ್ಯಯವಾಗುತ್ತದೆ. ವೈದ್ಯಕೀಯ ರಂಗದಲ್ಲಿ ಶಸ್ತ್ರಚಿಕಿತ್ತಾ ತಜ್ಞರಿಗೆ ವಿಶೇಷ ಬೇಡಿಕೆ ಹಾಗೂ ಧನ ಲಾಭ,ಕೆಲಸದ ಒತ್ತಡ ಹೆಚ್ಚಾಗುತ್ತದೆ ಮತ್ತು ಸಮಯಕ್ಕೆ ನಿದ್ರೆ ಆಹಾರ ಇರುವುದಿಲ್ಲ. ಕಣ್ಣಿನ ಸಂಬಂಧಿ ಕಾಯಿಲೆಗಳು ನೋವುಂಟು ಮಾಡುತ್ತವೆ. ನಿಮ್ಮ ಮಕ್ಕಳಿಗೆ ಸರ್ಕಾರ ಉದ್ಯೋಗ ದೊರೆಯುತ್ತದೆ,ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ. ಆತ್ಮೀಯರೊಂದಿಗೆ ವಿವಾದಗಳು ಉಂಟಾಗುತ್ತವೆ. ಅಧಿಕಾರಿಗಳಿಗೆ ಅಧಿಕಾರದೊಂದಿಗೆ ಹಣ ಬಲ ಹೆಚ್ಚುತ್ತದೆ, ರಿಯಲ್ ಎಸ್ಟೇಟ್ ಉದ್ಯೋಗಸ್ಥರು ವಿವಾದ ಎದುರಿಸಬೇಕಾಗುತ್ತದೆ, ಮಾರಾಟ ಪ್ರತಿನಿಧಿಗಳು ವ್ಯಾಪಾರದಲ್ಲಿ ಲಾಭವಿದೆ, ವಧು-ವರ ಅನ್ವೇಷಣಾ ಕೇಂದ್ರ ಹೊಂದಿದವರಿಗೆ ಜನಪ್ರಿಯತೆ ಹಾಗೂ ಧನ ಲಾಭ ಸಿಗಲಿದೆ, ಸರಕಾರಿ ನೌಕರರು ಬಡ್ತಿ ಪಡೆದು ವರ್ಗಾವಣೆ ಆಗುತ್ತಾರೆ, ಅಧಿಕಾರಿಗಳು ವಿವಾದಕ್ಕೆ ಗುರಿಯಾಗುತ್ತಾರೆ,ಆಸ್ತಿ ಖರೀದಿ ಯೋಗ ಇದೆ,ವಿದೇಶ ಪ್ರವಾಸ ಕಾರ್ಯ ಚುರುಕು.

ಕುಂಭ ರಾಶಿ

ಹಿರಿಯ ಅಧಿಕಾರಿಗಳ ಕಿರಿಕರಿಂದ ಸ್ಥಾನ ಬದಲಾವಣೆ,ಅನಾವಶ್ಯಕ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು, ಕೌಟುಂಬಿಕ ಕಲಹ ಅಧಿಕವಾಗುತ್ತದೆ,ಪತಿ-ಪತ್ನಿ ಭಿನ್ನಾಭಿಪ್ರಾಯ ಅಧಿಕ, ಸಮಾಜದಲ್ಲಿ ಪ್ರತಿಷ್ಟೆ ಗೌರವಗಳು ಹೆಚ್ಚಾಗುತ್ತವೆ. ಬಂಧುಮಿತ್ರರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಅವಮಾನಕರ ಘಟನೆಯಿಂದ ಮನಸ್ಸು ದುರ್ಬಲವಾಗುವುದು, ಲೆವಾದೇವಿ ವ್ಯಾಪಾರದಲ್ಲಿ ಹಾನಿ ಕಂಡುಬರುವುದು, ವಿವಾಹ ವಿಘ್ನ, ಉದ್ಯೋಗದಲ್ಲಿ ಅನಾನುಕೂಲ, ಎದುರಾಳಿಗಳ ಒಳಸಂಚುಗಳಿಂದ ಹಿಂಬಡ್ತಿ ಯೋಗ, ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ, ಮಕ್ಕಳ ಶೈಕ್ಷಣಿಕ ವಿಷಯಗಳು ತೃಪ್ತಿಕರವಾಗಿ ಸಾಗುತ್ತವೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ರಾಜಕಾರಣಿಗಳಿಗೆ ಸ್ಥಾನಮಾನ, ಸಂತಾನ ವಿಷಯದಲ್ಲಿ ತೊಂದರೆ, ಆರೋಗ್ಯದಲ್ಲಿ ಶಸ್ತ್ರಚಿಕಿತ್ಸೆ ಸಾಧ್ಯತೆ,

ಮೀನ ರಾಶಿ

ಈ ರಾಶಿಯವರು ಕೆಟ್ಟ ನಡತೆ ಬಿಟ್ಟು ಒಳ್ಳೆತನದಿಂದ ನಡೆದರೆ ಸಂಗಾತಿ ನಿಮ್ಮವಳಾಗುವರು, ಮಕ್ಕಳಿಂದ ಮಾನ ನಾಶ, ಸಂಗಾತಿಯೊಂದಿಗೆ ಕಿರು ಪ್ರವಾಸ, ಇವರು ಮನಸ್ಸು ಹಾಗೂ ಉದ್ಯೋಗ ಕೂಡ ಸ್ಥಿರವಾಗಿರುವುದಿಲ್ಲ, ಪ್ರಯಾಣದಲ್ಲಿ ರಸ್ತೆ ಅಡೆ ತಡೆಗಳು ಉಂಟಾಗುತ್ತವೆ. ಹಣದ ವಿಚಾರದಲ್ಲಿ ಆತುರದ ನಿರ್ಧಾರಗಳು ಒಳ್ಳೆಯದಲ್ಲ. ಆದಾಯಕ್ಕೆ ಸಂಬಂಧಿಸಿದ ಹೊಸ ಮೂಲಗಳ ಹುಡುಕಾಟ,ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನೆಗಳಿವೆ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುತ್ತವೆ. ಆಸ್ತಿ ಸಂಪಾದನೆ, ಶತ್ರುಗಳ ದಮನ,ಮನಸ್ಸಿನ ಕಾರ್ಯ ಈಡೇರಿಕೆ, ವೃತ್ತಿಯಲ್ಲಿ ಅನುಕೂಲ,ಕೆಲಸ ಕಾರ್ಯಗಳಲ್ಲಿ ಯಶಸ್ಸು, ವ್ಯಾಪಾರದಲ್ಲಿ ಅಭಿವೃದ್ಧಿ,ಮನೆಯ ಹೊರಗೆ ಪ್ರತಿಯೊಂದು ವಿಷಯದಲ್ಲೂ ಜಾಗರೂಕರಾಗಿರಿ. ವಿವಾದಗಳಿಂದ ದೂರವಿರುವುದು ಉತ್ತಮ. ಆಗಾಗ ಕೌಟುಂಬಿಕ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ತಂದೆ ತಾಯಿ ಆರೋಗ್ಯದಲ್ಲಿ ತೊಂದರೆ, ಆದಾಯ ಉತ್ತಮವಾಗಿದ್ದರೂ ಖರ್ಚು ವೆಚ್ಚಗಳ ಅಧಿಕ, ಪ್ರೇಮಿಗಳ ಮದುವೆ ಹಿರಿಯರ ಕಡೆಯಿಂದ ಅನುಮೋದನೆ, ಹಿತ ಶತ್ರುಗಳ ಕಿರಿಕಿರಿ, ಅಧಿಕಾರಿಗಳಿಂದ ಪ್ರಶಂಸೆ,ಪಿತ್ತ ಎದೆ ಉರಿತ ಕಂಡುಬರುತ್ತದೆ, ವಿಲಾಸಿ ಜೀವನದ ಕಡೆ ಒಲವು ಕಂಡುಬರುತ್ತದೆ, ನಿಶ್ಚಿತಾರ್ಥ ಬಗ್ಗೆ ಚರ್ಚೆ, ಸಂಗಾತಿಯೊಂದಿಗೆ ಸುಂದರ ತಾಣಗಳಿಗೆ ಭೇಟಿ, ಕೆಲವರಿಗೆ ವಿದೇಶ ಪ್ರಯಾಣ,ಪ್ರೇಮದಲ್ಲಿ ಜಯ.

Dailyhunt
Disclaimer: This content has not been generated, created or edited by Dailyhunt. Publisher: Suddikshana