Dailyhunt Logo
  • Light mode
    Follow system
    Dark mode
    • Play Story
    • App Story
Karnataka Weather Forecast: ವಾಯುಭಾರ ಕುಸಿತದ ಪರಿಣಾಮ ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ! ಬಿರುಗಾಳಿ ಸಹಿತ ಭಾರೀ ಮಳೆ ಎಚ್ಚರಿಕೆ

Karnataka Weather Forecast: ವಾಯುಭಾರ ಕುಸಿತದ ಪರಿಣಾಮ ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ! ಬಿರುಗಾಳಿ ಸಹಿತ ಭಾರೀ ಮಳೆ ಎಚ್ಚರಿಕೆ

TimesNowSuddi 5 days ago

ರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ (Cyclonic Circulation) ಹಿನ್ನಲೆ ಕರ್ನಾಟಕದ ಕರಾವಳಿ ಭಾಗದಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಕೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿಯ ಪ್ರಕಾರ, ಕರ್ನಾಟಕದ ಕೆಲ ಜಿಲ್ಲೆಗಳಿಗೂ ಅಲರ್ಟ್ ಘೋಷಣೆ ಮಾಡಲಾಗಿದೆ.

ಇಂದಿನ ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ವರದಿಯಾಗಿದೆ.

ಆಲಿಕಲ್ಲು ಮಳೆ ಜೊತೆ ಯೆಲ್ಲೋ ಅಲರ್ಟ್‌:

ಜೂನ್‌ 9ರ ವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನ ಜೊತೆಗೆ ಕೆಲವೆಡೆ ಆಲಿಕಲ್ಲು ಮಳೆ ಅಂದಾಜಿಸಲಾಗಿದೆ. ಇನ್ನು, ಇಂದಿನಿಂದ (ಜೂ.4) 3 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ. ಗದಗ, ಮೈಸೂರು ಸೇರಿ ಎಂಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಬೆಂಗಳೂರಿನಲ್ಲಿ ಸಹ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ಹವಾಮಾನ ವರದಿ

ಇನ್ನು, 24 ಗಂಟೆಗಳಲ್ಲಿ ಬೆಂಗಳೂರಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ. ಗರಿಷ್ಠ ಉಷ್ಣಾಂಶ 32.2°C ಮತ್ತು ಕನಿಷ್ಠ ಉಷ್ಣಾಂಶ 22.8°C ದಾಖಲಾಗಲಿದೆ. ಕಳೆದ ಕೆಲ ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಅಲ್ಲದೇ ಮಧ್ಯಾಹ್ನ ನಂತರ ಬಹುತೇಕ ಬೆಂಗಳೂರಿನಾದ್ಯಂತ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ.

ಅದರಂತೆ ಇಂದು (ಜೂನ್‌ 4), ಜೂನ್‌ 5ರಂದು ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಅಲ್ಲದೇ ಮುಂದಿನ ಮೂರು ದಿನಗಳ ಕಾಲ ಆಕಾಶದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆ ಇದೆ. ಅಲ್ಲದೇ, ಉಷ್ಣಾಂಶವು ಗರಿಷ್ಠ 32°C ಇರಲಿದ್ದು, ಕನಿಷ್ಠ ಉಷ್ಣಾಂಶ 21°C ನಿಂದ 22°C ವರೆಗೆ ಇರಲಿದೆ. ಜೂನ್ 6 ಮತ್ತು 7 ರಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.
Free Bus Passes: ಸಿಎಂ ಆಗ್ತಿದ್ದಂತೆ ರಾಜ್ಯದ ಯುವಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಡಿಕೆಶಿ !ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್‌ ಪಾಸ್‌

ವಾಯುಭಾರ ಕುಸಿತ, ರೆಡ್‌ ಅಲರ್ಟ್‌

ಹವಾಮಾನ ವರದಿ ಪ್ರಕಾರ, ಪೂರ್ವ-ಮಧ್ಯ ಅರಬ್ಬಿ ಸಮುದ್ರ ಮಟ್ಟದಿಂದ ಸುಮಾರು 3.1 ಕಿ.ಮೀ ನಿಂದ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ (ಸೈಕ್ಲೋನ್‌) ಸೃಷ್ಟಿಯಾಗಿದೆ. ಅಲ್ಲದೇ ಇನ್ನೇನು ಮುಂಗಾರು ಪ್ರವೇಶ ಸಹ ಸನಿಹವಾಗುತ್ತಿರುವ ಕಾರಣ ಮಳೆ ಪ್ರಮಾಣ ನಿಧಾನವಾಗಿ ರಾಜ್ಯದಲ್ಲಿ ಹೆಚ್ಚಳವಾಗಲಿದೆ. ಜೊತೆಗೆ ನೈಋತ್ಯ ಮುಂಗಾರು ಕೇರಳ ಕರಾವಳಿ ಸನಿಹಕ್ಕೆ ಬಂದಿದೆ ಎನ್ನಲಾಗಿದೆ. ಇಂದು ಅಥವಾ ನಾಳೆ ಮುಂಗಾರು ಕೇರಳದ ಕರಾವಳಿಗೆ ಪ್ರವೇಶಸಲಿದೆ.

ಜೊತೆಗೆ ವಾಯುಭಾರ ಕುಸಿತದ ಹಿನ್ನಲೆ ಈ ಬಾರಿ ತಡವಾದರೂ ಸಹ ಕರ್ನಾಟಕಕ್ಕೆ ತೀವ್ರವಾಗಿ ಮುಂಗಾರು ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಅಲ್ಲದೇ, ವಾಯುಭಾರ ಕುಸಿತದ ಕಾರಣ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜೂನ್ 8, 9 ರಂದು ಅತಿ ಭಾರೀ ಮಳೆ (Heavy to Very Heavy Rain) ಬೀಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಜಿಲ್ಲಾವಾರು ಹವಾಮಾನ ವರದಿ:

ಬೆಂಗಳೂರು: 30-22
ಮಂಗಳೂರು: 29-26
ಉಡುಪಿ: 30-26
ಉತ್ತರ ಕನ್ನಡ: 31-27
ಮೈಸೂರು: 30-23
ಮಂಡ್ಯ: 31-23
ರಾಮನಗರ: 31-23
ಗದಗ: 33-23
ರಾಯಚೂರು: 37-27
ಬಾಗಲಕೋಟೆ: 35-24
ಬೆಳಗಾವಿ: 29-23
ಶಿವಮೊಗ್ಗ: 29-23
ಚಿಕ್ಕಬಳ್ಳಾಪುರ: 32-22
ಹಾವೇರಿ: 32-24
ಬಳ್ಳಾರಿ: 36-26
ಕಲಬುರಗಿ: 37-26
ಚಿತ್ರದುರ್ಗ: 32-23
ಮಡಿಕೇರಿ: 24-21
ಕೋಲಾರ: 32-22
ಹಾಸನ: 27-22
ತುಮಕೂರು: 32-22
ಯಾದಗಿರಿ: 38-27
ದಾವಣಗೆರೆ: 32-26
ಚಾಮರಾಜನಗರ: 32-23
ಚಿಕ್ಕಮಗಳೂರು: 32-22
ಹುಬ್ಬಳ್ಳಿ: 32-23
ಕೊಪ್ಪಳ: 34-24
ವಿಜಯಪುರ: 36-25

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi