ಪೆದ್ದಿ ಚಿತ್ರದ ವಿಮರ್ಶೆ
ನಟ: ರಾಮ್ಚರಣ್
ನಿರ್ದೇಶಕ: ಬುಚ್ಚಿಬಾಬು ಸಾನಾ
ನಿರ್ಮಾಪಕರು: ವೆಂಕಟ ಸತೀಶ್ ಕಿಲಾರು.
ಪಾತ್ರವರ್ಗ: ಶಿವರಾಜಕುಮಾರ್. ಜಾನವಿ ಕಪೂರ್, ಜಗಪತಿ ಬಾಬು, ದಿವೇಂದು, ಬೊಮನ್ ಇರಾನಿ, ರವಿ ಕಿಶನ್ .
ಸಂಗೀತ:ಎಆರ್ ರೆಹಮಾನ್
ಛಾಯಾಗ್ರಹಣ: ಆರ್.ರತ್ನವೇಲು
ತೆಲುಗು ಸೂಪರ್ ಸ್ಟಾರ್ ರಾಮ್ಚರಣ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪೆದ್ದಿ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. RRR ಸಿನಿಮಾ ನಂತರ ಬಿಡುಗಡೆ ಆಗಿದ್ದ ರಾಮ್ಚರಣ್ ತೇಜ ಅವರ ಗೇಮ್ ಚೇಂಜರ್ ಸೋತ ಬಳಿಕ ಇದೀಗ ಪೆದ್ದಿ ಚಿತ್ರದ ಮೇಲೆ ಅವರ ಅಭಿಮಾನಿಗಳಿಗೆ ಹಾಗೂ ತೆಲುಗು ಸಿನಿ ಪ್ರೇಕ್ಷಕರಲ್ಲಿ ದೊಡ್ಡಮಟ್ಟದ ನಿರೀಕ್ಷೆಗಳಿದ್ದವು. ಹಾಗಿದ್ದರೆ ಸಿನಿಮಾ ಹೇಗಿದೆ? ಚಿತ್ರ ನೋಡಿ ಪ್ರೇಕ್ಷಕರು ಏನಂತರಾ? ಪೆದ್ದಿ ಹಿಟ್ or ಪ್ಲಾಪ್? ಇಲ್ಲಿದೆ ಪೆದ್ದಿ ಸಿನಿಮಾದ ಮೊದಲ ರಿವ್ಯೂ.
ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರವು ಕ್ರೀಡೆಯ ಹಿನ್ನಲೆಯಿರುವ ಸಿನಿಮಾವಾಗಿದ್ದು, ಚಿತ್ರಕ್ಕೆ ಬುಚ್ಚಿಬಾಬು ಸಾನಾ ಆಕ್ಷನ್ ಕಟ್ ಹೇಳಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ ಈ ಚಿತ್ರದಲ್ಲಿ ಜಗಪತಿ ಬಾಬು ಮತ್ತು ಶಿವರಾಜ್ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ಸುಮಾರು 350 ಕೋಟಿ ಬಜೆಟ್ನಲ್ಲಿ ನಿರ್ಮಿಸಿದ್ದಾರೆ.
ಪೆದ್ದಿ ಸಿನಿಮಾ ರಿವ್ಯೂ:
ಆಂಧ್ರಪ್ರದೇಶದ ವಿಜಯನಗರದಲ್ಲಿ ಒಂದು ಬೆಟ್ಟದ ಕೆಳಗೆ ಒಂದು ಹಳ್ಳಿ ಇದೆ. ಅಲ್ಲಿ ನೂರಾರು ಜನರು ವಾಸಿಸುತ್ತಿದ್ದರೂ ಸಹ ಸರ್ಕಾರಿ ದಾಖಲೆಗಳಲ್ಲಿ ಆ ಹಳ್ಳಿಯನ್ನು ಗುರುತಿಸಲಾಗಿಲ್ಲ. ಅದಕ್ಕಾಗಿಯೇ ಆ ಹಳ್ಳಿಯಿಂದ ಬರುವವರನ್ನು ಸಹ ಕೀಳಾಗಿ ಕಾಣುತ್ತಾರೆ. ಪೆದ್ದಿ (ನಟ ರಾಮ್ ಚರಣ್) ಆ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಅವನು ಪ್ರತಿದಿನ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ವಿಜಯನಗರಕ್ಕೆ ಹೋಗುತ್ತಿರುತ್ತಾನೆ. ಹೆಸರಿಗೆ ಚಿಕ್ಕ ಪುಟ್ಟ ಕೆಲಸವಾದರೂ ಕ್ರಿಕೆಟ್ನಲ್ಲಿ ತನಗಾಗಿ ಹೆಸರು ಮಾಡಿದ ಆಟಗಾರ ಅದಕ್ಕಾಗಿಯೇ ವಿಜಯನಗರ ಮತ್ತು ಬೊಬ್ಬಿಲಿ ಕ್ರಿಕೆಟ್ ತಂಡಗಳು ಹರಾಜಿನಲ್ಲಿ ಪೆದ್ದಿಯನ್ನು ಖರೀದಿಸಲು ದೊಡ್ಡ ಸ್ಪರ್ಧಯೇ ನಡೆಯುತ್ತದೆ. ಆದರೆ ತನ್ನಿಷ್ಟದ ಕ್ರಿಕೆಟ್ ಅನ್ನು ತೊರೆದು ಕುಸ್ತಿಪಟುವಾಗುತ್ತಾನೆ. ಇಲ್ಲಿ ಪೆದ್ದಿಗೆ ಕುಸ್ತಿ ತರಬೇತಿ ನೀಡುವುದು ಗೌರ್ನಾಯ್ಡು (ಶಿವರಾಜ್ಕುಮಾರ್). ಕೊನೆಯಲ್ಲಿ ಪೆದ್ದಿ ಕುಸ್ತಿಯಲ್ಲಿ ಗೆಲ್ಲುತಾನಾ? ಸೋಲುತ್ತಾ? ಅವನು ತುಂಬಾ ಪ್ರೀತಿಸುತ್ತಿದ್ದ ಕ್ರಿಕೆಟ್ ಆಟವನ್ನು ಏಕೆ ತ್ಯಜಿಸಬೇಕಾಯಿತು? ಕುಸ್ತಿ ಮತ್ತು ಕ್ರಿಕೆಟ್ ಜೊತೆಗೆ ಅವನು ಇನ್ನೊಂದು ಆಟವನ್ನು ಏಕೆ ಆಡಬೇಕಾಯಿತು? ಆ ಆಟ ಯಾವುದು? ಪೆದ್ದಿಯ ನಿಜವಾದ ಗುರಿ ಏನಾಗಿತ್ತು? ಅದು ಈಡೇರಿತೇ ಅಥವಾ ಇಲ್ಲವೇ? ಎನ್ನುವುದೇ ಚಿತ್ರದ ಒನ್ ಲೈನ್ ರಿವ್ಯೂ.
Peddi Movie: ಪೆದ್ದಿ ಟಿಕೆಟ್ ಬುಕ್ಕಿಂಗ್ ಶುರು, ಬೆಂಗಳೂರಲ್ಲಿ ಎಷ್ಟಿದೆ ಟಿಕೆಟ್ ಬೆಲೆ? ಕನ್ನಡ ಶೋಗಳು ಎಷ್ಟು?
ಹೇಗಿದೆ ಶಿವರಾಜ್ಕುಮಾರ್ ಪಾತ್ರ?
ಇನ್ನು, ಪೆದ್ದಿ ಸಿನಿಮಾದಲ್ಲಿ ಕನ್ನಡ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯಿಸಿದ್ದು, ಚಿತ್ರದಲ್ಲಿ ಶಿವಣ್ಣ ಗೌರ್ನಾಯ್ಡು ಪಾತ್ರದಲ್ಲಿ ನಟಿಸಿದ್ದಾರೆ. ನಾಯ್ಡು (ಶಿವಣ್ಣ) ಪೆದ್ದಿಗೆ ಕುಸ್ತಿ ತರಬೇತಿ ನೀಡಿ, ಕುಸ್ತಿ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಕಳಿಸುತ್ತಾರೆ. ಶಿವರಾಜ್ ಕುಮಾರ್ ಅವರು ಕುಸ್ತಿ ತರಬೇತಿಗಾರನ ಪಾಯ್ರದಲ್ಲಿ ಅದ್ಭುತವಾಗಿ ನಟಿಸಿದ್ದು, ಈ ಚಿತ್ರದ ಮೂಲಕ ಶಿವರಾಜ್ಕುಮಾರ್ ಅವರು ತೆಲುಗು ಬೆಲ್ಟ್ನಲ್ಲಿ ಸಹ ತಮ್ಮದೇ ಹೊಸ ಛಾಪನ್ನು ಮೂಡಿಸಿದ್ದಾರೆ.
ಒಟ್ಟಾರೆಯಾಗಿ ಪೆದ್ದಿ ಸಿನಿಮಾ ಹೇಗಿದೆ?
ಇನ್ನು, ಒಟ್ಟಾರೆಯಾಗಿ ಪೆದ್ದಿ ಚಿತ್ರ ಹೇಗಿದೆ? ಸಿನಿಮಾ ನೋಡಬಹುದಾ ಎಂದು ನೋಡುವುದಾದರೆ, ನೀವು ರಾಮ್ಚರಣ್ ಅಭಿಮಾನಿ ಹಾಗೂ ಒಂದು ಕ್ರೀಡಾ ಹಿನ್ನಲೆಯ ಕಥೆ ನೋಡಬೇಕೆನಿಸದರೆ ಚಿತ್ರ ನಿಮಗಿಷ್ಟವಾಗುತ್ತದೆ. ಒಟ್ಟಾರೆಯಾಗಿ, ಒಂದು ಅದ್ಭುತ ಕಥೆ.. ಹಳ್ಳಿಯ ಹೃದಯಸ್ಪರ್ಶಿ ಕಥೆ ಚಿತ್ರದ ಜೀವಾಳವಾಗಿದೆ. ಇವೆಲ್ಲಾ ಚಿತ್ರದ ಪ್ಲಸ್ ಪಾಯಿಂಟ್ ಆದರೆ ಮೈನಸ್ ಎಂದು ನೋಡಿದರೆ, ಚಿತ್ರದಲ್ಲಿ ಕೆಲ ಸೀನ್ಗಳಲ್ಲಿ ಗ್ರಾಫಿಕ್ಸ್ ಕೊಂಚ ಕಡಿಮೆ ಕ್ವಾಲಿಟಿಯಲ್ಲಿ ಮೂಡಿಬಂದಿದೆ. ಅಲ್ಲದೇ ಚಿತ್ರ 3 ಗಂಟೆಗಳ ಕಾಲ ಇರುವುದರಿಂದ ಸ್ವಲ್ಪ ತಾಳ್ಮೆ ಮುಖ್ಯವಾಗಿದೆ. ಅಲ್ಲದೇ ಪೆದ್ದಿ ಸಿನಿಮಾವನ್ನು ಸಂಪೂರ್ಣವಾಗಿ ರಾಮ್ಚರಣ್ ಒಬ್ಬರೇ ಹೊತ್ತಿ ಕೊಂಡಂತೆ ಕಾಣುತ್ತದೆ. ಅಂದರೆ ಸಂಪೂರ್ಣ ಚಿತ್ರದ ಕೆಂದ್ರಬಿಂದುವಾಗಿ ಅವರಾಗಿದ್ದಾರೆ.
Read more news like this on kannada.timesnownews.com

