Dailyhunt Logo
  • Light mode
    Follow system
    Dark mode
    • Play Story
    • App Story
Zameer Ahmad Khan: ವೈರಲ್ ಆಡಿಯೋದಿಂದ ಸಚಿವ ಸ್ಥಾನಕ್ಕೆ ಆಪತ್ತು?; ಜಮೀರ್‌ ಅಹ್ಮದ್‌ ಖಾನ್‌ ಕೊಟ್ಟ ಸ್ಪಷ್ಟನೆ ಹೀಗಿದೆ..

Zameer Ahmad Khan: ವೈರಲ್ ಆಡಿಯೋದಿಂದ ಸಚಿವ ಸ್ಥಾನಕ್ಕೆ ಆಪತ್ತು?; ಜಮೀರ್‌ ಅಹ್ಮದ್‌ ಖಾನ್‌ ಕೊಟ್ಟ ಸ್ಪಷ್ಟನೆ ಹೀಗಿದೆ..

TimesNowSuddi 1 week ago

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದು, ಡಿ.ಕೆ.ಶಿವಕುಮಾರ್‌ ಅವರು ಸಿಎಂ ಹುದ್ದೆಗೆ ಏರಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಇದೇ ಹೊತ್ತಲ್ಲಿ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಜಮೀರ್‌ ಅಹ್ಮದ್‌ ಅವರದ್ದು ಎನ್ನಲಾದ ಆಡಿಯೋವೊಂದು ಭಾರಿ ವೈರಲ್‌ ಆಗಿ, ಕಾಂಗ್ರೆಸ್‌ ಪಾಳೆಯವನ್ನ ಅಲ್ಲೋಲ ಕಲ್ಲೋಲ ಮಾಡಿದೆ.

ಇನ್ನು ಅನೇಕರು ಈ ಆಡಿಯೋವನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಜಮೀರ್‌ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಏನಿದು ಆಡಿಯೋ..?

ಜಮೀರ್‌ ಅಹ್ಮದ್‌ ಮಾತಾಡಿದ್ದಾರೆ ಎನ್ನಲಾದ ಈ ಆಡಿಯೋವು ಸ್ವಲ್ಪ ದಿನಗಳ ಹಿಂದೆ ನಡೆದಿದ್ದ ದಾವಣಗೆರೆ ವಿಧಾನಸಭಾ ಚುನಾವಣೆ ಬಗ್ಗೆ ಇರುವಂಥದ್ದು. ದಾವಣಗೆರೆ ದಕ್ಷಿಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಆದರೆ ಇದು, ಅಲ್ಲಿ ಪ್ರಾಬಲ್ಯಹೊಂದಿರುವ ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು. ಜಮೀರ್‌ ಅಹ್ಮದ್‌ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಬೇಸರವನ್ನ ಬಹಿರಂಗವಾಗಿಯೇ ಹೊರಹಾಕಿದ್ದರು. ಇದೇ ಕಾರಣಕ್ಕೆ ಜಮೀರ್‌ ಅಹ್ಮದ್‌ ಮತ್ತು ಅವರ ಸಹಚರರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಮರ್ಥ್‌ ಅವರ ಪ್ರಚಾರವನ್ನೂ ನಡೆಸಿರಲಿಲ್ಲ. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಅವರು ಸಮರ್ಥ್‌ ಮನೆಗೆ ಭೇಟಿ ನೀಡಿ, ಬೆಂಬಲ ಸೂಚಿಸದ್ದರೂ, ಕೂಡ ಅಲ್ಲಿನ ಮುಸ್ಲಿಂ ಮುಖಂಡರು ಯಾರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿಯೇ ಇರಲಿಲ್ಲ.

ಇದೀಗ ಆ ಸಂದರ್ಭದ್ದು ಎನ್ನಲಾದ ಆಡಿಯೋ ಭಾರಿ ವೈರಲ್‌ ಆಗುತ್ತಿದೆ. ದಾವಣಗೆರೆ ಸ್ಥಳೀಯ ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಸಿರಾಜ್‌ ಜೊತೆ ಅವರು ಮಾತನಾಡಿದ್ದಾರೆ. ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಟಿಕೆಟ್‌ ನೀಡದ ಕಾರಣ, ಎಸ್‌ಡಿಪಿಐ (SDPI) ಪಕ್ಷದ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಅವರನ್ನ ಬೆಂಬಲಿಸುವಂತೆ ಆಡಿದ ಮಾತುಗಳು ಇವು.

ಅಪ್ಸರ್‌ ಅವರು ಕುಕ್ಕರ್‌ ಚಿಹ್ನೆಯಲ್ಲಿ ಚುನಾವಣೆಗೆ ನಿಂತಿದ್ದರು. ಸ್ಥಳೀಯ ಮುಖಂಡ ಮೊಹಮ್ಮದ್‌ ಸಿರಾಜ್‌ ಅವರು ಜಮೀರ್‌ ಅಹ್ಮದ್‌ ಬಳಿ ʼಎಲ್ಲ ಕಡೆಯೂ ಕುಕ್ಕರ್‌ ಜಾಸ್ತಿ ನಡೆಯುತ್ತಿದೆʼ ಎನ್ನುತ್ತಾರೆ. ಅದಕ್ಕೆ ಜಮೀರ್‌ ಅಹ್ಮದ್‌ ಕೂಡ ಖುಷಿಯಾಗಿ ʼಹೌದು..ಎಲ್ಲ ಕಡೆಗೂ ಕುಕ್ಕರ್‌ಗೇ ಮತ ಬೀಳ್ತಿದೆ, ಕಾಂಗ್ರೆಸ್‌ಗೆ ಮತಗಳು ಮೈನಸ್‌ ಆಗುವಂತೆ ಮಾಡಬೇಕುʼ ಎಂದು ಹೇಳೋದನ್ನ ಈ ಆಡಿಯೋದಲ್ಲಿ ಕೇಳಬಹುದು. ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್‌ ಸಿಗದ ಕಾರಣ ಜಮೀರ್‌ ಅಹ್ಮದ್‌ ಅವರು ಸಹ ಅಪ್ಸರ್‌ ಅವರಿಗೇ ಸಪೋರ್ಟ್‌ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದು ಈ ಆಡಿಯೋ ಕೇಳಿಸಿಕೊಂಡರೆ ಸ್ಪಷ್ಟವಾಗುತ್ತದೆ. ಸದ್ಯ ಇದಂತೂ ಕಾಂಗ್ರೆಸ್‌ ಪಾಳೆಯದಲ್ಲಿ ಗೊಂದಲ ಸೃಷ್ಟಿಸಿದೆ.‌

ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಪ್ರಮಾಣವಚನ ತುಂಬಾ ಸರಳ, ಹೇಗಿರಲಿದೆ "ಬಂಡೆ ಸಾಮ್ರಾಜ್ಯ" !

ಜಮೀರ್‌ ಅಹ್ಮದ್‌ ಹೇಳೋದೇನು?

ಇನ್ನು ಇದೀಗ ಸಾಮಾಜಿಕ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ, ಜಮೀರ್‌ ಅಹ್ಮದ್‌ ಅವರದ್ದು ಎನ್ನಲಾದ ಆಡಿಯೋ ಬಗ್ಗೆ ಸ್ವತಃ ಜಮೀರ್‌ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ʼಇದೊಂದು ನಕಲಿ ಆಡಿಯೋ. AI ತಂತ್ರಜ್ಞಾನ ಬಳಸಿ ಆಡಿಯೋ ರಚಿಸಲಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ. ಇದನ್ನು ಯಾರೂ ನಂಬಬಾರದು ಎಂದು ತಿಳಿಸಿದ್ದಾರೆ.

ಜಮೀರ್‌ ಅಹ್ಮದ್‌ ಅವರು ಸಿದ್ದರಾಮಯ್ಯ ಅವರ ಆಪ್ತರು. ಇದೀಗ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆ ಹೀಗಿದ್ದೊಂದು ಆಡಿಯೋ ವೈರಲ್‌ ಆಗಿದೆ. ಈ ಆಡಿಯೋ ವಿಚಾರ ಅವರ ಸಚಿವ ಸ್ಥಾನಕ್ಕೆ ಮುಳ್ಳಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿ ಕಾಣುತ್ತಿವೆ. ಇದೇ ವಿಚಾರ ಇಟ್ಟುಕೊಂಡು ಜಮೀರ್‌ ಅವರಿಗೆ ಮಂತ್ರಿ ಸ್ಥಾನ ಕೊಡದೆ ಇರಬಹುದು ಎಂಬ ಚರ್ಚೆಯೂ ಶುರುವಾಗಿದೆ. ಇನ್ನು ಜಮೀರ್‌ ಮಾತಾಡಿದ್ದೇ ಸತ್ಯ ಎಂದು ಸಾಬೀತಾದರೆ, ಪಕ್ಷದಿಂದ ಉಚ್ಚಾಟನೆಯೂ ಆಗಬಹುದು.

Read more news like this on kannada.timesnownews.com

Dailyhunt
Disclaimer: This content has not been generated, created or edited by Dailyhunt. Publisher: TimesNowSuddi