Dailyhunt Logo
  • Light mode
    Follow system
    Dark mode
    • Play Story
    • App Story
ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ ಬಗ್ಗೆ ಮಾತನಾಡಿದ ನಟ ಯಶ್‌

ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ ಬಗ್ಗೆ ಮಾತನಾಡಿದ ನಟ ಯಶ್‌

ಮುಂಬೈ: ಬಹು ನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ನಟ ಯಶ್ (Yash) ಇದೀಗ ಪ್ರಚಾರದಲ್ಲಿ ತೊಡಗಿದ್ದಾರೆ. ದೇಶಾದ್ಯಂತ ರಿಲೀಸ್‌ ಕಾಣುತ್ತಿರುವ ಯಶ್‌ ಅವರ ಸಿನಿಮಾಗೆ ಜನರು ಕಾಯುತ್ತಿದ್ದಾರೆ. ಇದರ ನಡುವೆ ಯಶ್‌ ಅವರು ಜನಪ್ರಿಯ ಟಿವಿ ಕಾರ್ಯಕ್ರಮ ʼಆಪ್‌ ಕಿ ಅದಾಲತ್‌ʼ ನಲ್ಲಿ ಭಾಗವಹಿಸಿದ್ದಾರೆ.

ಇದೇ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದರ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳಲ್ಲಿ ತಪ್ಪು ಉದಾಹರಣೆ ನೀಡದಿರುವ ಸಾರ್ವಜನಿಕ ವ್ಯಕ್ತಿಯಾಗಿ ತಮ್ಮ ಜವಾಬ್ದಾರಿಯ ಬಗ್ಗೆ ಅವರು ಗಮನ ಸೆಳೆದಿದ್ದಾರೆ.

ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದು "ತಪ್ಪು ಗ್ರಹಿಕೆ" ಯನ್ನು ಸೃಷ್ಟಿಸುತ್ತದೆ ಎಂಬ ಕಾರಣಕ್ಕಾಗಿ ತಾವು ಅಂತ್ಯಕ್ರಿಯೆಯಿಂದ ದೂರ ಉಳಿದಿರುವುದಾಗಿ ಹೇಳಿದರು. ಅಂತಹ ಕೃತ್ಯ ಮಾಡಿದರೆ ತಾನು ಹಾಜರಾಗುತ್ತೇನೆ ಎಂದು ಇತರರು ನಂಬಬಾರದು ಎಂದು ಯಶ್ ಹೇಳಿದರು.‌

2021 ರ ಫೆಬ್ರವರಿಯಲ್ಲಿ, ಕರ್ನಾಟಕದ ಮಂಡ್ಯ ಜಿಲ್ಲೆಯ ಕೊಡಿಡೊಡ್ಡಿ ಗ್ರಾಮದ 25 ವರ್ಷದ ಯಶ್ ಅಭಿಮಾನಿ ರಾಮಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಅವರು ಯಶ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕೆಂದು ತಮ್ಮ ಆಶಯವನ್ನು ವ್ಯಕ್ತಪಡಿಸಿ ನೋಟ್‌ ಬರೆದಿಟ್ಟಿದ್ದರು.

ಸಿದ್ದರಾಮಯ್ಯ ಅವರು ರಾಮಕೃಷ್ಣ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು, ಆದರೆ ಯಶ್ ಭಾಗವಹಿಸಲಿಲ್ಲ. ಈ ನಿರ್ಧಾರವನ್ನು ನೆನಪಿಸಿಕೊಳ್ಳುತ್ತಾ ಯಶ್, "ನಾನು ಹೀಗೆ ಮಾಡಿದರೆ, ಬಹಳಷ್ಟು ಜನರು ತಪ್ಪು ತಿಳಿಯಬಹುದು. ಈ ರೀತಿಯ ಕೃತ್ಯ ಮಾಡಿದರೆ ನಾನು ಬರುತ್ತೇನೆ ಎಂದು ಭಾವಿಸಬಹುದು ಎಂದು ನನಗೆ ಅನಿಸಿತು. ಆ ಮನಸ್ಥಿತಿಯೇ ತಪ್ಪು. ಅವರು ಸತ್ತ ನಂತರ ನಾನು ಅವರ ಅಂತ್ಯಕ್ರಿಯೆಗೆ ಹೋದರೆ ಏನಾಗುತ್ತದೆ? ನಾನು ಅದನ್ನು ಪ್ರೋತ್ಸಾಹಿಸುವುದು ಸರಿಯಲ್ಲ" ಎಂದು ಹೇಳಿದರು.

"ಅವರ ಸಾವಿನ ಬಗ್ಗೆ ನನಗೆ ಬೇಸರವಾಯಿತು, ಆದರೆ ನಾನು ಹೀಗೆ ಮಾಡಿದರೆ, ಬಹಳಷ್ಟು ಜನರು ಅದೇ ರೀತಿ ಮಾಡಬಹುದು. ಯಾರಾದರೂ, 'ನಾನು ಏನನ್ನಾದರೂ ಸಾಧಿಸಿದರೆ, ಯಶ್ ಬರಬೇಕು' ಎಂದು ಹೇಳಿದರೆ, ನಾನು ಹೋಗಲು ಪ್ರಯತ್ನಿಸುತ್ತೇನೆ. ಯಾರಾದರೂ ಏನನ್ನಾದರೂ ಸಾಧಿಸಿ ಅಲ್ಲಿಗೆ ಬರಲು ಕೇಳಿದರೆ, ನಾನು ಸಾಧ್ಯವಾದರೆ ಹೋಗಲು ಪ್ರಯತ್ನಿಸುತ್ತೇನೆ. ಆದರೆ ಈ ನಿರ್ದಿಷ್ಟ ವಿಷಯವನ್ನು ಪ್ರೋತ್ಸಾಹಿಸುವುದು ತಪ್ಪು ನಿದರ್ಶನ ಸ್ಥಾಪಿಸುತ್ತದೆ. ಅದಕ್ಕಾಗಿಯೇ ನಾನು ಹೋಗಲಿಲ್ಲ" ಎಂದು ಯಶ್‌ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani