Dailyhunt Logo
  • Light mode
    Follow system
    Dark mode
    • Play Story
    • App Story
Dharawad: ಮೋಡ ಬಿತ್ತನೆ ಮಾಡುವುದು ಅಗತ್ಯವಿದೆ : ಸಚಿವ ಜಾರ್ಕಿಹೊಳಿ

Dharawad: ಮೋಡ ಬಿತ್ತನೆ ಮಾಡುವುದು ಅಗತ್ಯವಿದೆ : ಸಚಿವ ಜಾರ್ಕಿಹೊಳಿ

ಧಾರವಾಡ : ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು ಶೀಘ್ರವೇ ಮೊಡ ಬಿತ್ತನೆ ಮಾಡಬೇಕಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರ್ಕಿಹೊಳಿ ಹೇಳಿದರು.

ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮೋಡ ಬಿತ್ತನೆ ಮಾಡುವುದು ತುಂಬಾ ಒಳ್ಳೆಯದು.

ಈ ಹಿಂದಿನ ವರ್ಷಗಳಲ್ಲಿ ಮಳೆ ಹೋದಾಗ ಮೋಡ ಬಿತ್ತನೆ ಮಾಡಿದ್ದರಿಂದ ಉತ್ತಮ ಮಳೆಯಾಗಿ ಬರಗಾಲ ದೂರವಾಗಿತ್ತು. ಮೋಡಗಳು ಇದ್ದಾಗಲೇ ಮೋಡ ಬಿತ್ತನೆ ಪ್ರಕ್ರಿಯೆ ಮಾಡಬೇಕಾಗುತ್ತದೆ ಎಂದರು.

ಇನ್ನೆರಡು ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಆರಂಭವಾಗುತ್ತದೆ. ಅದರಂತೆ ಈ ಭಾಗದಲ್ಲಿಯೂ ಮೊಡ ಬಿತ್ತನೆ ಮಾಡುವ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಸ್ಥಳಿಯವಾಗಿ ಇರುವ ತೊಂದರೆಗಳನ್ನು ಶಾಸಕರು ಬಗೆ ಹರಿಸಿದ್ದಾರೆ. ಅವಳಿ ನಗರಕ್ಕೆ ಮುಂದಿನ 8 ತಿಂಗಳಿಗೆ ಆಗುವಷ್ಟು ನೀರು ಮಲಪ್ರಭಾ ಅಣೆಕಟ್ಟೆಯಲ್ಲಿ ಸಂಗ್ರಹವಿದೆ ಎಂದರು.

ಮಳೆಯಿಂದಾಗಿ ಹಾಳಾಗಿರುವ ಜಿಲ್ಲೆಯ ರಸ್ತೆಗಳನ್ನು ಸುಧಾರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅಲ್ಲದೇ ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೂ ಸೂಕ್ತ ಕ್ರಮ ವಹಿಸುತ್ತೇವೆ ಎಂದು ಸಚಿವ ಜಾರ್ಕಿಹೊಳಿ ಹೇಳಿದರು.

ಸೂಪಾ-ಅಣ್ಣಿಗೇರಿ ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ವಿಚಾರವಾಗಿ ಈ ರಸ್ತೆ ಹಾದು ಹೋಗುವ ವಿಧಾನಸಭಾ ಕ್ಷೇತ್ರಗಳ ಶಾಸಕರ ಜೊತೆಗೆ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.

ಎಲ್ ಆಂಡ್ ಟಿ ಸಂಸ್ಥೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ತನ್ನ ಕಾಮಗಾರಿಗಳನ್ನುಸ ರಿಯಾಗಿ ಮಾಡಿಲ್ಲ. ಈ ಬಗ್ಗೆಯೂ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.

ಎಸ್ ಐ ಆರ್ ಗೆ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿ ಮಾಡಿಲ್ಲ. ಎಲ್ಲೋ ಕೆಲವು ಘಟನೆ ನಡೆದಿವೆ. ಅವರಿಗೂ ಮತದಾರರು ಬೇಕು. ನಮಗೂ ಮತದಾರರು ಬೇಕು.

- ಸತೀಶ್ ಜಾರ್ಕಿಹೊಳಿ, ಲೋಕೋಪಯೋಗಿ ಸಚಿವ.

Dailyhunt
Disclaimer: This content has not been generated, created or edited by Dailyhunt. Publisher: Udayavani