ದಾವಣಗೆರೆ: ರಾಜ್ಯಗಳು ಪಡೆಯುವ ಸಾಲದ ಮೊತ್ತವನ್ನು ನಿಗದಪಡಿಸುವುದು ಕೇಂದ್ರ ಸರ್ಕಾರ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿಗದಿಪಡಿಸಿದಷ್ಟೇ ಸಾಲವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (ಎಫ್ಆರ್ಬಿ) ಪ್ರಕಾರ ರಾಜ್ಯದ ಸಾಲ ಜಿಡಿಪಿಯ ಶೇ 25ರಷ್ಟು ಮೀರುವಂತಿಲ್ಲ.
ಇದನ್ನು ಆಧರಿಸಿ ಸಾಲ ಪಡೆಯುವ ಅರ್ಹತೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸುತ್ತದೆ. ರಾಜ್ಯ ಸರ್ಕಾರದ ಸಾಲ ಎಫ್ಆರ್ಬಿ ಮಿತಿಯ ವ್ಯಾಪ್ತಿಯ ಒಳಗಿದೆ ಎಂದು ಹೇಳಿದರು.

