Dailyhunt Logo
  • Light mode
    Follow system
    Dark mode
    • Play Story
    • App Story
ಕಿಷ್ಕಿಂಧಾ ಆಂಜನೇಯ ದರ್ಶನ ಪಡೆದ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಂಪತಿ

ಕಿಷ್ಕಿಂಧಾ ಆಂಜನೇಯ ದರ್ಶನ ಪಡೆದ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಂಪತಿ

ಗಂಗಾವತಿ: ಭಾರತದ ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಹಾಗೂ ಅವರ ಪತ್ನಿ ವಿಜೇತ ಪೆಂಡಾರ್ಕರ್ ಅವರು ಜು.3ರ ಶುಕ್ರವಾರ ಬೆಳಗ್ಗೆ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಗೆ ಭೇಟಿ ನೀಡಿ ಶ್ರೀ ಆಂಜನೇಯ ದರ್ಶನ ಪಡೆದರು.

ರಾಹುಲ್ ದ್ರಾವಿಡ್ ದಂಪತಿ ಬೆಟ್ಟದ 575 ಮೆಟ್ಟಿಲು ಹತ್ತಿ ಶ್ರೀಆಂಜನೇಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ದೇವಾಲಯದ ಕಮಿಟಿ ವತಿಯಿಂದ ಅರ್ಚಕರು ರಾಹುಲ್ ದ್ರಾವಿಡ್ ದಂಪತಿಗೆ ಸನ್ಮಾನಿಸಿ, ಶ್ರೀ ಆಂಜನೇಯನ ಭಾವಚಿತ್ರ ನೀಡಿ ಕೇಸರಿ ಶಾಲು ಹೊದಿಸಿ ದೇವಾಲಯದ ಪ್ರಸಾದ ವಿತರಿಸಿದರು.

ಈ ಸಂದರ್ಭ ಅಂಜನಾದ್ರಿ ಬೆಟ್ಟದಿಂದ ಹಂಪಿ ಹಾಗೂ ಸುತ್ತಲ 7 ಬೆಟ್ಟದ ಸೌಂದರ್ಯದ ಫೋಟೋ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳು ಸೆಲ್ಫಿ ತೆಗೆಸಿಕೊಂಡರು.

Dailyhunt
Disclaimer: This content has not been generated, created or edited by Dailyhunt. Publisher: Udayavani