Dailyhunt Logo
  • Light mode
    Follow system
    Dark mode
    • Play Story
    • App Story
ಸಿಂದೂರಕ್ಕೆ 1 ವರ್ಷ: ಸೇನಾ ಕಾರ್ಯಕ್ರಮದಲ್ಲಿ ಇಂದು ರಾಜನಾಥ್‌ ಭಾಗಿ

ಸಿಂದೂರಕ್ಕೆ 1 ವರ್ಷ: ಸೇನಾ ಕಾರ್ಯಕ್ರಮದಲ್ಲಿ ಇಂದು ರಾಜನಾಥ್‌ ಭಾಗಿ

ಹೊಸದಿಲ್ಲಿ: ಆಪರೇಷನ್‌ ಸಿಂದೂರದ ಮೊದಲ ವಾರ್ಷಿಕೋತ್ಸವ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಜೈಪುರದಲ್ಲಿ ನಡೆಯಲಿರುವ 2 ದಿನಗಳ ಜಂಟಿ ಕಮಾಂಡರ್‌ಗಳ ಸಮ್ಮೇಳನದಲ್ಲಿ ಗುರುವಾರ ಭಾಗವಹಿಸಲಿದ್ದಾರೆ.

ಈ ವೇಳೆ, ಭಾರತದ ರಾಷ್ಟ್ರೀಯ ಭದ್ರತಾ ಸವಾಲುಗಳು ಮತ್ತು ಸೇನೆಯ ಯುದ್ಧ ಸಿದ್ಧತೆಯ ಸಮಗ್ರ ಪರಿಶೀಲನೆ ನಡೆಸಲಿದ್ದಾರೆ.

ಈ ವೇಳೆ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾಣ್‌ ಕೂಡ ಉಪಸ್ಥಿತರಿರಲಿದ್ದಾರೆ. ಪಹಲ್ಗಾಮ್‌ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಉಗ್ರ ನೆಲೆಗಳ ಮೇಲೆ ಮೇ 7ರಿಂದ ಆಪರೇಷನ್‌ ಸಿಂದೂರ ಪ್ರಾರಂಭಿಸಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani