Dailyhunt
Thirthahalli: ಶಿಕಾರಿಗೆ ಇಟ್ಟಿದ್ದ ಕಚ್ಚಾ ಬಾಂ*ಬ್‌ ಸಿಡಿದು ಮಹಿಳೆಯ 5 ಬೆರಳು ಕಟ್

Thirthahalli: ಶಿಕಾರಿಗೆ ಇಟ್ಟಿದ್ದ ಕಚ್ಚಾ ಬಾಂ*ಬ್‌ ಸಿಡಿದು ಮಹಿಳೆಯ 5 ಬೆರಳು ಕಟ್

ತೀರ್ಥಹಳ್ಳಿ: ಹಂದಿ ಶಿಕಾರಿ ಮಾಡಲು ಇಟ್ಟಿದ್ದ ವಸ್ತು ಸಿಡಿದು ಮಹಿಳೆಯೊಬ್ಬರ ಕೈ ಐದು ಬೆರಳುಗಳು ಸಂಪೂರ್ಣ ತುಂಡಾಗಿರುವ ಘಟನೆ ನೆಂಟೂರಿನಲ್ಲಿ ನಡೆದಿದೆ.

ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ನೆಂಟೂರಿನ ಕಮಲಮ್ಮ (72 ) ಗಾಯಗೊಂಡ ಮಹಿಳೆ. ತೋಟದಲ್ಲಿ ಹಂದಿ ಶಿಕಾರಿ ಮಾಡಲು ಗೋಟು ಅಡಿಕೆ ಒಳಗೆ ಕಚ್ಚಾ ಬಾಂ*ಬ್ ಇಡಲಾಗಿತ್ತು.

ಅದನ್ನು ನಾಯಿ ಕಚ್ಚಿಕೊಂಡು ಮನೆಯ ಅಂಗಳಕ್ಕೆ ತಂದಿದೆ. ಅದನ್ನು ಕಮಲಮ್ಮ ಮುಟ್ಟಿದಾಗ ಏಕಾಏಕಿ ಸಿಡಿದಿದ್ದು ಕೈನ ಐದು ಬೆರಳುಗಳು ತುಂಡಾಗಿವೆ. ಕಾಲಿಗೆ ಗಾಯವಾಗಿದೆ. ಆಗುಂಬೆ ಠಾಣೆ ಪಿಎಸ್ ಐ ಶಿವನಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani