ಉಡುಪಿ, ಆ.4: ಬೆಳಪು ಹಾಗೂ ಪಲಿಮಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವೈದ್ಯರಾಗಿ ಸೇವೆ ಸಲ್ಲಿಸುತಿದ್ದ ಡಾ.ವೀಣಾ ನಾಯಕ್ ಅವರು ಇಂದು ಅಪರಾಹ್ನ ನಿಧನ ಹೊಂದಿದ್ದಾರೆ.
ಜಿಲ್ಲಾ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ರಮಾನಂದ ನಾಯಕ್ ಇವರ ಪತ್ನಿಯಾಗಿರುವ ಡಾ.ವೀಣಾ ನಾಯಕ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ಎಂ.ಬಾಲಕೃಷ್ಣ ನಾಯಕ್ರ ಪುತ್ರಿ. ಇವರು ಪತಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
