Dailyhunt

ದ.ಕ.ಜಿಲ್ಲೆ : ಕೋವಿಡ್ ವರದಿ ಇಲ್ಲ

ಮಂಗಳೂರು, ಸೆ.16: ರಾಜ್ಯದ ಸರಕಾರಿ ವೈದ್ಯಾಧಿಕಾರಿಗಳ ಅಸಹಕಾರ ಚಳವಳಿ ನಡೆದಿರುವುದರಿಂದ ಬುಧವಾರದ ಕೋವಿಡ್ ಬುಲೆಟಿನ್ ವರದಿ ಪ್ರಕಟವಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಬುಧವಾರ ಕೋವಿಡ್ ವರದಿಗಳ ಬುಲೆಟಿನ್ ಮಾತ್ರವೇ ಪ್ರಕಟವಾಗಿಲ್ಲ. ಆದರೆ ಕೊರೋನ ಸೋಂಕಿತರ ಚಿಕಿತ್ಸೆ ಮುಂದುವರಿದಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯ ಬೇಡಿಕೆಗಳನ್ನು ಸರಕಾರ ಈಡೇರಿಸುವ ಭರವಸೆ ನೀಡಿದೆ. ಯಾವುದೇ ಆರೋಗ್ಯ ಸೇವೆ ಸ್ಥಗಿತಗೊಂಡಿಲ್ಲ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ‌ಚಂದ್ರ ಕುಲಾಲ್ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Varthabharathi