Dailyhunt
Koppal | ʼಜಲದಿಂದ ಭೂವಾಸದತ್ತ : ವಿಕಾಸ ಮತ್ತು ಜೀವನ ಪ್ರೇರಣೆಯ ಪಯಣʼ ಉಪನ್ಯಾಸ ಕಾರ್ಯಕ್ರಮ

Koppal | ʼಜಲದಿಂದ ಭೂವಾಸದತ್ತ : ವಿಕಾಸ ಮತ್ತು ಜೀವನ ಪ್ರೇರಣೆಯ ಪಯಣʼ ಉಪನ್ಯಾಸ ಕಾರ್ಯಕ್ರಮ

ಕೊಪ್ಪಳ: ವಿ.ಎಂ.ವಿ.ವಿ ಸಂಘದ ವಿಜಯ ಮಹಾಂತೇಶ ಕೃಪಾಪೋಷಿತ ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಿಂದ "Animal Developmental Biology" ವಿಶೇಷ ಉಪನ್ಯಾಸ ಸರಣಿಯಡಿ ಏಪ್ರಿಲ್ 8ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎಸ್.ಜಿ.ವಿ.ವಿ.ಟಿ' ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರೂ ವಿಭಾಗಾಧ್ಯಕ್ಷರೂ ಆದ ಡಾ. ಪ್ರಶಾಂತ್ ಕೊಂಕಲ್ ಭಾಗವಹಿಸಿದರು.

"From Aquatic to Terrestrial Reproduction: An Evolutionary Perspective" ವಿಷಯದ ಮೇಲೆ ನಡೆದ ಉಪನ್ಯಾಸವು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಲ್ಲಿ ವಿಶೇಷ ಆಸಕ್ತಿಯನ್ನು ಮೂಡಿಸಿತು. ಜಲವಾಸದಿಂದ ಭೂವಾಸಕ್ಕೆ ಪ್ರಾಣಿಗಳ ಪ್ರಜನನ ವ್ಯವಸ್ಥೆಯಲ್ಲಿ ಸಂಭವಿಸಿದ ವಿಕಾಸಾತ್ಮಕ ಬದಲಾವಣೆಗಳನ್ನು ಅವರು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದರು.

ಡಾ. ಪ್ರಶಾಂತ್ ಕೊಂಕಲ್ ಅವರ ಸರಳ ಹಾಗೂ ಸ್ಪಷ್ಟ ನಿರೂಪಣಾ ಶೈಲಿ ವಿದ್ಯಾರ್ಥಿಗಳಿಗೆ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಯಿತು. ಈ ಉಪನ್ಯಾಸವು ಜ್ಞಾನವರ್ಧಕವಾಗಿದ್ದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವಲ್ಲಿ ಸಹಾಯಕವಾಯಿತು.

ಇದರೊಂದಿಗೆ, ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಲು ಅಗತ್ಯವಾದ ಪ್ರೇರಣಾದಾಯಕ ಆಲೋಚನೆಗಳನ್ನು ಹಂಚಿಕೊಂಡು, ಕಠಿಣ ಪರಿಶ್ರಮ, ಸಮಯದ ಮೌಲ್ಯ, ಗುರಿ ಸಾಧನೆಗೆ ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸದ ಮಹತ್ವವನ್ನು ಒತ್ತಿ ಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಆಯೋಜನಾ ಸಮಿತಿಯ ಪರವಾಗಿ ಡಾ. ಪ್ರಶಾಂತ್ ಕೊಂಕಲ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಇಂತಹ ಉಪಯುಕ್ತ ಉಪನ್ಯಾಸಗಳು ಮುಂದೆಯೂ ನಡೆಯಲಿವೆ ಎಂಬ ನಿರೀಕ್ಷೆ ವ್ಯಕ್ತಪಡಿಸಲಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Varthabharathi