'ಅಮೃತಧಾರೆ' ಧಾರಾವಾಹಿ ಇಂದು(ಜುಲೈ 03) ಸಾವಿರ ಸಂಚಿಕೆ ಪೂರೈಸಿದೆ. ಮೇ 29, 2023ರಲ್ಲಿ ಪ್ರಾರಂಭವಾದ ವಿನೂತನ ಕಥೆಯು ಕನ್ನಡಿಗರ ಮನ ಗೆದ್ದಿದೆ. 'ಗುಪ್ತಗಾಮಿನಿ' ಧಾರಾವಾಹಿ ನಂತರ ರಾಜೇಶ್ ನಟರಂಗ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದ್ದು, ವೀಕ್ಷಕರ ಹೃದಯ ಗೆಲ್ಲುವಲ್ಲಿ ಯಶ ಕಂಡಿದ್ದಾರೆ.
ನಟಿ ಛಾಯಾ ಸಿಂಗ್ ಅವರು ಕನ್ನಡ ಪರದೆಯಿಂದ ದೂರ ಉಳಿದಿದ್ದರು. ಹೆಚ್ಚಾಗಿ ಪರಭಾಷೆಯಲ್ಲಿ ಮಿಂಚುತ್ತಿದ್ದರು. ಅವರನ್ನ ಮರಳಿ ಕಿರುತೆರೆಗೆ ತಂದ ಹೆಗ್ಗಳಿಕೆ 'ಅಮೃತಧಾರೆ' ಧಾರಾವಾಹಿ ತಂಡದ್ದು. ಸಾವಿರದ ಸುಸಂದರ್ಭದಲ್ಲಿ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.
ನಿರ್ಮಾಣ ಮತ್ತು ನಿರ್ದೇಶನ
ಕಥೆ
ಛಾಯಾ-ರಾಜೇಶ್ ಅಣ್ಣಾತಂಗಿ ಬಂಧ!
'ಅಮೃತಧಾರೆ' ಧಾರಾವಾಹಿ ಶೂಟಿಂಗ್ ಸೆಟ್ಗೆ ಮೊದಲ ದಿನ ಕಾಲಿಟ್ಟ ಛಾಯಾ ಸಿಂಗ್ ಅವರು ರಾಜೇಶ್ ನಟರಂಗ ಅವರನ್ನ ನೋಡುತ್ತಿದ್ದಂತೆ, 'ಅಣ್ಣಾ' ಅಂತ ಓಡಿ ಮಾತ್ನಾಡಿಸುವುದಕ್ಕೆ ಹೋದರಂತೆ. ಆಗ ರಾಜೇಶ್ ನಟರಂಗ ಅವರು ಮಾತನ್ನ ಅರ್ಧಕ್ಕೆ ತಡೆದು…"ನೋಡಮ್ಮ ನಾವು ಇಲ್ಲಿ ಗಂಡ-ಹೆಂಡತಿಯಾಗಿ ನಟಿಸುತ್ತಿದ್ದೀವಿ. ಸೆಟ್ನಲ್ಲಿ ಮಾತ್ರ ಅಣ್ಣಾ ಅಂತ ಕರೀಯ ಬೇಡಮ್ಮ.ರೋಮ್ಯಾಂಟಿಕ್ ದೃಶ್ಯಗಳನ್ನ ಮಾಡುವುದಕ್ಕೆ ಕಷ್ಟ ಆಗುತ್ತೆ ಅಂತ ಹೇಳಿದ್ದರಂತೆ."ಈ ಬಗ್ಗೆ ಸ್ವತಃ ರಾಜೇಶ್ ನಟರಂಗ ಅವರು ಹಲವು ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ 'ಜೋಡಿ ನಂ-1' ಕಾರ್ಯಕ್ರಮದಲ್ಲೂ ಈ ವಿಚಾರ ಹೇಳಿ ನಕ್ಕಿದ್ದರು.
ಅಂದ್ಹಾಗೆ, ದಶಕದ ಹಿಂದೆ 'ಈ ಟಿವಿ'(ಈಗಿನ ಕಲರ್ಸ್ ಕನ್ನಡ) ಕನ್ನಡ ವಾಹಿನಿಯ ಧಾರಾವಾಹಿವೊಂದರಲ್ಲಿ ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರು ಅಣ್ಣಾ-ತಂಗಿಯಾಗಿ ನಟಿಸಿದ್ದರು. ಅದೇ ಭಾವನೆ ಇವತ್ತಿಗೂ ಇಬ್ಬರ ನಡುವೆ ಹಾಗೇ ಇದೆ.
ಮಿಂಚು-ಆಕಾಶ್
'ಅಮೃತಧಾರೆ' ಧಾರಾವಾಹಿಯ ಸಾವಿರ ಸಂಚಿಕೆಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪಾತ್ರಗಳನ್ನ ಸಂಭ್ರಮಿಸುತ್ತಿದ್ದಾರೆ.

