Dailyhunt Logo
  • Light mode
    Follow system
    Dark mode
    • Play Story
    • App Story
'ಭಾಗ್ಯಲಕ್ಷ್ಮೀ' ಶೂಟಿಂಗ್‌ ಸೆಟ್‌ನಲ್ಲಿ ನಟಿ ಸುಷ್ಮಾ ರಾವ್‌ ಎಡವಟ್ಟು: ಇದೊಂದು ಸಖತ್ ಫನ್ನಿ ಇನ್ಸಿಡೆಂಟ್‌!

'ಭಾಗ್ಯಲಕ್ಷ್ಮೀ' ಶೂಟಿಂಗ್‌ ಸೆಟ್‌ನಲ್ಲಿ ನಟಿ ಸುಷ್ಮಾ ರಾವ್‌ ಎಡವಟ್ಟು: ಇದೊಂದು ಸಖತ್ ಫನ್ನಿ ಇನ್ಸಿಡೆಂಟ್‌!

Vijay Karnataka 1 month ago

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಇಷ್ಟುದಿನ ಟೈಟಲ್‌ ಕಾರ್ಡ್‌ನಲ್ಲಿ ತಾಂಡವ್‌, ಭಾಗ್ಯ ಮತ್ತು ಕುಸುಮಾ ಅತ್ತೆ ಕಾಣಿಸಿಕೊಳ್ತಿದ್ದರು. ಸ್ವಲ್ಪ ದಿನ ಸಿಂಗಲ್‌ ಆಗಿಯೇ ಭಾಗ್ಯ ರಾರಾಜಿಸಿದ್ದುಂಟು. ಸದ್ಯ ಭಾಗ್ಯ ಪಕ್ಕದಲ್ಲಿ ಆದಿ ಬಂದಿದ್ದಾನೆ.

ಈ ಜೋಡಿ ಒಂದು ಮಾಡೋಕೆ ಕುಸುಮಾ ಅತ್ತೆನೂ ಟೈಟಲ್‌ ಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟು ದಿನ ಅಭಿಮಾನಿಗಳು ಕಾಯುತ್ತಿದ್ದ 'ಆಗ್ಯಾ'(ಆದಿ ಭಾಗ್ಯ ಜೋಡಿಗೆ ಫ್ಯಾನ್ಸ್‌ ಕೊಟ್ಟ ಹೆಸರು ಹ್ಯಾಶ್‌ ಟ್ಯಾಗ್‌ ಆಗ್ಯಾ AAGYA) ಕಲ್ಯಾಣೋತ್ಸವ ನಡೆದಿದೆ. ಆದಿ ಮನೆಗೆ ಹೋಗ್ತಿದ್ದಾಗೆ, ಹೊಸ ವರಸೆ ಶುರುವಾಗಿದೆ.

ಕನ್ನಿಕಾ ಕಾಟ ಶುರು!

ಆದಿ ಮನೆ ಹೊಸ್ತಿಲು ದಾಟುತ್ತಿದ್ದಂತೆ ಭಾಗ್ಯಾಗೆ ಕನ್ನಿಕಾ ಕಾಟ ಶುರುವಾಗಿದೆ. ಮಾವ ಭಾಗ್ಯ ಸೀರೆ ಕೊಡ್ತಾನೆ. ಹೊಸ ಸೀರೆ ಮೇಲೆ ಜ್ಯೂಸ್‌ ಚೆಲ್ಲಿ, ಅಸೂಯೆ ಹೊರ ಹಾಕಿದ್ದಾಳೆ ಕನ್ನಿಕಾ. ಪ್ರೋಮೋದಲ್ಲಿ ಈ ದೃಶ್ಯನ ನೀವು ನೋಡಿರ್ತಿರ. ಈ ದೃಶ್ಯದ ಶೂಟಿಂಗ್‌ನಲ್ಲಿ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್‌ ಮತ್ತು ಕನ್ನಿಕಾ ಪಾತ್ರಧಾರಿ ಸುಕೃತಾ ನಾಗ್‌ ಭಾಗಿಯಾಗಿರ್ತಾರೆ. ಕಟ್‌ ಎಂದ ತಕ್ಷಣ ತಮಾಷೆ ಮಾಡಲು ಹೋಗಿ ಭಾಗ್ಯ ಆದಿ ಪೇಟ ಕಿತ್ತಾಕಿದ್ದಾರೆ. ಈ ದೃಶ್ಯವನ್ನ ಸೆಟ್‌ ಹುಡುಗ ಓರ್ವರು ವಿಡಿಯೋ ಮಾಡಿದ್ದಾರೆ. ಸಖತ್‌ ಫನ್‌ ಇದೆ.

ಸೆಟ್‌ ಹುಡುಗರ ಕೆಲಸಕ್ಕೆ ಭಾಗ್ಯ ಪ್ರಶಂಸೆ

ಶೂಟಿಂಗ್‌ ಸೆಟ್‌ನಲ್ಲಿ ಟೆಕ್ನಿಶಿಯನ್ಸ್‌ ಬಹಳ ಕಷ್ಟಪಟ್ಟು ದುಡಿಯುತ್ತಾರೆ. ಆಕ್ಷನ್‌-ಕಟ್‌ ನಡುವೆ ಮೈ ಮುರಿದು ಕೆಲಸ ಮಾಡುವ ತಂತ್ರಜ್ಞರನ್ನ ಪರಿಚಯಿಸಿದ್ದಾರೆ ನಟಿ ಸುಷ್ಮಾ ರಾವ್‌. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯಲ್ಲಿ ಈ ಕುರಿತು ವಿಡಿಯೋ ಹಂಚಿಕೊಳ್ಳುವ ಮೂಲಕ ತೆರೆಮರೆ ಕಾಯಕ ಮಾಡುವ ನಿಜವಾದ ಕಲಾವಿದರಿಗೆ ಕೃತಜ್ಙತೆ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೊಸ ಅಧ್ಯಾಯಕ್ಕೆ ವೀಕ್ಷಕರ ಪ್ರಾರ್ಥನೆ

ಭಾಗ್ಯಲಕ್ಷ್ಮೀ ಸದ್ಯ ಓಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅತ್ತೆ-ಸೊಸೆ ಬಾಂಡಿಂಗ್‌ ಬಗ್ಗೆ ಬಹಳ ಚರ್ಚೆ ಆಗ್ತಿದೆ. ಬಹಳ ಕನೆಕ್ಟ್‌ ಆಗಿದ್ದಾರೆ ಅಭಿಮಾನಿಗಳು. ಹಾಗೇ ಇನ್ಮುಂದೆ ಆದ್ರು ಭಾಗ್ಯ ಬದುಕು ಬಂಗಾರವಾಗಲಿ ಎಂದು ವೀಕ್ಷಕರು ಹಾರೈಸುತ್ತಿದ್ದಾರೆ. ವೀಕ್ಷಕರು ಬಯಸಿದಂತೆ ನಿಜಕ್ಕೂ ಸ್ಟೋರಿ ಹಾಗೆ ನಡೆಯುತ್ತಾ? ತಾಂಡವ್‌ ಮುಂದಿನ ಯೋಜನೆ ಏನು? ತಿಳಿಯೋಕೆ 'ಭಾಗ್ಯಲಕ್ಷ್ಮೀ' ಪ್ರತಿದಿನ ರಾತ್ರಿ 7 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ವೀಕ್ಷಿಸಬಹುದು.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka