ದುಃಖಕ್ಕೆ ಎಂದಿಗೂ ಕೊನೆಯಿರದು. ದುಃಖವು ನಮ್ಮ ಜೀವನದಲ್ಲಿ ಪದೇ ಪದೇ ಮರುಕಳಿಸುವಂತಹ ಭಾವನೆಯಾಗಿದೆ. ದುಃಖದಲ್ಲಿ ವ್ಯಕ್ತಿಯ ನೋವಿನ ಒಂದು ಭಾಗವಾಗಿದೆ. ಸಂಪತ್ತಿಗಾಗಿ ದುಃಖಿಸುತ್ತಿರುವ ವ್ಯಕ್ತಿಗೆ ಸಂಪತ್ತು ದೊರೆತಾಗ ದುಃಖವು ಮಾಸಬಹುದು. ಪ್ರೀತಿಪಾತ್ರರಿಂದ ಬೇರ್ಪಟ್ಟಾಗ ಅನುಭವಿಸಿರುವ ದುಃಖ ಅವರನ್ನು ಮರಳಿ ಸೇರಿದಾಗ ಮಾಯವಾಗಬಹುದು.
ಆದರೆ, ಸಮಯ ಕಳೆದಂತೆ ಈ ದುಃಖಗಳು ಮರುಕಳಿಸಬಹುದು. ಪಡೆದ ಸಂಪತ್ತು, ಪ್ರೀತಿ ಪಾತ್ರರಿಂದ ಬೇರ್ಪಡುವಿಕೆ ಎಲ್ಲವೂ ಅವರಿಗೆ ದುಃಖವನ್ನು ಮರಳಿ ತರಬಹುದು. ದುಃಖಕ್ಕೆ ಅಂತ್ಯವೆಂಬುದಿಲ್ಲ. ಅದು ಪದೇ ಪದೇ ನಮ್ಮ ಕಣ್ಣಾಲೆಯನ್ನು ಒದ್ದೆಯಾಗಿಸುತ್ತಲೇ ಇರುತ್ತದೆ.
ಈ ಬ್ರಹ್ಮಾಂಡದಲ್ಲಿ ಸಂತೋಷವನ್ನು ಬಯಸುವಂತಹ ಪ್ರತಿಯೊಬ್ಬ ವ್ಯಕ್ತಿಯು ಮೂರು ರೀತಿಯ ದುಃಖಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಮ್ಮ ಧರ್ಮಗ್ರಂಥಗಳು ಮೂರು ರೀತಿಯ ದುಃಖದ ಬಗ್ಗೆ ಹೇಳಿದ್ದು, ಅವುಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ನಿರ್ಮೂಲನೆಯನ್ನು ಮಾಡಿಕೊಳ್ಳಬಹುದಾಗಿದೆ. ಧರ್ಮಗ್ರಂಥಗಳು ಹೇಳಿರುವ 3 ಬಗೆಯ ದುಃಖಗಳನ್ನು ನೀವು ಈ ಲೇಖನದಲ್ಲಿ ನೋಡಬಹುದಾಗಿದೆ.
ಧರ್ಮಗ್ರಂಥಗಳಲ್ಲಿ ಹೇಳಲಾದ 3 ವಿಧದ ದುಃಖಗಳಿವು:
1. ಆಧ್ಯಾತ್ಮಿಕ ದುಃಖ:
ಆಧ್ಯಾತ್ಮಿಕ ದುಃಖವೆಂಬುದು ಕೇವಲ ಮನಸ್ಸಿನಲ್ಲಿ ಅಥವಾ ದೇಹದಲ್ಲಿ ಮಾತ್ರ ಸಂಭವಿಸುವುದಿಲ್ಲ. ಬದಲಾಗಿ, ಇಂತಹ ದುಃಖವು ದೇಹ ಮತ್ತು ಮನಸ್ಸು ಎರಡರಲ್ಲೂ ಉದ್ಭವಿಸುವಂತಹ ದುಃಖವಾಗಿದೆ. ಆಧ್ಯಾತ್ಮಿಕ ದುಃಖಕ್ಕೆ ಉತ್ತಮ ಉದಾಹರಣೆಯಾಗಿ ನಾವು ಅನಾರೋಗ್ಯವನ್ನು, ವೃದ್ಧಾಪ್ಯವನ್ನು, ಮಾನಸಿಕ ಆತಂಕವನ್ನು, ಕಾಮವನ್ನು, ಕೋಪವನ್ನು, ದುರಾಸೆಯನ್ನು ಸೇರಿದಂತೆ ಇತ್ಯಾದಿ ವಿಚಾರಗಳನ್ನು ತೆಗೆದುಕೊಳ್ಳಬಹುದಾಗಿದೆ. ಮಾನವರು ತಮ್ಮ ದೇಹ ಮತ್ತು ಇಂದ್ರಿಯಗಳ ಮೂಲಕ ದೈಹಿಕ ಕಾಯಿಲೆ ಮತ್ತು ಮಾನಸಿಕ ದುಃಖವನ್ನು ಅನುಭವಿಸುತ್ತಾರೆ. ಅದನ್ನು ಗುಣಪಡಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.
2. ದೈಹಿಕ ದುಃಖ:
ಧರ್ಮಗ್ರಂಥದಲ್ಲಿ ಹೇಳಲಾದ ಎರಡನೇ ದುಃಖವೆಂದರೆ ಅದುವೇ ದೈಹಿಕ ದುಃಖವಾಗಿದೆ. ಇದು ಮಾನವ ದೇಹದ ಮೇಲೆ ಪರಿಣಾಮವನ್ನು ಬೀರುವಂತಹ ದುಃಖವಾಗಿದೆ. ಬಾಹ್ಯ ಜಗತ್ತಿನಲ್ಲಿರುವ ಕಳ್ಳರು, ಹಾವುಗಳು, ಪರಭಕ್ಷಕರು, ಹುಲಿಗಳು ಮುಂತಾದ ಕ್ರೂರ ಜೀವಿಗಳಿಂದ ಉಂಟಾಗುವ ದುಃಖವನ್ನು ದೈಹಿಕ ದುಃಖಗಳು ಎಂದು ಕರೆಯಲಾಗುತ್ತದೆ.
3. ದೈವಿಕ ದುಃಖ:
ದೈವಿಕ ದುಃಖವು ಧರ್ಮಗ್ರಂಥದಲ್ಲಿ ಹೇಳಲಾದ ಮೂರನೇ ದುಃಖವಾಗಿದೆ. ವಿಧಿಯಿಂದ ಉಂಟಾಗುವ ದುಃಖವನ್ನು ದೈವಿಕ ದುಃಖವೆಂದು ಕರೆಯಲಾಗುತ್ತದೆ. ಈ ದುಃಖವು ಮಾನವರು ಸುಲಭವಾಗಿ ಜಯಿಸಲು ಸಾಧ್ಯವಾಗದ ಬಾಹ್ಯ ಶಕ್ತಿಗಳಿಂದ ಬರುತ್ತದೆ. ಉದಾಹರಣೆಗೆ ನೈಸರ್ಗಿಕ ವಿಕೋಪಗಳು, ಪ್ರವಾಹಗಳು, ಭೂಕಂಪಗಳು, ಬರಗಳು, ಮಿಂಚುಗಳು ಅಥವಾ ವಿಧಿಯಿಂದ ಉಂಟಾಗುವ ದುಃಖ ಅಂದರೆ ಬೆಂಕಿ, ಗಾಳಿ ಇತ್ಯಾದಿ ನೈಸರ್ಗಿಕ ಅಂಶಗಳಿಂದ ಉಂಟಾಗುವ ದುಃಖವೆಂದು ಪರಿಗಣಿಸಲಾಗುತ್ತದೆ. ಈ ದುಃಖಗಳನ್ನು ನಮ್ಮಿಂದ ಪರಿಹಾರ ಮಾಡಲು ಸಾಧ್ಯವಿಲ್ಲ.
ಈ 3 ರೀತಿಯ ದುಃಖಗಳಿಂದ ಮುಕ್ತರಾಗುವುದು ಹೇಗೆ.?
ಮಾನಸಿಕ, ದೈಹಿಕ ಹಾಗೂ ದೈವಿಕ ಈ 3 ರೀತಿಯ ದುಃಖಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಹೇಗೆ ಎಂದು ನೀವು ಕೇಳಬಹುದು. ಇದಕ್ಕಾಗಿ ಒಬ್ಬ ವ್ಯಕ್ತಿಯು ದೇವರ ಆಶ್ರಯವನ್ನು, ಸಜ್ಜನರ ಸಹವಾಸವನ್ನು, ಸ್ವಯಂ ಜ್ಞಾನವನ್ನು, ಭಕ್ತಿಯನ್ನು ಹಾಗೂ ನಿಸ್ವಾರ್ಥ ಕ್ರಿಯೆಯ ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಆತ್ಮದ ನಿಜವಾದ ಸ್ವರೂಪದ ಜ್ಞಾನವನ್ನು ಪಡೆದ ನಂತರ, ಒಬ್ಬ ವ್ಯಕ್ತಿಯು ಬಾಹ್ಯ ಸಂದರ್ಭಗಳಿಂದ ಕಡಿಮೆ ತೊಂದರೆಗೊಳಗಾಗುತ್ತಾನೆ ಮತ್ತು ಆಂತರಿಕ ಶಾಂತಿಯನ್ನು ಅನುಭವಿಸುತ್ತಾನೆ. ಸ್ವಯಂ ಜ್ಞಾನ ಮತ್ತು ದೇವರ ಆಶ್ರಯವನ್ನು ಪಡೆದವನಿಗೆ, ಮೂರು ರೀತಿಯ ದುಃಖಗಳು ಸಹ ಶಾಂತಿಯಾಗಿ ರೂಪಾಂತರಗೊಳ್ಳಲು ಪ್ರಾರಂಭಿಸುತ್ತವೆ.
ದುಃಖವು ಒಂದಲ್ಲ ಒಂದು ರೀತಿಯಲ್ಲಿ ಜೀವಿಗಳ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ದುಃಖದಿಂದ ಪಾರಾಗುವುದು ಸುಲಭವೆಂದು ಅಂದುಕೊಳ್ಳುವುದು ತಪ್ಪಾಗಿದೆ. ದುಃಖವನ್ನು ಸ್ವಯಂ ಕ್ರಿಯೆಯ ಮೂಲಕ ನಿಯಂತ್ರಣಕ್ಕೆ ತೆಗೆದುಕೊಂಡು ಬರಬಹುದಾಗಿದೆ.

