ಬೆಂಗಳೂರು: ಹಿರಿಯ ಪತ್ರಕರ್ತರಾದ ಪ್ರಹ್ಲಾದ್ ಕುಳಲಿ (87) ಅವರು ಇಂದು (ಮೇ 7) ಬೆಳಗ್ಗೆ 8.45ಕ್ಕೆ ಕೆಂಗೇರಿಯ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ್ದ ಹಾಗೂ ದಿ. ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅಪಾರ ಅನುಭವ ಹೊಂದಿದ್ದರು.
ಪ್ರಹ್ಲಾದ್ ಕುಳಲಿ ಅವರ ಅಂತ್ಯಕ್ರಿಯೆ ಮಧ್ಯಾಹ್ನ ಒಂದೂವರೆ ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪತ್ರಕರ್ತರಾಗಿದ್ದ ಆರಂಭಿಕ ದಿನಗಳು
ಬೆಂಗಳೂರು ಆಕಾಶವಾಣಿ- ದೂರದರ್ಶನದಲ್ಲಿಯೂ ಕೆಲಸ
ಆದರೂ ಬರವಣಿಗೆ ನಿಲ್ಲಲಿಲ್ಲ. ಉತ್ತರಾಧಿಮಠದ ಶ್ರೀ ಸುಧಾ ಆಧ್ಯಾತ್ಮಿಕ ಮಾಸಿಕದಲ್ಲಿ 3 ವರ್ಷ ಸೇವೆ, ಕೆಎನ್ಎನ್, ಒರಿಯಂಟಲ್ ನ್ಯೂಸ್, ಕನ್ನಡ ಭಾರತಿ, ಕನ್ನಡ ವಾರ್ತಾ ಸಂಸ್ಥೆಗಳಲ್ಲಿ ಸುದ್ದಿ ಸಂಪಾದಕನಾಗಿ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲದೆ, ಬೆಂಗಳೂರು ಆಕಾಶವಾಣಿ, ಬೆಂಗಳೂರು ದೂರದರ್ಶನ ಕೇಂದ್ರಗಳಲ್ಲಿ ಕ್ಯಾಷುವಲ್ ಎಡಿಟರ್ ಆಗಿ 13 ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದರು.
ವಿಶೇಷ ಜನಮನ್ನಣೆಗಳಿಸಿದ ವರದಿಗಳು
ಪ್ರಶಸ್ತಿಗಳು
ಪ್ರಹ್ಲಾದ್ ಕುಳಲಿ ಅವರಿಗೆ ಅಪಾರ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. 2 ಬಾರಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಬಂದಿದೆ. ಬೆಂಗಳೂರು ವರದಿಗಾರರ ಕೂಟದ ವಾರ್ಷಿಕ ಪ್ರಶಸ್ತಿಯೂ ಎರಡು ಬಾರಿ ಲಭಿಸಿದೆ. ಇಷ್ಟೇ ಅಲ್ಲದೆ ಸನ್ಮಾನಗಳು ಅವರಿಗೆ ಸಂದಿವೆ.ವರದಿಗಾರರ ಒಕ್ಕೂಟದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ
ವರದಿಗಾರರ ವೃತ್ತಿಸಂಹಿತೆ ಪಾಲನೆ, ಅವರ ಆತ್ಮಗೌರವ ಹಾಗೂ ಹಕ್ಕುಬಾದ್ಯತೆ ರಕ್ಷಣೆಗಾಗಿ ಬೆಂಗಳುರು ವರದಿಗಾರರ ಕುಟ (ಬಿಅರ್fಜಿ) ಸ್ಥಾಪನೆಯಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು.
ವಿಶೇಷ ಸೇವೆ
ಡಿಸಿಎಂ ಸಂತಾಪ:
ಇನ್ನು ಹಿರಿಯ ಪತ್ರಕರ್ತ ಪ್ರಹ್ಲಾದ್ ಕುಳಲಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ, ""ಗಾಂಧೀಜಿ ವಿಚಾರ ಧಾರೆಗಳ ಪ್ರತಿಪಾದಕರಾಗಿ, ಮಾಧ್ಯಮ ಲೋಕದಲ್ಲಿಯೂ ಅದೇ ತತ್ವಗಳನ್ನುಅಳವಡಿಸಿಕೊಂಡು ಬದುಕಿದ ಪ್ರಹ್ಲಾದ್ ಕುಳಲಿ ಅವರ ನಿಧನ ತೀವ್ರ ದು:ಖ ತಂದಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 4 ದಶಕಗಳ ಕಾಲದ ಅವರ ಸೇವೆಯನ್ನು ನಾಡು ಸ್ಮರಿಸಲಿದೆ" ಎಂದು ಉಲ್ಲೇಖಿಸಿದ್ದಾರೆ.
"ಪ್ರಹ್ಲಾದ ಕುಳಲಿ ಅವರ ಅಗಲಿಕೆಯಿಂದ ಕನ್ನಡ ಪತ್ರಿಕೋದ್ಯಮ ವಿಚಾರವಂತ, ಸಮಾಜದ, ಜನಸಾಮಾನ್ಯರ ಪರವಾಗಿ ಕಾಳಜಿ ಹೊಂದಿದ್ದ ಮತ್ತು ಮೌಲ್ಯಾಧಾರಿತ ದನಿಯನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ. ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

